ಡೊಕೊಮೊದಿಂದ 350 ರುಗಳಿಗೆ, ಪೋಸ್ಟ್-ಪೇ ಆಫರ್
'ಸಿಂಪಲ್ ಈಸ್ ದಿ ಬೆಸ್ಟ್' ಯೋಜನೆಗಳು ಕೇವಲ 350 ರೂಪಾಯಿ ಕನಿಷ್ಠ ಬಾಡಿಗೆ ದರದಲ್ಲಿ 5ಜಿಬಿ ಡಾಟಾ ಮತ್ತು 1500 ನಿಮಿಷಗಳ ಟಾಕ್ ಟೈಮ್ ಸೇವೆಯನ್ನು ಒದಗಿಸಲಿವೆ.
ಬೆಂಗಳೂರು, ಡಿಸೆಂಬರ್ 21: ದೇಶದ ಮುಂಚೂಣಿಯಲ್ಲಿರುವ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಡೊಕೊಮೊ ಕರ್ನಾಟಕ ಮಾರುಕಟ್ಟೆಯ ತನ್ನ ಗ್ರಾಹಕರಿಗಾಗಿ ಒಂದು ವಿನೂತನವಾದ ಪೋಸ್ಟ್-ಪೇ ಯೋಜನೆಯಾದ ಸಿಂಪಲ್ ಈಸ್ ದಿ ಬೆಸ್ಟ್' ಯೋಜನೆಯನ್ನು ಪ್ರಕಟಿಸಿದೆ.
'ಸಿಂಪಲ್ ಈಸ್ ದಿ ಬೆಸ್ಟ್' ಯೋಜನೆಗಳು ಕೇವಲ 350 ರೂಪಾಯಿ ಕನಿಷ್ಠ ಬಾಡಿಗೆ ದರದಲ್ಲಿ 5ಜಿಬಿ ಡಾಟಾ ಮತ್ತು 1500 ನಿಮಿಷಗಳ ಟಾಕ್ ಟೈಮ್ ಸೇವೆಯನ್ನು ಒದಗಿಸಲಿವೆ. ಗ್ರಾಹಕರು ತಮ್ಮ ಧ್ವನಿ ಮತ್ತು ಡಾಟಾ ಅಗತ್ಯಕ್ಕೆ ತಕ್ಕಂತೆ ಎರಡು ವಿಧದ ಕೊಡುಗೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.[ಟಾಟಾದಿಂದ 1 ಜಿಬಿ ಡಾಟಾಗೆ 91 ರು ಯೋಜನೆ]

1) ಅತಿ ಹೆಚ್ಚು ಡಾಟಾ ಯೋಜನೆ:- 5 ಜಿಬಿ ಡಾಟಾ ಮತ್ತು 1000 ನಿಮಿಷಗಳ ಸ್ಥಳೀಯ ಮತ್ತು ಎಸ್ಟಿಡಿ ಟಾಕ್ ಟೈಮ್ ಲಾಭ ಪಡೆಯಬಹುದು. 5ಜಿಬಿ ಡಾಟಾ ಕೊಡುಗೆ ಮೊದಲ ಆರು ತಿಂಗಳವರೆಗೆ ಲಭ್ಯವಾಗಿರುತ್ತದೆ. ಅದೇ ರೀತಿ ಧ್ವನಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
2) ಅತಿ ಹೆಚ್ಚು ಧ್ವನಿ ಯೋಜನೆ:- 2 ಜಿಬಿ ಡಾಟಾದೊಂದಿಗೆ ಸ್ಥಳೀಯ ಮತ್ತು ಎಸ್ಟಿಡಿಯ 1500 ನಿಮಿಷಗಳ ಟಾಕ್ ಟೈಮ್ ಲಭ್ಯ. ಈ ಸೇವೆ ಮೊದಲ ಆರು ತಿಂಗಳವರೆಗೆ ಲಭ್ಯವಿದ್ದು, ನಂತರ ಧ್ವನಿಯ ಲಾಭ 1000 ನಿಮಿಷಗಳಿಗೆ ಪರಿಷ್ಕರಣೆ ಆಗಲಿದ್ದು, 2 ಜಿಬಿ ಡಾಟಾದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಗ್ರಾಹಕರು ತಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯದವರೆಗೆ ಮಾತನಾಡಲು ಮತ್ತು ಹೆಚ್ಚು ಇಂಟರ್ನೆಟ್ ಬ್ರೌಸಿಂಗ್ ಸೌಲಭ್ಯ ಪಡೆಯುವಂತಾಗಲಿ ಎಂಬ ಕಾರಣಕ್ಕೆ ಈ ಯೋಜನೆಗಳನ್ನು ರೂಪಿಸಲಾಗಿದೆ.
ಪೋಸ್ಟ್ ಪೇ ಗ್ರಾಹಕರು ಸ್ಥಳೀಯ ಕರೆಗಳನ್ನು 30 ಪೈಸೆ ಮತ್ತು ಎಸ್ಟಿಡಿ ಕರೆಗಳನ್ನು 40 ಪೈಸೆಯ ಫ್ಲಾಟ್ ವಾಯ್ಸ್ ದರದಲ್ಲಿ ಪಡೆಯಬಹುದಾಗಿದೆ. ಇದರ ಜತೆಗೆ ಅತ್ಯುತ್ತಮವಾದ ಡಾಟಾ ಲಾಭಗಳನ್ನೂ ಪಡೆಯಲಿದ್ದಾರೆ ಎಂದು ಟಾಟಾ ಟೆಲಿ ಸರ್ವೀಸಸ್ ಲಿಮಿಟೆಡ್ನ ಕರ್ನಾಟಕ-ಕೇರಳ ವೃತ್ತದ ಗ್ರಾಹಕ ವ್ಯವಹಾರಗಳ ಮುಖ್ಯಸ್ಥ ಶ್ರೀ ಬಾಲಾಜಿ ಪ್ರಕಾಶ್ ಹೇಳಿದರು.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications