ಸರಕಾರೀ ಬಿಡ್ ಪೈಪೋಟಿ: ಮೊಬೈಲ್ ಕರೆ ದುಬಾರಿ?
ನವದೆಹಲಿ, ಫೆ 15: ಮೊಬೈಲ್ ತರಂಗಾಂತರಂಗದ (ಸ್ಪೆಕ್ಟ್ರಂ) ಸರಕಾರೀ ಹರಾಜಿನಲ್ಲಿ ನಂಬರ್ ಒನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ದೇಶದ ಮೂರು ಪ್ರಮುಖ ಮೊಬೈಲ್ ಕಂಪೆನಿಗಳ ಮೇಲಾಟದಿಂದಾಗಿ ಮೊಬೈಲ್ ಕರೆಗಳು ದುಬಾರಿಯಾಗುವ ಸಾಧ್ಯತೆಗಳಿವೆ.
ದೇಶದ ಮೂರು ಪ್ರತಿಷ್ಠಿತ ಮೊಬೈಲ್ ಕಂಪೆನಿಗಳಾದ ಭಾರ್ತಿ ಏರ್ ಟೆಲ್ ಲಿಮಿಟೆಡ್, ರಿಲಯನ್ಸ್ ಜಿಯೋ ಇನ್ಫೋಕಾಂ ಮತ್ತು ವೋಡೊಫೋನ್ ಸಂಸ್ಥೆಗಳು ಸರಕಾರೀ ತರಂಗಾಂತರಂಗದ (1800 Mhz band) ಮೇಲೆ ಭಾರೀ ಪ್ರಮಾಣದ ಬಿಡ್ ಮಾಡುತ್ತಿರುವುದರಿಂದ ಅದರ ನೇರ ಪರಿಣಾಮ ಗ್ರಾಹಕರಿಗೆ ಬೀಳಲಿದೆ.
ಕೇಂದ್ರ ಬೊಕ್ಕಸಕ್ಕೆ ಸುಮಾರು ಅರವತ್ತು ಸಾವಿರ ಕೋಟಿ ಆದಾಯ ತಂದು ಕೊಡಬಹುದೆಂದು ನಿರೀಕ್ಷಿಸಲಾಗಿರುವ ಈ ಹರಾಜಿನಲ್ಲಿ ಎರಡು ಕಂಪೆನಿಗಳು ಪೈಪೋಟಿಗೆ ಬಿದ್ದಂತೆ ಬಿಡ್ ಮಾಡುತ್ತಿರುವುದು ಗ್ರಾಹಕರನ್ನು ಆತಂಕಕ್ಕೆ ದೂಡಿದೆ.

ಬಿಡ್ ಮೊತ್ತದ ಶೇ. 30ರಷ್ಟನ್ನು ಸರಕಾರಕ್ಕೆ ಕೂಡಲೇ ಪಾವತಿಸ ಬೇಕಾಗಿರುವುದರಿಂದ, ಈ ಹೆಚ್ಚಿನ ಹೊರೆ ಗ್ರಾಹಕರ ಮೇಲೆ ಸದ್ಯದಲ್ಲೇ ಬೀಳುವ ನಿರೀಕ್ಷೆಯಿದೆ.
ಈ ಹೆಚ್ಚುವರಿ ಹೂಡಿಕೆಯನ್ನು ಸರಿದೂಗಿಸಲು ಮೊಬೈಲ್ ಕಂಪೆನಿಗಳು ಒಂದೋ ತಮಗೆ ಬರುತ್ತಿದ್ದ ನಿವ್ವಳ ಲಾಭದ ಮೂಲಕ ಸರಿದೂಗಿಸಬೇಕು, ಇಲ್ಲವೇ ಮೊಬೈಲ್ ದರವನ್ನು ಹೆಚ್ಚಿಸ ಬೇಕಾದ ಅನಿವಾರ್ಯತೆಯಲ್ಲಿದೆ. (11300 ಕೋಟಿ ರೂ ಸ್ಪೆಕ್ಟ್ರಂ ಹರಾಜು: ಆದಾಯ ಯಾರಿಗೆ)
ಸರಕಾರಕ್ಕೆ ಪಾವತಿಸ ಬೇಕಾದ ಹರಾಜು ಹಣವನ್ನು ಸರಿದೂಗಿಸಲು ಕಂಪೆನಿಯ ಆದಾಯ ಮತ್ತು ದರ ಹೆಚ್ಚಿಸುವ ಮೂಲಕ ಸರಿದೂಗಿಸ ಬೇಕಾಗುತ್ತದೆ ಎಂದು ಭಾರ್ತಿ ಏರ್ ಟೆಲ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಫೆಬ್ರವರಿ ಮೂರರಿಂದ ಆರಂಭವಾಗಿರುವ ಈ ಹರಾಜು ಪ್ರಕ್ರಿಯೆಯಲ್ಲಿ ದೇಶದ ಎಂಟು ಟೆಲೆಕಾಂ ಸಂಸ್ಥೆಗಳು ಭಾಗಿಯಾಗಿವೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications