ಸರಕಾರೀ ಬಿಡ್ ಪೈಪೋಟಿ: ಮೊಬೈಲ್ ಕರೆ ದುಬಾರಿ?
ನವದೆಹಲಿ, ಫೆ 15: ಮೊಬೈಲ್ ತರಂಗಾಂತರಂಗದ (ಸ್ಪೆಕ್ಟ್ರಂ) ಸರಕಾರೀ ಹರಾಜಿನಲ್ಲಿ ನಂಬರ್ ಒನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ದೇಶದ ಮೂರು ಪ್ರಮುಖ ಮೊಬೈಲ್ ಕಂಪೆನಿಗಳ ಮೇಲಾಟದಿಂದಾಗಿ ಮೊಬೈಲ್ ಕರೆಗಳು ದುಬಾರಿಯಾಗುವ ಸಾಧ್ಯತೆಗಳಿವೆ.
ದೇಶದ ಮೂರು ಪ್ರತಿಷ್ಠಿತ ಮೊಬೈಲ್ ಕಂಪೆನಿಗಳಾದ ಭಾರ್ತಿ ಏರ್ ಟೆಲ್ ಲಿಮಿಟೆಡ್, ರಿಲಯನ್ಸ್ ಜಿಯೋ ಇನ್ಫೋಕಾಂ ಮತ್ತು ವೋಡೊಫೋನ್ ಸಂಸ್ಥೆಗಳು ಸರಕಾರೀ ತರಂಗಾಂತರಂಗದ (1800 Mhz band) ಮೇಲೆ ಭಾರೀ ಪ್ರಮಾಣದ ಬಿಡ್ ಮಾಡುತ್ತಿರುವುದರಿಂದ ಅದರ ನೇರ ಪರಿಣಾಮ ಗ್ರಾಹಕರಿಗೆ ಬೀಳಲಿದೆ.
ಕೇಂದ್ರ ಬೊಕ್ಕಸಕ್ಕೆ ಸುಮಾರು ಅರವತ್ತು ಸಾವಿರ ಕೋಟಿ ಆದಾಯ ತಂದು ಕೊಡಬಹುದೆಂದು ನಿರೀಕ್ಷಿಸಲಾಗಿರುವ ಈ ಹರಾಜಿನಲ್ಲಿ ಎರಡು ಕಂಪೆನಿಗಳು ಪೈಪೋಟಿಗೆ ಬಿದ್ದಂತೆ ಬಿಡ್ ಮಾಡುತ್ತಿರುವುದು ಗ್ರಾಹಕರನ್ನು ಆತಂಕಕ್ಕೆ ದೂಡಿದೆ.

ಬಿಡ್ ಮೊತ್ತದ ಶೇ. 30ರಷ್ಟನ್ನು ಸರಕಾರಕ್ಕೆ ಕೂಡಲೇ ಪಾವತಿಸ ಬೇಕಾಗಿರುವುದರಿಂದ, ಈ ಹೆಚ್ಚಿನ ಹೊರೆ ಗ್ರಾಹಕರ ಮೇಲೆ ಸದ್ಯದಲ್ಲೇ ಬೀಳುವ ನಿರೀಕ್ಷೆಯಿದೆ.
ಈ ಹೆಚ್ಚುವರಿ ಹೂಡಿಕೆಯನ್ನು ಸರಿದೂಗಿಸಲು ಮೊಬೈಲ್ ಕಂಪೆನಿಗಳು ಒಂದೋ ತಮಗೆ ಬರುತ್ತಿದ್ದ ನಿವ್ವಳ ಲಾಭದ ಮೂಲಕ ಸರಿದೂಗಿಸಬೇಕು, ಇಲ್ಲವೇ ಮೊಬೈಲ್ ದರವನ್ನು ಹೆಚ್ಚಿಸ ಬೇಕಾದ ಅನಿವಾರ್ಯತೆಯಲ್ಲಿದೆ. (11300 ಕೋಟಿ ರೂ ಸ್ಪೆಕ್ಟ್ರಂ ಹರಾಜು: ಆದಾಯ ಯಾರಿಗೆ)
ಸರಕಾರಕ್ಕೆ ಪಾವತಿಸ ಬೇಕಾದ ಹರಾಜು ಹಣವನ್ನು ಸರಿದೂಗಿಸಲು ಕಂಪೆನಿಯ ಆದಾಯ ಮತ್ತು ದರ ಹೆಚ್ಚಿಸುವ ಮೂಲಕ ಸರಿದೂಗಿಸ ಬೇಕಾಗುತ್ತದೆ ಎಂದು ಭಾರ್ತಿ ಏರ್ ಟೆಲ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಫೆಬ್ರವರಿ ಮೂರರಿಂದ ಆರಂಭವಾಗಿರುವ ಈ ಹರಾಜು ಪ್ರಕ್ರಿಯೆಯಲ್ಲಿ ದೇಶದ ಎಂಟು ಟೆಲೆಕಾಂ ಸಂಸ್ಥೆಗಳು ಭಾಗಿಯಾಗಿವೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications