ಫ್ಲಿಪ್ ಕಾರ್ಟ್ ನ 4800 ಕೋಟಿ ರು. ಆಫರ್ ತಿರಸ್ಕರಿಸಿದ ಸ್ನಾಪ್ ಡೀಲ್
ನಷ್ಟದಲ್ಲಿರುವ ಆನ್ ಲೈನ್ ಮಾರಾಟ ಸಂಸ್ಥೆಯಾದ ಸ್ನಾಪ್ ಡೀಲ್ ಅನ್ನು ಕೊಳ್ಳಲು ಫ್ಲಿಪ್ ಕಾರ್ಟ್ ನೀಡಿದ್ದ ಆಫರ್ ತಿರಸ್ಕರಿಸಿದ ಸ್ನಾಪ್ ಡೀಲ್. ಸುಮಾರು 4800 ಕೋಟಿ ರು.ಗಳಿಗೆ ಆಫರ್ ನೀಡಿದ್ದ ಫ್ಲಿಪ್ ಕಾರ್ಟ್.
ಬೆಂಗಳೂರು, ಜುಲೈ 5: ಆನ್ ಲೈನ್ ಮಾರುಕಟ್ಟೆ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಷ್ಠಿತ ಆನ್ ಲೈನ್ ಮಾರಾಟ ಕಂಪನಿಯಾದ ಸ್ನಾಪ್ ಡೀಲ್ ಸಂಸ್ಥೆಯು, ಫ್ಲಿಪ್ ಕಾರ್ಟ್ ಸಂಸ್ಥೆಯ ತನ್ನನ್ನು ಕೊಳ್ಳಲು ನೀಡಿದ್ದ 4800 ಕೋಟಿ ರು.ಗಳ ಆಫರ್ ಅನ್ನು ತಿರಸ್ಕರಿಸಿದೆ ಎಂದು 'ಲೈವ್ ಮಿಂಟ್' ಹೇಳಿದೆ.
ಸದ್ಯಕ್ಕೆ ನಷ್ಟದಲ್ಲಿರುವ ಸ್ನಾಪ್ ಡೀಲ್ ಸಂಸ್ಥೆಯನ್ನು ಕೊಳ್ಳಲು ಈಗಾಗಲೇ ಅದರ ಆಡಳಿತ ಮಂಡಳಿಯು ನಿರ್ಧರಿಸಿದೆ. ಆದರಂತೆ, ಆಫರ್ ಗಳೂ ಬರುತ್ತಿವೆ. ಈ ಆಫರ್ ಗಳಲ್ಲಿ ಬಂದಿದ್ದ ಅತಿ ದೊಡ್ಡ ಆಫರ್ ಫ್ಲಿಪ್ ಕಾರ್ಟ್ ಕಂಪನಿಯದ್ದು. ಆದರೆ, ಅದನ್ನು ಸ್ನಾಪ್ ಡೀಲ್ ಆಡಳಿತ ಮಂಡಳಿಯು ತಿರಸ್ಕರಿಸಿದೆ.

ಆದರೆ, ಇಷ್ಟಕ್ಕೆ ಫ್ಲಿಪ್ ಕಾರ್ಟ್ ಸುಮ್ಮನಾಗುತ್ತಿಲ್ಲ. ಈ ಬಗ್ಗೆ ಮತ್ತಷ್ಟು ಮಾತುಕತೆ ನಡೆಸಿದ ಸ್ನಾಪ್ ಡೀಲ್ ಅನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ ಎಂದು ಫ್ಲಿಪ್ ಕಾರ್ಟ್ ಸಂಸ್ಥೆಯ ಹೆಸರನ್ನೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದು ಬಹಿರಂಗವಾಗಿದೆ.
ನಿಜ ಹೇಳಬೇಕೆಂದರೆ, ಸ್ನಾಪ್ ಡೀಲ್ ನ ಒಟ್ಟಾರೆ ಆಸ್ತಿ ಮೌಲ್ಯ ಎಷ್ಟೆಂಬುದನ್ನು ಇನ್ನೂ ನಿಖರವಾಗಿ ಲೆಕ್ಕ ಹಾಕಲಾಗಿಲ್ಲ. ಆದರೆ, ಅಂದಾಜು ಮೊತ್ತವನ್ನು ಫ್ಲಿಪ್ ಕಾರ್ಟ್ ಹಾಗೂ ಇನ್ನಿತರ ಆನ್ ಲೈನ್ ಸಂಸ್ಥೆಗಳು ಸ್ನಾಪ್ ಡೀಲ್ ಮುಂದೆ ಪ್ರಸ್ತಾಪಿಸುತ್ತಿವೆ. ಆದರೆ, ಅವ್ಯಾವೂ ಸ್ನಾಪ್ ಡೀಲ್ ಆಡಳಿತ ಮಂಡಳಿಗೆ ಹಿಡಿಸುತ್ತಿಲ್ಲ.
ಹಾಗಾಗಿ, ಸ್ನಾಪ್ ಡೀಲ್ ಕಂಪನಿಯೇ ತನ್ನ ಸಮಗ್ರ ಆಸ್ತಿಯನ್ನು ನಿಖರ ಮೌಲ್ಯವನ್ನು ಲೆಕ್ಕ ಹಾಕಿ, ತನ್ನ ನಿರೀಕ್ಷೆಯ ಬೆಲೆಯನ್ನು ತಾನೇ ನಿಗದಿಪಡಿಸಿಕೊಂಡರೆ ಕೊಳ್ಳುವವರು ಮುಂದಿನ ಮಾತುಕತೆಗೆ ಸಿದ್ಧವಾಗಲು ಸಹಾಯವಾಗುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಸಲಹೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications