ನೋಟು ಅಮಾನ್ಯೀಕರಣಕ್ಕೆ 6 ವರ್ಷ: ನಗದು ವಹಿವಾಟು ಇಷ್ಟಪಟ್ಟರೆ ಜನ?
ನವದೆಹಲಿ, ನವೆಂಬರ್ 8: ನೋಟು ಅಮಾನ್ಯೀಕರಣ(demonetisation)ದ ಪ್ರಯೋಜನಗಳ ಕುರಿತ ಚರ್ಚೆ ಆರು ವರ್ಷಗಳ ನಂತರವೂ ಮುಂದುವರಿದಿದೆ. ನೋಟು ಅಮಾನ್ಯೀಕರಣದ ನಂತರ ಸರ್ಕಾರ 2000 ರೂ.ಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು. ಇದರೊಂದಿಗೆ 500 ರೂಪಾಯಿ ನೋಟುಗಳ ಹೊಸ ಸರಣಿಯನ್ನು ಪರಿಚಯಿಸಲಾಯಿತು. ಇದಾದ ನಂತರ 200 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಯಿತು.
ಈ ನೋಟು ಅಮಾನ್ಯೀಕರಣದ ಆರು ವರ್ಷಗಳ ನಂತರವೂ ಅದರ ಅನುಕೂಲಗಳು ಮತ್ತು ಅನನುಕೂಲಗಳ ಬಗ್ಗೆ ಚರ್ಚೆ ಮುಂದುವರಿದಿದೆ. ಇದು ಆರ್ಥಿಕತೆಯನ್ನು ಔಪಚಾರಿಕಗೊಳಿಸಲು ಸಹಾಯ ಮಾಡಿದೆ ಎಂದು ಸರ್ಕಾರ ಹೇಳಿಕೊಂಡಿದೆ, ಆದರೆ ವಿಮರ್ಶಕರು ಈ ನಿರ್ಧಾರವು ಕಪ್ಪು ಹಣವನ್ನು ನಿಗ್ರಹಿಸಲು ಮತ್ತು ನಗದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ವಿಫಲವಾಗಿದೆ ಎಂದು ಹೇಳಿದ್ದಾರೆ.
ಇನ್ನೂ ನೋಟು ಅಮಾನ್ಯೀಕರಣದ 6 ವರ್ಷಗಳ ನಂತರ ಶೇ.76ರಷ್ಟು ಜನರು ನಗದು ವಹಿವಾಟು ಇಷ್ಟ ಪಡುತ್ತಾರೆ ಹಾಗೂ ಸಮೀಕ್ಷೆಯಲ್ಲಿ ಏನೆಲ್ಲಾ ಬಯಲಾಗಿದೆ ಗೊತ್ತಾ? ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8, 2016ರಂದು ಆರ್ಥಿಕತೆಯಲ್ಲಿನ ಭ್ರಷ್ಟಾಚಾರ ಮತ್ತು ಕಪ್ಪುಹಣದ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ 500 ಮತ್ತು 1,000 ರೂಪಾಯಿಗಳ ನೋಟುಗಳನ್ನು ರದ್ದುಗೊಳಿಸಿದರು. ಈ ಕ್ರಮವು ಭಾರತವನ್ನು 'ಕ್ಯಾಶ್ ಲೆಸ್' ಆರ್ಥಿಕತೆಯನ್ನು ಮಾಡುವ ಗುರಿಯನ್ನು ಹೊಂದಿದೆ. ಇದು ಕಪ್ಪುಹಣಕ್ಕೆ ಕಡಿವಾಣ ಹಾಕಲು ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತೊಡೆದುಹಾಕಲು ಸಹಕಾರಿಯಾಗಲಿದೆ ಎಂದೂ ಹೇಳಲಾಗಿದೆ.

ಕರೆನ್ಸಿ ಮಟ್ಟವು 30.88 ಲಕ್ಷ ಕೋಟಿ ರೂ.ಗೆ ಹೆಚ್ಚಳ?
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ಹದಿನೈದು ದಿನಗಳ ಆಧಾರದ ಮೇಲೆ ಬಿಡುಗಡೆ ಮಾಡಿದ ಹಣ ಪೂರೈಕೆ ಅಂಕಿ-ಅಂಶಗಳ ಪ್ರಕಾರ, ಈ ವರ್ಷದ ಅಕ್ಟೋಬರ್ 21ರವರೆಗೆ ಸಾರ್ವಜನಿಕರಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಮಟ್ಟವು 30.88 ಲಕ್ಷ ಕೋಟಿ ರೂ.ಗೆ ಏರಿದೆ. ನವೆಂಬರ್ 4, 2016ಕ್ಕೆ ಕೊನೆಗೊಂಡ ಹದಿನೈದು ದಿನಗಳಲ್ಲಿ ಈ ಅಂಕಿ-ಅಂಶವು 17.7 ಲಕ್ಷ ಕೋಟಿ ರೂ. ಈ ರೀತಿಯಾಗಿ ನೋಟು ಅಮಾನ್ಯೀಕರಣದ ನಂತರ ಚಲಾವಣೆಯಲ್ಲಿರುವ ಕರೆನ್ಸಿಯ ಮಟ್ಟವು ಶೇ.71ರಷ್ಟು ಹೆಚ್ಚಾಗಿದೆ.
ಈ ವರ್ಷ ದೀಪಾವಳಿಯ ವಾರದಲ್ಲಿ ವ್ಯವಸ್ಥೆಯಲ್ಲಿ 7,600 ಕೋಟಿ ರೂಪಾಯಿ ನಗದು ಅಥವಾ ಕರೆನ್ಸಿ (ಸಿಐಸಿ) ಕೊರತೆಯಾಗಿದೆ ಎಂದು ಎಸ್ಬಿಐ ಅರ್ಥಶಾಸ್ತ್ರಜ್ಞರು ವರದಿ ಮಾಡಿದ್ದಾರೆ. ಜನರಲ್ಲಿ ಡಿಜಿಟಲ್ ಪಾವತಿಯ ಜನಪ್ರಿಯತೆಯಿಂದಾಗಿ ಇದು ಸಂಭವಿಸಿದೆ. ಭಾರತದ ಆರ್ಥಿಕತೆಯು ಪ್ರಸ್ತುತ ರಚನಾತ್ಮಕ ಬದಲಾವಣೆಯ ಮೂಲಕ ಸಾಗುತ್ತಿದೆ ಎಂದು ವರದಿ ಹೇಳಿದೆ.

ಡಿಜಿಟಲ್ ವಹಿವಾಟು ಹೆಚ್ಚಳ?
ಎಸ್ಬಿಐನ ಸಂಶೋಧನಾ ವರದಿಯ ಪ್ರಕಾರ, ಪಾವತಿ ವ್ಯವಸ್ಥೆಯಲ್ಲಿ ಸಿಐಸಿಯ ಪಾಲು 2015-16ರಲ್ಲಿ ಶೇಕಡಾ 88ರಿಂದ 2021-22ರಲ್ಲಿ ಶೇಕಡಾ 20ಕ್ಕೆ ಇಳಿದಿದೆ. 2026-27ರ ವೇಳೆಗೆ ಇದು ಶೇ 11.15ಕ್ಕೆ ಇಳಿಯುವ ನಿರೀಕ್ಷೆಯಿದೆ. ಅದೇ ರೀತಿ ಡಿಜಿಟಲ್ ವಹಿವಾಟು 2015-16ರಲ್ಲಿ ಶೇ.11.26ರಿಂದ 2021-22ರಲ್ಲಿ ಶೇ.80.4ಕ್ಕೆ ಏರಿಕೆಯಾಗಿದೆ. ಇದು 2026-27ರ ವೇಳೆಗೆ ಶೇ.88ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
ಆದರೆ, ಈ ಮಾಹಿತಿ ಬಿಡುಗಡೆಯ ನಂತರ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನೋಟು ಅಮಾನ್ಯೀಕರಣವು ದೇಶವನ್ನು ಕಪ್ಪುಹಣದಿಂದ ಮುಕ್ತಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಅದು ವ್ಯಾಪಾರವನ್ನು ಹಾನಿಗೊಳಿಸಿದೆ ಮತ್ತು ಉದ್ಯೋಗವನ್ನು ನಾಶಪಡಿಸಿದೆ ಎಂದು ಹೇಳಿದ್ದಾರೆ.
ಈ 'ಮಾಸ್ಟರ್ ಸ್ಟ್ರೋಕ್' 6 ವರ್ಷಗಳ ನಂತರ ಜನರು 2016ಕ್ಕಿಂತ ಶೇ.72ರಷ್ಟು ಹೆಚ್ಚು ಹಣವನ್ನು ಹೊಂದಿದ್ದಾರೆ. ಆರ್ಥಿಕತೆಯ ಕುಸಿತಕ್ಕೆ ಕಾರಣವಾದ ಈ ವೈಫಲ್ಯವನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ ಎಂದು ವರದಿಯ ಮೂಲಗಳು ತಿಳಿಸಿವೆ.

ಭಾರತ: ಶೇ. 85 ಜನಸಂಖ್ಯೆ ನಗದು ವಹಿವಾಟಿನಲ್ಲಿ ಅವಲಂಬಿತ?
ಯುಎಸ್ನ ಮ್ಯಾಸಚೂಸೆಟ್ಸ್ ಆಮ್ಹೆರ್ಸ್ಟ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಜಯತಿ ಘೋಷ್, ನೋಟು ಅಮಾನ್ಯೀಕರಣಕ್ಕೆ ನೀಡಲಾದ ತಾರ್ಕಿಕತೆ ಕಪ್ಪುಹಣಕ್ಕೆ ನಗದು ಕಾರಣ ಅದರ ಯೋಜನೆಗಳು ಅನೌಪಚಾರಿಕ ವಲಯದಲ್ಲಿ ನಗದು ಪ್ರಮುಖ ಪಾತ್ರವನ್ನು ಗುರುತಿಸದೆ ಶೇ. 85ರಷ್ಟು ಜನಸಂಖ್ಯೆಯ ಶೇಕಡಾವಾರು ಅವಲಂಬಿತವಾಗಿದೆ ಎಂದಿದ್ದಾರೆ. ಎಸ್ಬಿಐ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯಾ ಕಾಂತಿ ಘೋಷ್ ಅವರು ಟ್ವೀಟ್ನಲ್ಲಿ ಡಿಜಿಟಲ್ ವಹಿವಾಟಿನ ಹೆಚ್ಚಳದಿಂದಾಗಿ ವ್ಯವಸ್ಥೆಯಲ್ಲಿನ ನಗದು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ತನ್ನ ಗುರಿಯನ್ನು ಸಾಧಿಸಿದೆಯೇ ?
ಲೋಕಲ್ ಸರ್ಕಲ್ಸ್ ವರದಿಯ ಪ್ರಕಾರ, ನೋಟು ಅಮಾನ್ಯೀಕರಣದ ಆರು ವರ್ಷಗಳ ನಂತರವೂ ಈ ಪ್ರಮುಖ ನಿರ್ಧಾರವು ತನ್ನ ಗುರಿಯನ್ನು ಸಾಧಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಜನರು ಇನ್ನೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಕಪ್ಪು ಹಣವನ್ನು ವ್ಯವಹರಿಸುತ್ತಿದ್ದಾರೆ ಎಂದು ಲಭ್ಯವಿರುವ ಪುರಾವೆಗಳು ತೋರಿಸುತ್ತವೆ. ಇದಲ್ಲದೇ ಹಾರ್ಡ್ ವೇರ್, ಪೇಂಟ್ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳನ್ನು ಸರಿಯಾದ ರಸೀದಿ ಇಲ್ಲದೆ ಮಾರಾಟ ಮಾಡಲಾಗುತ್ತಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣದ ನಂತರ ಸರ್ಕಾರ 2000 ರೂ.ಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು. ಇದರೊಂದಿಗೆ 500 ರೂಪಾಯಿ ನೋಟುಗಳ ಹೊಸ ಸರಣಿಯನ್ನು ಪರಿಚಯಿಸಲಾಯಿತು. ಇದಾದ ನಂತರ 200 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಯಿತು.
-
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications