ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಲುಗಾಡಿಸುತ್ತದಾ ಇ-ರುಪೀ? ಆರ್ಬಿಐ ಹೇಳುವುದೇನು?
ನವದೆಹಲಿ, ಅ. 9: ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳ ಬಲೂನು ದೊಡ್ಡದಾಗುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ಭಾರತದಿಂದಲೇ ಪ್ರತ್ಯೇಕ ಡಿಜಿಟಲ್ ಕರೆನ್ಸಿ ತರಲಾಗುವ ಬಗ್ಗೆ ಮಾತನಾಡಿದ್ದರು. ಅದೀಗ ಸಾಕಾರಗೊಳ್ಳುವ ಪ್ರಕ್ರಿಯೆಗಳು ಆರಂಭವಾಗಲಿವೆ.
ಡಿಜಿಟಲ್ ರುಪೀ ಆಗಮನದಿಂದ ಭಾರತದಲ್ಲಿ ಡಿಜಿಟಲ್ ಪೇಮೆಂಟ್ಸ್ ವ್ಯವಸ್ಥೆಯ ಭವಿಷ್ಯ ಏನಾಗಬಹುದು ಎಂಬ ಅನುಮಾನಕ್ಕೆ ಆರ್ಬಿಐ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಈಗಿರುವ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪೂರಕವಾಗಿ ಇ-ರುಪೀ ಇರುತ್ತದೆಯೇ ಹೊರತು ಹೊಸ ವ್ಯವಸ್ಥೆಗೆ ಎಡೆ ಮಾಡಿಕೊಡುವುದಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಅನ್ನು ಆರಂಭಿಸುವ ಪ್ರಾಯೋಗಿಕ ಹಂತದ ಯೋಜನೆಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಈ ಸಂದರ್ಭದಲ್ಲಿ ಹೇಳಿದೆ.

ಡಿಜಿಟಲ್ ರೂಪಾಯಿಯಿಂದ ಭಾರತೀಯ ಆರ್ಥಿಕತೆಗೆ ಸಹಾಯಕವಾಗುತ್ತದೆ. ಭೌತಿಕ ನಗದು ನಿರ್ವಹಣೆಯ ವೆಚ್ಚವನ್ನು ಕಡಿಮೆಗೊಳಿಸಬಹುದು. ಪೇಮೆಂಟ್ ಸೆಟಲ್ಮೆಂಟ್ ಮತ್ತು ಅಂತಾರಾಷ್ಟ್ರೀಯ ಪೇಮೆಂಟ್ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ ಎಂದು ಆರ್ಬಿಐ ಹೇಳಿದೆ.
ಮಾಮೂಲಿಯ ಬ್ಯಾಂಕ್ ನೋಟ್ಗಳಂತೆಯೇ ಡಿಜಿಟಲ್ ರೂಪಾಯಿ ಇದ್ದರೂ ಬಹಳ ಬೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ವಹಿವಾಟಾಗುವಂತೆ ರೂಪಿಸಲಾಗುತ್ತಿದೆ. ಬ್ಯಾಂಕ್ ಠೇವಣಿಗಳಿಗೆ ಪರ್ಯಾಯವಾಗಿ ಸಿಬಿಡಿಸಿ ಸುರಕ್ಷಿತ ವ್ಯವಸ್ಥೆಯಾಗಿರಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ಖಾಸಗಿ ಕ್ರಿಪ್ಟೋಕರೆನ್ಸಿಗಿಂತ ಸುರಕ್ಷಿತ
"ಡಿಜಿಟಲ್ ಕರೆನ್ಸಿಯನ್ನು ಸುರಕ್ಷಿತ ವ್ಯವಸ್ಥೆಯಾಗಿ ರೂಪಿಸುವ ಜವಾಬ್ದಾರಿ ಆರ್ಬಿಐನ ಮೇಲಿದೆ. ಖಾಸಗಿ ಕ್ರಿಪ್ಟೋಕರೆನ್ಸಿಗಳಿಂದ ಒದಗುವಂಥ ಅಪಾಯಗಳಿಂದ ಹೊರತಾಗಿರುವಂತೆ ನೋಡಿಕೊಂಡು, ಕರೆನ್ಸಿಯನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುವ ವ್ಯವಸ್ಥೆ ರೂಪಿಸಬೇಕು" ಎಂದು ಭಾರತದ ಸೆಂಟ್ರಲ್ ಬ್ಯಾಂಕ್ ವಿವರಿಸಿದೆ.

ಆಫ್ಲೈನ್ ಫೀಚರ್
ಡಿಜಿಟಿಲ್ ಕರೆನ್ಸಿಯಾದ ಸಿಬಿಡಿಸಿಯಲ್ಲಿ ಆಫ್ಲೈನ್ ಫೀಚರ್ ಇದ್ದು, ಇದರಿಂದ ಇಂಟರ್ನೆಟ್ ಸಂಪರ್ಕದ ಮಿತಿ ಇರುವ ದೂರದ ಸ್ಥಳಲ್ಲಿ ಜನರು ನಿರಾತಂಕವಾಗಿ ಪೇಮೆಂಟ್ ಸೇವೆ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ, ದೇಶದ ಆರ್ಥಿಕತೆಯ ಹಣಕಾಸು ಸ್ಥಿರತೆ ಹಾಳಾಗದಂತೆ, ಖಾಸಗಿ ಕ್ರಿಪ್ಟೋಕರೆನ್ಸಿಯ ಪೂರ್ಣ ಪ್ರಯೋಜನಗಳನ್ನೂ ಸಿಗುವಂತೆ ಆಗಲು ಸಿಬಿಡಿಸಿ ಸಹಾಯಕವಾಗುತ್ತದೆ ಎಂಬುದು ಅರ್ಬಿಐನ ನಿರೀಕ್ಷೆ.
ಆದರೆ, ಡಿಜಿಟಲ್ ಕರೆನ್ಸಿಯಿಂದ ಹಣಕಾಸು ನೀತಿಯ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದು ಆರ್ಬಿಐನ ಅಂದಾಜಿಗೆ ಇನ್ನೂ ನಿಲುಕಿಲ್ಲ. ಹಾಗೆಯೇ, ಇ-ರುಪೀ ಅನ್ನು ಯಾವ ಕ್ರಿಪ್ಟೋ ತಂತ್ರಜ್ಞಾನದಲ್ಲಿ ಚಾಲನೆಗೆ ತರಬೇಕೆಂಬ ಗೊಂದಲ ಇನ್ನೂ ದೂರವಾಗಿಲ್ಲ. ಸಿಬಿಡಿಸಿ ಕರೆನ್ಸಿಗೆ ಕೇಂದ್ರೀಯವಾಗಿ ನಿಯಂತ್ರಣ ಮಾಡುವ ಡಾಟಾಬೇಸ್ನ ತಂತ್ರಜ್ಞಾನವೋ ಅಥವಾ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ತಂತ್ರಜ್ಞಾನವೋ ಎಂಬುದು ನಿರ್ಧಾರವಾಗಬೇಕು. ಹೆಚ್ಚು ಸುರಕ್ಷಿತವೆನಿಸುವ ತಂತ್ರಜ್ಞಾನವನ್ನು ಆರ್ಬಿಐ ಆಯ್ದುಕೊಳ್ಳುವ ನಿರೀಕ್ಷೆ ಇದೆ.
(ಒನ್ಇಂಡಿಯಾ ಸುದ್ದಿ)
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications