ಎಟಿಎಂ ಮೇಲೆ 100 ಕೋಟಿ ಹೊರೆ ಹೊರಿಸಲಿದೆ 100ರ ಹೊಸ ನೋಟು
ನವದೆಹಲಿ, ಜುಲೈ 20: ಭಾರತೀಯ ರಿಸರ್ವ್ ಬ್ಯಾಂಕ್ 100 ಮುಖಬೆಲೆಯ ಚಿಕ್ಕಗಾತ್ರದ ಹೊಸ ಬೂದು ಬಣ್ಣದ ನೋಟುಗಳನ್ನು ಪರಿಚಯಿಸುತ್ತಿದೆ. ನೋಡಲು ಆಕರ್ಷಕವಾಗಿ ಕಾಣುವ ಈ ನೋಟುಗಳು ಬ್ಯಾಂಕುಗಳ ಮೇಲೆ ಸುಮಾರು ಒಟ್ಟಾರೆ 100 ಕೋಟಿ ರೂ. ಹೊರೆ ಹೊರಿಸಲಿವೆ.
ದೇಶದಲ್ಲಿ ಸುಮಾರು 2.4 ಲಕ್ಷ ಎಟಿಎಂ ಯಂತ್ರಗಳಿದ್ದು, ಈ ಎಲ್ಲ ಯಂತ್ರಗಳಲ್ಲಿಯೂ ನೂರರ ಹೊಸ ನೋಟುಗಳು ಲಭ್ಯವಾಗುವಂತೆ ಮಾಡಲು ತಂತ್ರಜ್ಞಾನವನ್ನು ಬದಲಿಸಬೇಕಾದ ಅಗತ್ಯವಿದೆ. ಇವುಗಳಿಗೆ 100 ಕೋಟಿಯಷ್ಟು ಹಣ ವೆಚ್ಚವಾಗಬಹುದು ಎನ್ನುತ್ತಾರೆ ಎಟಿಎಂ ಆಪರೇಷನ್ ಉದ್ದಿಮೆಯ ತಂತ್ರಜ್ಞರು.
200 ರೂ. ಮುಖಬೆಲೆಯ ಹೊಸ ನೋಟುಗಳನ್ನು ಎಟಿಎಂಗಳಿಗೆ ಅಳವಡಿಸುವ ಕಾರ್ಯವನ್ನು ಇನ್ನೂ ಮುಗಿಸುವ ಹಂತದಲ್ಲಿರುವ ತಂತ್ರಜ್ಞರಿಗೆ ಈಗ ಮತ್ತೊಂದು ಸವಾಲು ಎದುರಾಗಿದೆ.

'ನಾವು 100 ಮುಖಬೆಲೆಯ ಹೊಸ ನೋಟುಗಳು ಲಭ್ಯವಾಗುವಂತೆ ಮಾಡಲು ಎಟಿಎಂ ತಂತ್ರಜ್ಞಾನದಲ್ಲಿ ಬದಲಾವಣೆಗಳನ್ನು ಮಾಡಬೇಕಿದೆ.
ದೇಶದಾದ್ಯಂತ ಸುಮಾರು 2.4 ಲಕ್ಷ ಯಂತ್ರಗಳಿದ್ದು, ಈ ಎಲ್ಲ ಯಂತ್ರಗಳಲ್ಲಿಯೂ ಬದಲಾವಣೆ ಮಾಡಬೇಕಿರುವುದರಿಂದ ಈ ಕಾರ್ಯಕ್ಕೆ ಅಂದಾಜು 100 ಕೋಟಿ ರೂ. ವೆಚ್ಚ ತಗಲಬಹುದು' ಎಂದು ಎಫ್ಎಸ್ಎಸ್ ಸಂಸ್ಥೆಯ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ತಿಳಿಸಿದ್ದಾರೆ.
ನೂರರ ಮುಖಬೆಲೆಯ ಹಳೆಯ ಮತ್ತು ಹೊಸ ಎರಡೂ ಬಗೆಯ ನೋಟುಗಳು ಲಭ್ಯವಾಗಲಿವೆ. ಇವೆರಡನ್ನೂ ಎಟಿಎಂನಲ್ಲಿ ಲಭಿಸುವಂತೆ ಮಾಡುವುದು ದೊಡ್ಡ ಸವಾಲು.
ಎಟಿಎಂಗಳಲ್ಲಿ ಹಳೆಯ ನೋಟುಗಳ ಮುಂದುವರಿಕೆ, ಹೊಸ ನೋಟುಗಳ ಬಿಡುಗಡೆ ಹಾಗೂ ಅವುಗಳ ಲಭ್ಯತೆಯು ಎಟಿಎಂ ತಂತ್ರಜ್ಞಾನದ ಮರುಜೋಡಣೆಯ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ ಎಂದರು.
ನೂರರ ಹಳೆಯ ನೋಟುಗಳ ವಿತ್ಡ್ರಾದಿಂದ ಉಂಟಾಗುವ ಅಂತರವನ್ನು ಹೊಸ ನೋಟುಗಳು ತುಂಬಲು ವಿಫಲವಾದರೆ, ಈ ಅಸಮತೋಲನ ನಿವಾರಣೆಯಾಗುವವರೆಗೂ ಎಟಿಎಂಗಳಲ್ಲಿ ನೂರರ ನೋಟುಗಳ ಹಂಚಿಕೆಗೆ ಹೊಡೆತ ಬೀಳುತ್ತದೆ.
200 ಮುಖಬೆಲೆಯ ನೋಟುಗಳನ್ನು ಎಟಿಎಂಗಳಿಗೆ ಅಳವಡಿಸುವ ಕಾರ್ಯವೇ ಇನ್ನೂ ಮುಗಿದಿಲ್ಲ. ವ್ಯವಸ್ಥಿತ ಯೋಜನೆ ಮಾಡಿಕೊಳ್ಳದೆ ಇದ್ದರೆ 100ರ ಮುಖಬೆಲೆಯ ನೋಟುಗಳನ್ನು ಅಳವಡಿಸುವ ಕೆಲಸವೂ ವಿಳಂಬವಾಗುತ್ತದೆ ಎಂದು ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications