ದೊಡ್ಡ ಟಿವಿಗಳ ಮೇಲೆ ಭರ್ಜರಿ ಆಫರ್ ನೀಡಿದ ಸ್ಯಾಮ್ಸಂಗ್
ನವದೆಹಲಿ, ಜನವರಿ 04: ಸ್ಯಾಮ್ಸಂಗ್ ಇಂಡಿಯಾ ತನ್ನ 55 ಇಂಚಿನ ಮತ್ತು ಅದಕ್ಕಿಂತ ಹೆಚ್ಚಿನ ಪ್ರೀಮಿಯಂ ಶ್ರೇಣಿಯ ಟಿವಿಗಳ ಮೇಲೆ ವಿಶೇಷ ಆಫರ್ ಘೋಷಿಸಿದೆ. ದೇಶದ ಎಲ್ಲ ಪ್ರಮುಖ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿಗಳಲ್ಲಿ ಈ ಆಫರ್ ಪಡೆಯಬಹುದು ಎಂದು ಹೇಳಿದ್ದು, ಸ್ಯಾಮ್ಸಂಗ್ ಬಿಗ್ ಟಿವಿ ಡೇಸ್ ಆಫರ್ ಜನವರಿ 31, 2021 ರವರೆಗೆ ಲಭ್ಯವಿರುತ್ತವೆ.
55 ಇಂಚು, 65 ಇಂಚು, 75 ಇಂಚು, 82 ಇಂಚು ಮತ್ತು 85 ಇಂಚಿನ ಕ್ಯೂಎಲ್ಇಡಿ ಟಿವಿಗಳು, ಕ್ರಿಸ್ಟಲ್ 4 ಕೆ ಯುಹೆಚ್ಡಿ, ಕ್ಯೂಎಲ್ಇಡಿ 8 ಕೆ ಟಿವಿಗಳು ದೊಡ್ಡ ಡಿಸ್ಪ್ಲೇ ಸ್ಯಾಮ್ಸಂಗ್ ಟಿವಿಗಳನ್ನು ಖರೀದಿಸುವಾಗ ಗ್ರಾಹಕರು ಆಫರ್ ಪಡೆಯಬಹುದು. ಹೆಚ್ಚುವರಿಯಾಗಿ, ಗ್ರಾಹಕರು ಶೇಕಡಾ 20ರಷ್ಟು ಕ್ಯಾಶ್ಬ್ಯಾಕ್ ಮತ್ತು ವಿಸ್ತೃತ ಖಾತರಿ ಕೊಡುಗೆಗಳನ್ನು ಕಡಿಮೆ ಇಎಂಐ 1,990 ರವರೆಗೆ ಪಡೆಯಬಹುದು.
ಈ ಅವಧಿಯಲ್ಲಿ, ಗ್ರಾಹಕರು 22,999 ರೂ. ಮೌಲ್ಯದ ಸ್ಯಾಮ್ಸಂಗ್ನ ಗ್ಯಾಲಕ್ಸಿ ಎ 51 ಸ್ಮಾರ್ಟ್ಫೋನ್ ಅನ್ನು 65 ಇಂಚಿನ ಕ್ಯೂಎಲ್ಇಡಿ ಟಿವಿ ಮತ್ತು 75 ಇಂಚಿನ ಕ್ರಿಸ್ಟಲ್ 4 ಕೆ ಯುಹೆಚ್ಡಿ ಟಿವಿಗಳೊಂದಿಗೆ ಪಡೆಯುತ್ತಾರೆ. ಜೊತೆಗೆ 18,999 ರೂ. ಮೌಲ್ಯದ ಗ್ಯಾಲಕ್ಸಿ ಎ 31 ಸ್ಮಾರ್ಟ್ಫೋನ್ ಅನ್ನು 55 ಇಂಚಿನ ಕ್ಯೂಎಲ್ಇಡಿ ಟಿವಿಗಳು ಮತ್ತು 65 ಇಂಚಿನ ಕ್ರಿಸ್ಟಲ್ 4 ಕೆ ಯುಹೆಚ್ಡಿ ಟಿವಿಗಳೊಂದಿಗೆ ಪಡೆಯಲಿದ್ದಾರೆ.

75 ಇಂಚಿನ, 82 ಇಂಚಿನ ಮತ್ತು 85 ಇಂಚಿನ ಕ್ಯೂಎಲ್ಇಡಿ ಟಿವಿಗಳನ್ನು ಖರೀದಿಸುವ ಗ್ರಾಹಕರು ಆಯ್ದ ಟಿವಿ ಮಾದರಿಗಳಲ್ಲಿ 48,990 ರೂಪಾಯಿ ಮೌಲ್ಯದ ಸೌಂಡ್ಬಾರ್ ಎಚ್ಡಬ್ಲ್ಯೂ-ಕ್ಯೂ 800 ಟಿ ಅಥವಾ 99,990 ಮೌಲ್ಯದ ಸೌಂಡ್ಬಾರ್ ಎಚ್ಡಬ್ಲ್ಯೂ-ಕ್ಯೂ 900 ಟಿ ಪಡೆಯುತ್ತಾರೆ.
ಇದರ ಜೊತೆಗೆ ಕ್ಯೂಎಲ್ಇಡಿ ಟಿವಿಗಳು 10 ವರ್ಷಗಳ ಸ್ಕ್ರೀನ್ ಬರ್ನ್ ಇನ್ ವಾರೆಂಟಿ ಮತ್ತು , ಒಂದು ವರ್ಷದ ಸಮಗ್ರ ವಾರೆಂಟಿ ಜೊತೆಗೆ ಒಂದು ವರ್ಷ ಹೆಚ್ಚುವರಿ ಪ್ಯಾನೆಲ್ ವಾರೆಂಟಿ ಕೂಡ ಸಿಗಲಿದೆ ಎಂದು ಸ್ಯಾಮ್ಸಂಗ್ ಹೇಳಿಕೊಂಡಿದೆ.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು












Click it and Unblock the Notifications