ಪೊಲೀಸ್ ಠಾಣೆ ಮುಂದಿನ ಕೆಂಪು ಡಬ್ಬಿ ಅಲಂಕಾರಕ್ಕಲ್ಲ
ಚಾಮರಾಜನಗರ, ನವೆಂಬರ್ 21 : ಪೊಲೀಸ್ ಠಾಣೆಗಳ ಮುಂದಿನ ದೂರು ಪೆಟ್ಟಿಗೆ ಹಾಕಿದ ದೂರುಗಳು ಡಬ್ಬದಲ್ಲೇ ಕೊಳೆಯುತ್ತಿವೆ. ವರ್ಷಗಳಾದರೂ ಅದರಲ್ಲಿನ ದೂರುಗಳ ಕಡೆ ಮುಖ ತಿರುಗಿಸಿಯೂ ನೋಡಿಲ್ಲ ಪೊಲೀಸರು.
ಠಾಣೆಗಳಲ್ಲಿ ದೂರು ಸ್ವೀಕರಿಸಲು ಸಿಬ್ಬಂದಿ ಹಿಂದೆ ಮುಂದೆ ನೋಡಿದಾಗ, ವಿವಿಧ ಕಾರಣಗಳಿಂದ ಠಾಣೆಗೆ ಹೋಗಿ ದೂರು ನೀಡಲು ಸಾಧ್ಯವಾಗದೆ ಇರುವವರಿಗೆ, ಮಹಿಳೆಯರು, ಯುವತಿಯರು ತಮಗಾಗುತ್ತಿರುವ ಅನ್ಯಾಯಗಳ ಬಗ್ಗೆ ದೂರು ಬರೆದು ಹಾಕಲೆಂದು ಠಾಣೆಗಳ ಮುಂದೆ ದೂರು ಪೆಟ್ಟಿಗೆ ಇಡಲಾಗುತ್ತದೆ. ಆದರೆ ಇದನ್ನು ಚಾಮರಾಜನಗರದ ಬಹುತೇಕ ಪೊಲೀಸ್ ಠಾಣೆಯಲ್ಲಿ ತೆರೆದು ಕೂಡ ನೋಡಿಲ್ಲ.

ಚಾಮರಾಜನಗರ ಜಿಲ್ಲೆಯ ಹಲವು ಠಾಣೆಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಟ್ಟಾಗಿನಿಂದಲೂ ತೆರೆದೇ ಇಲ್ಲ, ಕೆಲವು ದೂರು ಪೆಟ್ಟಿಗೆಗಳ ಬೀಗಗಳೇ ಕಳೆದು ಹೋಗಿವೆ.
ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು, ಶ್ರೀಸಾಮಾನ್ಯರು ಇತರೆ ಜನಗಳು ಹಿಂಜರಿಕೆಯಿಂದಾಗಿ ಠಾಣೆಗೆ ಬಂದು ದೂರು ಕೊಡಲು ಆಗದೆ ನ್ಯಾಯದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ದೂರು ಪೆಟ್ಟಿಗೆಗಳನ್ನು ಇಡಲಾಗಿದೆ. ಆದರೆ ಪೊಲೀಸರು ದೂರು ಪೆಟ್ಟಿಗೆಗಳ ಬಗ್ಗೆ ಗಮನವೇ ಹರಿಸುತ್ತಿಲ್ಲ. ಇದಕ್ಕೆ ತಾಜಾ ಉದಾಹರಣ ಇಲ್ಲಿದೆ ನೋಡಿ...
ಚಾಮರಾಜನಗರ ಜಿಲ್ಲೆಯ ಸ್ಥಳೀಯರೊಬ್ಬರು 2016 ರಲ್ಲಿ ಎಸ್ಪಿ ಕಚೇರಿ ಮುಂಬಾಗ ಪ್ರತಿಭಟಿಸಲು ಅನುಮತಿಯ ಜೊತೆಗೆ ಸಮಸ್ಯೆ ಅರ್ಜಿಯೊಂದನ್ನ ಹಾಕಲಾಗಿತ್ತು. ಪ್ರತಿಭಟನೆ ಸಂಬಂದ ಅನುಮತಿ ನಿರಾಕರಿಸುದರೂ ಮೇಲಾದಿಕಾರಿಗೆ ಮನವಿ ಸಲ್ಲಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತುಕತೆ ನಡೆಸಿ ಪ್ರತಿಭಟನೆ ಕೈ ಬಿಡಿಸಲಾಗಿತ್ತು.
ಘಟನೆ ಕುರಿತು ಮೇಲಾಧಿಕಾರಿಗಳು ಠಾಣಾ ಇನ್ಸ್ಪೆಕ್ಟರ್ ಅವರನ್ನು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಅವರು ದೂರು ಅರ್ಜಿ ಬಂದಿಲ್ಲ ಎಂದು ಬಿಟ್ಟರು. ಕೂಡಲೇ ದೂರುದಾರರು, ದೂರು ಪೆಟ್ಟಿಗೆಗೆ ಹಾಕಿದ ಅರ್ಜಿಯ ನಕಲು ಹಾಗೂ ಅಲ್ಲಿ ಬೀಗ ಹಾಕದೆ ಇಡಲಾಗಿರುವ ದೂರು ಪೆಟ್ಟಿಗೆ ಚಿತ್ರವನ್ನ ಕಳಿಸಿದ ನಂತರ ಅಂದಿನ ಎಸ್ಪಿ ಕುಲದೀಪ್ ಕುಮಾರ್ ಅವರ ನಿರ್ದೇಶನ ಬರುವ ಮೊದಲೆ ಪೆಟ್ಟಿಗೆಗೆ ಬೀಗ ಬಿದ್ದಿತು.
ಇದು ಒಂದು ಠಾಣೆಯ ಚಿತ್ರಣವಲ್ಲ ರಾಜ್ಯದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ದೂರು ಪೆಟ್ಟಿಗೆಗಳು ಇಲ್ಲ, ಇದ್ದರೂ ಅದನ್ನ ಪರಿಶೀಲಿಸುವ ತಾಳ್ಮೆ ಪೊಲೀಸರಿಗೆ ಇಲ್ಲ.
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications