ಇನ್ಫೋಸಿಸ್ಸಿಗೆ ಶುಭ ಶುಕ್ರವಾರ, ಅಪರಿಮಿತ ಲಾಭ!
ಬೆಂಗಳೂರು, ಜ.9: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಶುಕ್ರವಾರ ಪ್ರಕಟಿಸಿದೆ. ಡಿ.31, 2014ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗೂ ಮೀರಿದ ಆದಾಯ ಲಾಭವನ್ನು ಸಿಕ್ಕಾ ಅವರ ಕಂಪನಿ ದಾಖಲಿಸಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ ವಿಶ್ಲೇಷಕರ ಎಣಿಕೆಯಂತೆ 3,150 ಕೋಟಿ ರು ಲಾಭದ ನಿರೀಕ್ಷೆಯಿತ್ತು. ಅದರೆ, ಈ ತ್ರೈಮಾಸಿಕ ಅವಧಿಯಲ್ಲಿ 3,250 ಕೋಟಿ ರು ಲಾಭ ದಾಖಲಾಗಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಒಟ್ಟಾರೆ ಆದಾಯ ಗಳಿಕೆ ಕೂಡಾ ನಿರೀಕ್ಷಿತ ಮಟ್ಟದಲ್ಲಿದೆ. ಕಳೆದ ತ್ರೈಮಾಸಿಕದಲ್ಲಿ 13,342 ಕೋಟಿ ರು ಗಳಿಕೆ ಕಂಡಿದ್ದ ಕಂಪನಿ ಈ ತ್ರೈಮಾಸಿಕದಲ್ಲಿ 13,796 ಕೋಟಿ ರು ಆದಾಯ ಪಡೆದುಕೊಂಡಿದೆ. [Q2 ವರದಿ: ಇನ್ಫೋಸಿಸ್ ಗೆ ಲಾಭ]
ತ್ರೈಮಾಸಿಕ ವರದಿ ಪ್ರಕಟಗೊಂಡ ಬೆನ್ನಲ್ಲೇ ಕಂಪನಿಯ ಷೇರುಗಳು ಶೇ 5ರಷ್ಟು ಏರಿಕೆ ಕಂಡಿದೆ. ಮುಖ್ಯವಾಗಿ ಡಾಲರ್ ಆದಾಯ ಮಾರ್ಗದರ್ಶಿ ಚೇತರಿಕೆ ನೀಡಿದೆ. ದಿನದಲ್ಲಿ 2095 ಮುಖಬೆಲೆಯಂತೆ ಷೇರುಗಳು ಏರಿಕೆ ಕಂಡಿತ್ತು. [ಇನ್ಫೋಸಿಸ್ಸಿನ 'ಸೇನಾಪತಿ']

ಮೂರನೇ ತ್ರೈಮಾಸಿಕ 2014 ಡಾಲರ್ ಆದಾಯ ಮಾರ್ಗದರ್ಶಿ 2218 ಮಿಲಿಯನ ಡಾಲರ್ ಆಗಿದ್ದು, ನಿರೀಕ್ಷಿತ ಮಟ್ಟ ಮುಟ್ಟಲಾಗಿಲ್ಲ. ನಿರ್ವಹಣಾ ವೆಚ್ಚ ಕೂಡಾ ಶೇ 26.74ರಷ್ಟು ಏರಿಕೆ ಕಂಡಿದೆ. ಶೇ 7-9ರಂತೆ ಡಾಲರ್ ಆದಾಯ ಮಾರ್ಗದರ್ಶಿಯನ್ನು ಕಂಪನಿ ನೀಡಿರುವುದಕ್ಕೆ ಮಾರುಕಟ್ಟೆಯಲ್ಲೂ ಸ್ವಾಗತ ಸಿಕ್ಕಿದೆ. [ವಿಶಾಲ ಸಿಕ್ಕಾ ಬಂದ ಜೋಳಿಗೆ ತುಂಬಾ ಐಫೋನ್ ತಂದ]
ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ಸ್ಥಾಪಕರಾದ ಕ್ರಿಸ್ ಗೋಪಾಲಕೃಷ್ಣನ್ ಹಾಗೂ ನಾರಾಯಣ ಮೂರ್ತಿ ಅವರ ನಿರ್ಗಮನದೊಂದಿಗೆ ಕಂಪನಿಯ ಎಲ್ಲಾ ಏಳು ಸ್ಥಾಪಕರು ಸಂಸ್ಥೆಯನ್ನು ತೊರೆದ್ದಂತಾಗಿದೆ. ಒಟ್ಟಾರೆ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿ ಬಂದ ಮೇಲೆ ಹೊಸ ಉತ್ಸಾಹದೊಂದಿಗೆ ಇನ್ಫೋಸಿಸ್ ಬದಲಾವಣೆ ಹಾಗೂ ಯಶಸ್ಸಿನ ಹಾದಿ ಹಿಡಿಯುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications