ಕಿಲ್ಲರ್ ಜೀನ್ಸ್ ಮಳಿಗೆ 336ಕ್ಕೇರಿಸಲು ಗುರಿ : ಕೇವಲ್ ಕಿರಣ್ ಸಂಸ್ಥೆ
ಬೆಂಗಳೂರು, ಮಾರ್ಚ್ 26: ಅಗ್ರಗಣ್ಯ ಡೆನಿಮ್ ಬ್ರಾಂಡ್ ಆದ ಕಿಲ್ಲರ್ ಜೀನ್ಸ್ ನ ಮಾಲೀಕತ್ವ ಸಂಸ್ಥೆಯಾದ ಕೇವಲ್ ಕಿರಣ್ ಕ್ಲೋಥಿಂಗ್ಸ್ ಲಿಮಿಟೆಡ್, ಮುಂದಿನ ಎರಡು ವರ್ಷಗಳಲ್ಲಿ ತನ್ನ ವಿತರಣಾ ಜಾಲವನ್ನು ದೇಶಾದ್ಯಂತ ಸುಸ್ಥಿರವಾಗಿ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ಪ್ರಸ್ತುತ ಇರುವ 125ಕ್ಕೂ ಹೆಚ್ಚು ವಿತರಕರ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ.
ಕಂಪನಿಯು ಪ್ರಸ್ತುತ 125ಕ್ಕೂ ಹೆಚ್ಚು ಮುಂಚೂಣಿ ವಿತರಕರನ್ನು ದೇಶದ 25 ರಾಜ್ಯಗಳ 209 ನಗರಗಳಲ್ಲಿ ಹೊಂದಿದೆ. ಪ್ರಸ್ತುತ ಕಂಪನಿಯು 318 ಕೆ-ಲಾಂಜ್ ಅಥವಾ ಎಕ್ಸ್ ಕ್ಲ್ಯೂಸಿವ್ ಬ್ರಾಂಡ್ ರೀಟೆಲ್ ಮಳಿಗೆಗಳನ್ನು ರಾಷ್ಟ್ರಾದ್ಯಂತ ಹೊಂದಿದ್ದು, ಈ ಹಣಕಾಸು ವರ್ಷದ ಒಳಗಾಗಿ ಇದನ್ನು 336 ಮಳಿಗೆಗಳಿಗೆ ಹೆಚ್ಚಿಸಲು ಕಾರ್ಯತಂತ್ರ ರೂಪಿಸಲಾಗಿದೆ.
ಒಟ್ಟಾರೆ ಆದಾಯದಲ್ಲಿ ದಕ್ಷಿಣ ಭಾರತ ಸುಮಾರು ಶೇಕಡ 20ರಷ್ಟು ಪಾಲನ್ನು ಹೊಂದಿದ್ದು, ಪೂರ್ವ ಪ್ರದೇಶವನ್ನು ಹೊರತುಪಡಿಸಿದರೆ ಎರಡನೇ ಅತಿಹೆಚ್ಚು ಕೊಡುಗೆ ನೀಡುವ ಪ್ರದೇಶವಾಗಿದೆ. ಆದ್ದರಿಂದ ದಕ್ಷಿಣ ಭಾರತದಲ್ಲಿ ತನ್ನ ಜಾಲವನ್ನು ಮತ್ತಷ್ಟು ಬಲಪಡಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯು ಕರ್ನಾಟಕದಲ್ಲಿ ಪ್ರಸ್ತುತ 10 ಮಳಿಗೆಗಳನ್ನು ಹೊಂದಿದ್ದು, ಇದನ್ನು ವೇಗವಾಗಿ ವಿಸ್ತರಿಸಲು ಮುಂದಾಗಿದೆ.

ವಿತರಕರನ್ನು ಹೆಚ್ಚಿಸಲು ಕಾರ್ಯತಂತ್ರ
ಕಂಪನಿಯು ಪ್ರಸ್ತುತ 125ಕ್ಕೂ ಹೆಚ್ಚು ಮುಂಚೂಣಿ ವಿತರಕರನ್ನು ದೇಶದ 25 ರಾಜ್ಯಗಳ 209 ನಗರಗಳಲ್ಲಿ ಹೊಂದಿದೆ. ಪ್ರಸ್ತುತ ಕಂಪನಿಯು 318 ಕೆ-ಲಾಂಜ್ ಅಥವಾ ಎಕ್ಸ್ ಕ್ಲ್ಯೂಸಿವ್ ಬ್ರಾಂಡ್ ರೀಟೆಲ್ ಮಳಿಗೆಗಳನ್ನು ರಾಷ್ಟ್ರಾದ್ಯಂತ ಹೊಂದಿದ್ದು, ಈ ಹಣಕಾಸು ವರ್ಷದ ಒಳಗಾಗಿ ಇದನ್ನು 336 ಮಳಿಗೆಗಳಿಗೆ ಹೆಚ್ಚಿಸಲು ಕಾರ್ಯತಂತ್ರ ರೂಪಿಸಲಾಗಿದೆ.

ಸಿಎಂಡಿ ಕೇವಲ್ಚಂದ್ ಜೈನ್ ಮಾತನಾಡಿ
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟೆಡ್ನ ಸಿಎಂಡಿ ಕೇವಲ್ಚಂದ್ ಜೈನ್ ಅವರು, "ಸಿದ್ಧ ಉಡುಪುಗಳ ಉದ್ಯಮದಲ್ಲಿ ಅತಿದೊಡ್ಡ ಗ್ರಾಹಕ ನೆಲೆಯನ್ನು ಹೊಂದಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನಮ್ಮ ಅಗ್ರಗಣ್ಯ ಬ್ರಾಂಡ್ ಕಿಲ್ಲರ್, ಈ ದೇಶದ ಜನತೆಗೆ ಡೆನಿಮ್ನಲ್ಲಿ ಮುಂಚೂಣಿ ಆಯ್ಕೆಯಾಗಿದೆ. ಈ ವಿಸ್ತರಣೆಯ ಮೂಲಕ ಮಾರುಕಟ್ಟೆಯಲ್ಲಿ ಮತ್ತಷ್ಟು ಪ್ರಾಬಲ್ಯ ಹೊಂದಲು ಸಾಧ್ಯವಾಗಲಿದೆ" ಎಂದು ಹೇಳಿದರು.

ಕಂಪನಿಯ ಅಗ್ರಗಣ್ಯ ಬ್ರಾಂಡ್ ಕಿಲ್ಲರ್
ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟೆಡ್ನ ಅಗ್ರಗಣ್ಯ ಬ್ರಾಂಡ್ ಕಿಲ್ಲರ್ ಆಗಿದ್ದು, ಇತರ ಬ್ರಾಂಡ್ಗಳಾದ ಲಾಮನ್ಪಿಜಿ3, ಇಂಟೆಗ್ರಿಟಿ ಮತ್ತು ಈಯಾಸೆಸ್ಗಳು ಕಂಪನಿಯ ಮುರು ದಶಕಗಳ ಅಸ್ತಿತ್ವದಲ್ಲಿ ಗಾತ್ರದಲ್ಲಿ ಬೃಹತ್ ಆಗಿ ಬೆಳೆದ ಬ್ರಾಂಡ್ಗಳಲ್ಲಿ ಸೇರಿವೆ.

ತಲೆಯಿಂದ ಕಾಲಿನ ತನಕದ ವಸ್ತ್ರ
ಇದಕ್ಕೆ ಜನ ಮನಸೋತಿರುವುದು, ಕೆಕೆಸಿಎಲ್ನ ಪೂರಕ ಘಟಕಗಳು ತಲೆಯಿಂದ ಹಿಡಿದು ಕಾಲಿನವರೆಗಿನ ಜೀವನಶೈಲಿ ಉತ್ಪನ್ನಗಳನ್ನು ಅಂದರೆ ಡಿಯೋಡ್ರಂಡ್, ವಾಚ್, ವೆಲೆಟ್, ಬೆಲ್ಟ್ ಹಾಗೂ ಒಳ ಉಡುಪುಗಳನ್ನು ತಯಾರಿಸುತ್ತಿವೆ. ವ್ಯವಹಾರದ ಈ ವಲಯವು ವೈವಿಧ್ಯಮಯ ಶೈಲಿಯ ಉತ್ಪನ್ನಗಳ ಮೂಲಕ ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ಆಕರ್ಷಿಸಿದೆ.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Adani: ವಿಕಲಚೇತನ ಛಾಯಾಗ್ರಾಹಕರಿಗಾಗಿ 'ಗ್ಲೋಬಲ್ ಎಬಿಲಿಟಿ ಫೋಟೋಗ್ರಫಿ ಚಾಲೆಂಜ್ 2026' ಘೋಷಣೆ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಮಾರ್ಚ್ 26ರ ದರಪಟ್ಟಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ











Click it and Unblock the Notifications