ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಲುಗಾಡಿಸುತ್ತದಾ ಇ-ರುಪೀ? ಆರ್ಬಿಐ ಹೇಳುವುದೇನು?
ನವದೆಹಲಿ, ಅ. 9: ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳ ಬಲೂನು ದೊಡ್ಡದಾಗುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ಭಾರತದಿಂದಲೇ ಪ್ರತ್ಯೇಕ ಡಿಜಿಟಲ್ ಕರೆನ್ಸಿ ತರಲಾಗುವ ಬಗ್ಗೆ ಮಾತನಾಡಿದ್ದರು. ಅದೀಗ ಸಾಕಾರಗೊಳ್ಳುವ ಪ್ರಕ್ರಿಯೆಗಳು ಆರಂಭವಾಗಲಿವೆ.
ಡಿಜಿಟಲ್ ರುಪೀ ಆಗಮನದಿಂದ ಭಾರತದಲ್ಲಿ ಡಿಜಿಟಲ್ ಪೇಮೆಂಟ್ಸ್ ವ್ಯವಸ್ಥೆಯ ಭವಿಷ್ಯ ಏನಾಗಬಹುದು ಎಂಬ ಅನುಮಾನಕ್ಕೆ ಆರ್ಬಿಐ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಈಗಿರುವ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪೂರಕವಾಗಿ ಇ-ರುಪೀ ಇರುತ್ತದೆಯೇ ಹೊರತು ಹೊಸ ವ್ಯವಸ್ಥೆಗೆ ಎಡೆ ಮಾಡಿಕೊಡುವುದಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಅನ್ನು ಆರಂಭಿಸುವ ಪ್ರಾಯೋಗಿಕ ಹಂತದ ಯೋಜನೆಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಈ ಸಂದರ್ಭದಲ್ಲಿ ಹೇಳಿದೆ.

ಡಿಜಿಟಲ್ ರೂಪಾಯಿಯಿಂದ ಭಾರತೀಯ ಆರ್ಥಿಕತೆಗೆ ಸಹಾಯಕವಾಗುತ್ತದೆ. ಭೌತಿಕ ನಗದು ನಿರ್ವಹಣೆಯ ವೆಚ್ಚವನ್ನು ಕಡಿಮೆಗೊಳಿಸಬಹುದು. ಪೇಮೆಂಟ್ ಸೆಟಲ್ಮೆಂಟ್ ಮತ್ತು ಅಂತಾರಾಷ್ಟ್ರೀಯ ಪೇಮೆಂಟ್ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ ಎಂದು ಆರ್ಬಿಐ ಹೇಳಿದೆ.
ಮಾಮೂಲಿಯ ಬ್ಯಾಂಕ್ ನೋಟ್ಗಳಂತೆಯೇ ಡಿಜಿಟಲ್ ರೂಪಾಯಿ ಇದ್ದರೂ ಬಹಳ ಬೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ವಹಿವಾಟಾಗುವಂತೆ ರೂಪಿಸಲಾಗುತ್ತಿದೆ. ಬ್ಯಾಂಕ್ ಠೇವಣಿಗಳಿಗೆ ಪರ್ಯಾಯವಾಗಿ ಸಿಬಿಡಿಸಿ ಸುರಕ್ಷಿತ ವ್ಯವಸ್ಥೆಯಾಗಿರಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ಖಾಸಗಿ ಕ್ರಿಪ್ಟೋಕರೆನ್ಸಿಗಿಂತ ಸುರಕ್ಷಿತ
"ಡಿಜಿಟಲ್ ಕರೆನ್ಸಿಯನ್ನು ಸುರಕ್ಷಿತ ವ್ಯವಸ್ಥೆಯಾಗಿ ರೂಪಿಸುವ ಜವಾಬ್ದಾರಿ ಆರ್ಬಿಐನ ಮೇಲಿದೆ. ಖಾಸಗಿ ಕ್ರಿಪ್ಟೋಕರೆನ್ಸಿಗಳಿಂದ ಒದಗುವಂಥ ಅಪಾಯಗಳಿಂದ ಹೊರತಾಗಿರುವಂತೆ ನೋಡಿಕೊಂಡು, ಕರೆನ್ಸಿಯನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುವ ವ್ಯವಸ್ಥೆ ರೂಪಿಸಬೇಕು" ಎಂದು ಭಾರತದ ಸೆಂಟ್ರಲ್ ಬ್ಯಾಂಕ್ ವಿವರಿಸಿದೆ.

ಆಫ್ಲೈನ್ ಫೀಚರ್
ಡಿಜಿಟಿಲ್ ಕರೆನ್ಸಿಯಾದ ಸಿಬಿಡಿಸಿಯಲ್ಲಿ ಆಫ್ಲೈನ್ ಫೀಚರ್ ಇದ್ದು, ಇದರಿಂದ ಇಂಟರ್ನೆಟ್ ಸಂಪರ್ಕದ ಮಿತಿ ಇರುವ ದೂರದ ಸ್ಥಳಲ್ಲಿ ಜನರು ನಿರಾತಂಕವಾಗಿ ಪೇಮೆಂಟ್ ಸೇವೆ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ, ದೇಶದ ಆರ್ಥಿಕತೆಯ ಹಣಕಾಸು ಸ್ಥಿರತೆ ಹಾಳಾಗದಂತೆ, ಖಾಸಗಿ ಕ್ರಿಪ್ಟೋಕರೆನ್ಸಿಯ ಪೂರ್ಣ ಪ್ರಯೋಜನಗಳನ್ನೂ ಸಿಗುವಂತೆ ಆಗಲು ಸಿಬಿಡಿಸಿ ಸಹಾಯಕವಾಗುತ್ತದೆ ಎಂಬುದು ಅರ್ಬಿಐನ ನಿರೀಕ್ಷೆ.
ಆದರೆ, ಡಿಜಿಟಲ್ ಕರೆನ್ಸಿಯಿಂದ ಹಣಕಾಸು ನೀತಿಯ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದು ಆರ್ಬಿಐನ ಅಂದಾಜಿಗೆ ಇನ್ನೂ ನಿಲುಕಿಲ್ಲ. ಹಾಗೆಯೇ, ಇ-ರುಪೀ ಅನ್ನು ಯಾವ ಕ್ರಿಪ್ಟೋ ತಂತ್ರಜ್ಞಾನದಲ್ಲಿ ಚಾಲನೆಗೆ ತರಬೇಕೆಂಬ ಗೊಂದಲ ಇನ್ನೂ ದೂರವಾಗಿಲ್ಲ. ಸಿಬಿಡಿಸಿ ಕರೆನ್ಸಿಗೆ ಕೇಂದ್ರೀಯವಾಗಿ ನಿಯಂತ್ರಣ ಮಾಡುವ ಡಾಟಾಬೇಸ್ನ ತಂತ್ರಜ್ಞಾನವೋ ಅಥವಾ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ತಂತ್ರಜ್ಞಾನವೋ ಎಂಬುದು ನಿರ್ಧಾರವಾಗಬೇಕು. ಹೆಚ್ಚು ಸುರಕ್ಷಿತವೆನಿಸುವ ತಂತ್ರಜ್ಞಾನವನ್ನು ಆರ್ಬಿಐ ಆಯ್ದುಕೊಳ್ಳುವ ನಿರೀಕ್ಷೆ ಇದೆ.
(ಒನ್ಇಂಡಿಯಾ ಸುದ್ದಿ)
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications