Wayanad landslide: 7 ಮಂದಿಯನ್ನು ಉಳಿಸಿ ಪಾರಾಗಿ ಬಂದ ಗುಂಡ್ಲುಪೇಟೆ ವೃದ್ಧ
ಚಾಮರಾಜನಗರ, ಜುಲೈ, 1: ವಯನಾಡು ದುರಂತದಲ್ಲಿ ಹಲವು ಮನಕಲುಕುವ ವಿಚಾರಗಳು, ಸಿನಿನೀಯ ಶೈಲಿಯಂತೆ ಬದುಕುಳಿದವರ ಕಥೆಗಳು ಬೆಳಕಿಗೆ ಬರುತ್ತಿದ್ದು, ಅದೇ ರೀತಿ ಭೂ ಕುಸಿತದಲ್ಲಿ ಗುಂಡ್ಲುಪೇಟೆ ವೃದ್ಧರೊಬ್ಬರು ಪಾರಾಗಿ ಬಂದಿದ್ದಾರೆ. ಜೊತೆಗೆ, 7 ಮಂದಿಯನ್ನು ಉಳಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬುವರು ಕೇರಳದ ದುರಂತದಲ್ಲಿ ಸಿಲುಕಿ ಕೊನೆಗೇ ಬದುಕಿ ಬಂದಿದ್ದೇ ರೋಚಕವಾಗಿದೆ. ಈ ನಡುವೆ ಮನೆಯಲ್ಲಿ ನಿದ್ರೆಗೆ ಜಾರಿದ್ದ 7 ಮಂದಿಯನ್ನೂ ಕಾಪಾಡಿದ್ದಾರೆ.

ಅಣ್ಣನ ತಿಥಿ ಕಾರ್ಯಕ್ಕೆ ತೆರಳಿದ್ದ ಸ್ವಾಮಿಶೆಟ್ಟಿ: ಕೇರಳದ ಚೂರಲ್ ಮಲೆಯಲ್ಲಿ ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುವ ಅಣ್ಣ ಅಸುನೀಗಿದ್ದರು. ಅವರ ತಿಥಿ ಕಾರ್ಯಕ್ಕೆ ತೆರಳಿದ್ದ ಸ್ವಾಮಿಶೆಟ್ಟಿ ಅಲ್ಲೇ ಉಳಿದುಕೊಂಡಿದ್ದರು. ಅಣ್ಣನ ಮನೆಯಲ್ಲಿ ಅತ್ತಿಗೆ, ಮಗಳು, ಅಳಿಯ, ಮೂವರು ಮಕ್ಕಳಿದ್ದರು.
ಸೋಮವಾರದಂದು ಸುರಿಯುತ್ತಿದ್ದ ಜೋರುಮಳೆಗೆ ಸ್ವಾಮಿಶೆಟ್ಟಿ ಅವರಿಗೆ ನಿದ್ರೆ ಬರದಂತಾಗಿತ್ತು. ಬಾಗಿಲು ಬಡಿಯುವ ಶಬ್ಧದಂತೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದರಿಂದ ಮೊದಲ ಬಾರಿ ಬಾಗಿಲು ತೆಗೆದು ನೋಡಿದರು. ಬಳಿಕ, ಎರಡನೇ ಬಾರಿ ಬಾಗಿಲು ತೆಗೆಯುತ್ತಿದ್ದಂತೆ ತಾವು ಮುಳುಗುವ ಮಟ್ಟಿಗೆ ಮನೆಯೊಳಕ್ಕೆ ನೀರು ಬಂದಿದೆ. ಕೂಡಲೇ, ಕೋಣೆಗಳ ಬಾಗಿಲು ಬಡಿದು ಎಲ್ಲರನ್ನೂ ಎಬ್ಬಿಸಿ ಕಂಬಿಯೊಂದನ್ನು ಹಿಡಿದು ಎತ್ತರದ ಪ್ರದೇಶಕ್ಕೆ ಹತ್ತಿಸಿದ್ದಾರೆ.
ಬಾಗಿಲು ತೆಗೆದ ನಂತರ ನೀರು ನುಗ್ಗಿದ ರಭಸಕ್ಕೆ ಎದೆ ನೋವು ಕಾಣಿಸಿಕೊಂಡರೂ ಬದುಕಬೇಕೆಂಬ ಛಲದಲ್ಲಿ ನೀರಿನ ನಡುವೆ ಬೆಟ್ಟ ಏರಿದ್ದಾರೆ. ಬೆಟ್ಟ ಏರಲು ಬೀಡಿ ಹೊತ್ತಿಸಲು ಇಟ್ಟುಕೊಂಡಿದ್ದ ಲೈಟರ್ ಮೂಲಕ ಬೆಳಕು ಮಾಡಿಕೊಂಡು ಪ್ರವಾಹಕ್ಕೆ ಸಡ್ಡು ಹೊಡೆದಿದ್ದಾರೆ.
ಬೆಳಗಿನ ಜಾವ 4ಕ್ಕೆ ಗುಡ್ಡದ ಮೇಲಿನ ತಮ್ಮ ಮನೆಯವರೆಲ್ಲರನ್ನೂ ಭೇಟಿ ಮಾಡಿದ ಸ್ವಾಮಿಶೆಟ್ಟಿ ಒಂದು ಹಗಲು, ಒಂದು ರಾತ್ರಿ ಮಳೆಯಲ್ಲಿ ತೊಯ್ದು ಪಾರಾಗಿದ್ದಾರೆ. ತಾವಿದ್ದ ಮನೆಯ ಒಂದು ಗೋಡೆ ಬಿಟ್ಟರೇ ಎಲ್ಲವೂ ಕೊಚ್ಚಿ ಹೋಗಿದ್ದು, ಈಗಲೂ ಆ ಘಟನೆ ನೆನೆಸಿಕೊಂಡು ಬಿಕ್ಕಳಿಸುತ್ತಾರೆ.
ಗುರುವಾರ ಬೆಳಗಿನ ಜಾವ ತ್ರಯಂಬಕರಪುರದ ಮನೆಗೆ ಗುಂಡ್ಲುಪೇಟೆ ತಹಶೀಲ್ದಾರ್ ತಂಡ ಸುರಕ್ಷಿತವಾಗಿ ಕರೆತಂದಿದ್ದಾರೆ. ಒಂದು ಹಗಲು, ಒಂದು ರಾತ್ರಿ ಇಡೀ ಮಳೆಯಲ್ಲಿ ತೋಯ್ದು ದುರಂತದಲ್ಲಿ ಪಾರಾಗುವ ಜೊತೆಗೆ ಸಿನಿಮೀಯ ಶೈಲಿಯಲ್ಲಿ ಮನೆಯಲ್ಲಿದ್ದ 7 ಮಂದಿಯನ್ನು ಕಾಪಾಡಿದ್ದಾರೆ.
ದುರಂತದ ವಿಚಾರ ತಿಳಿದು ಮನೆಯಲ್ಲಿ ಢವಢವ: ಸ್ವಾಮಿಶೆಟ್ಟಿ ಕುಟುಂಬಸ್ಥರು ದುರಂತದ ವಿಚಾರ ತಿಳಿದು ಮನೆಯಲ್ಲಿ ಭಯಭೀತರಾಗಿದ್ದರು. ಊಟವೂ ಸೇರುತ್ತಿರಲಿಲ್ಲ, ಟಿವಿ ನೋಡಿದರೇ ಭಯ ಆಗುತ್ತಿತ್ತು. ಫೋನ್ ಸಂಪರ್ಕವೂ ಇರಲಿಲ್ಲ. ಮಂಗಳವಾರದಂದು ಸ್ವಾಮಿಶೆಟ್ಟಿ ಚೆನ್ನಾಗಿದ್ದಾರೆಂಬ ಮಾಹಿತಿ ಬಂದ ಬಳಿಕ ಮನಸ್ಸು ಹಗುರವಾಯಿತು ಎಂದು ಪತ್ನಿ ನಾಗಮ್ಮ ಭಾವುಕರಾದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications