ನಿರೀಕ್ಷೆಗೂ ಮೀರಿದ ಲಾಭ ದಾಖಲಿಸಿದ ಇನ್ಫೋಸಿಸ್
ಬೆಂಗಳೂರು, ಅ.10: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಶುಕ್ರವಾರ ಪ್ರಕಟಿಸಿದೆ. ಸೆ.30, 2014ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗೂ ಮೀರಿದ ಆದಾಯ ಲಾಭವನ್ನು ಸಿಕ್ಕಾ ಅವರ ಕಂಪನಿ ದಾಖಲಿಸಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ ವಿಶ್ಲೇಷಕರ ಎಣಿಕೆಯಂತೆ 2,800 ಕೋಟಿ ರು ಲಾಭದ ನಿರೀಕ್ಷೆಯಿತ್ತು. ಅದರೆ, ಈ ತ್ರೈಮಾಸಿಕ ಅವಧಿಯಲ್ಲಿ 3096 ಕೋಟಿ ರು ಲಾಭ ದಾಖಲಾಗಿದೆ. ಒಟ್ಟಾರೆ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 28.6ರಷ್ಟು ಅಧಿಕ ನಿವ್ವಳ ಲಾಭ ಬಂದಿದೆ. [Q1 ವರದಿ: ಇನ್ಫೋಸಿಸ್ ಗೆ ಲಾಭ]
ಸಂಸ್ಥೆಯ ಆದಾಯ 13,342 ಕೋಟಿ ರು ನಷ್ಟಿದ್ದು ಶೇ 7.3ರಷ್ಟು ಏರಿಕೆ ಕಂಡು ಬಂದಿದೆ. ಇಬಿಐಟಿ ಮಾರ್ಜಿನ್(Earnings Before Interest & Tax) ಶೇ 26.1ರಷ್ಟಿದ್ದು 3483 ಕೋಟಿ ರು ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಸುಮರು 100 ಮೂಲಾಂಶ ಅಂಕ ಅಧಿಕವಾಗಿ ಬಂದಿದೆ.

ಬೋನಸ್ : ಡಾಲರ್ ಆದಾಯ 2201 ಮಿಲಿಯನ್ ಡಾಲರ್ ನಷ್ಟಿದ್ದು ಶೇ 3.1ರಷ್ಟು ಪ್ರಗತಿ ಹೊಂದಲಾಗಿದೆ. ಉತ್ತರ ಅಮೆರಿಕದಲ್ಲಿ ಶೇ 3.1, ಯುರೋಪಿನಲ್ಲಿ ಶೇ 4.2, ವಿಶ್ವದ ಇತರೆಡೆ ಶೇ 2.8ರಷ್ಟು ಪ್ರಗತಿ ಕಂಡಿದೆ. ಇದೇ ಖುಷಿಯಲ್ಲಿ ಇನ್ಫೋಸಿಸ್ ಬೋರ್ಡ್ 1:1 ಅನುಪಾತದಲ್ಲಿ ಮಧ್ಯಂತರ ಡಿವಿಡೆಂಡ್ 30 ರು ಪ್ರತಿಷೇರಿನಂತೆ ಘೋಷಣೆ ಮಾಡಿದೆ. [ಇನ್ಫೋಸಿಸ್ಸಿನ 'ಸೇನಾಪತಿ']
ಸ್ಥಾಪಕರ ನಿರ್ಗಮನ: ಶುಕ್ರವಾರ (ಅ.10) ಕಂಪನಿಯ ಸ್ಥಾಪಕರಾದ ಕ್ರಿಸ್ ಗೋಪಾಲಕೃಷ್ಣನ್ ಹಾಗೂ ನಾರಾಯಣ ಮೂರ್ತಿ ಅವರ ನಿರ್ಗಮನದೊಂದಿಗೆ ಕಂಪನಿಯ ಎಲ್ಲಾ ಏಳು ಸ್ಥಾಪಕರು ಸಂಸ್ಥೆಯನ್ನು ತೊರೆದ್ದಂತಾಗಿದೆ. ಸ್ಥಾಪಕರ ಜೊತೆ ಒಂದು ದಿನ ಎಂಬ ಕಾರ್ಯಕ್ರಮವನ್ನು ಇನ್ಫೋಸಿಸ್ ನಲ್ಲಿ ಆಯೋಜಿಸಲಾಗಿತ್ತು. [ಸಿಕ್ಕಾ ಸಿಕ್ಕಾಪಟ್ಟೆ ಸಂಬಳ ಏರಿಸ್ತಾರಪ್ಪ!]
ಹೊಸ ಗ್ರಾಹಕ : ಇನ್ಫೋಸಿಸ್ ಈ ಅವಧಿಯಲ್ಲಿ 49 ಹೊಸ ಗ್ರಾಹಕರನ್ನು ಹೊಂದಿದೆ. 14,255 ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸೆ.30, 2014ಕ್ಕೆ ಅನ್ವಯವಾಗುವಂತೆ ಇನ್ಫೋಸಿಸ್ ನಲ್ಲಿ ಸುಮಾರು 1,65,411 ಉದ್ಯೋಗಿಗಳಿದ್ದಾರೆ. ಜೂನ್ ನಲ್ಲಿ ಶೇ 19.5ರಷ್ಟಿದ್ದ ಕಂಪನಿಯ attrition ಪ್ರಮಾಣದ ಶೇ 20.1 ಕ್ಕೇರಿದೆ. ಒಟ್ಟಾರೆ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿ ಬಂದ ಮೇಲೆ ಹೊಸ ಉತ್ಸಾಹದೊಂದಿಗೆ ಇನ್ಫೋಸಿಸ್ ಬದಲಾವಣೆ ಹಾಗೂ ಯಶಸ್ಸಿನ ಹಾದಿ ಹಿಡಿಯುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications