ಹೂಡಿಕೆ ಹಿಂತೆಗೆತ ಅಥವಾ ಮುಚ್ಚುವುದು: ಏರ್ ಇಂಡಿಯಾಕ್ಕೆ ಎರಡೇ ಆಯ್ಕೆ ಎಂದ ಸರ್ಕಾರ
ನವದೆಹಲಿ, ಮಾರ್ಚ್ 27: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ಸಂಪೂರ್ಣವಾಗಿ ಖಾಸಗಿಗೆ ವಹಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಏರ್ ಇಂಡಿಯಾದಿಂದ ಶೇ 100ರಷ್ಟು ಹೂಡಿಕೆ ಹಿಂತೆಗೆಯಲಾಗುವುದು ಮತ್ತು ಅದು ಹೊಸ ಆಸರೆಯನ್ನು ಹುಡುಕಿಕೊಳ್ಳುವುದು ಅನಿವಾರ್ಯ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ. ಸಾಲದ ಸುಳಿಯಲ್ಲಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಹೂಡಿಕೆ ಹಿಂತೆಗೆಯುವ ಪ್ರಕ್ರಿಯೆ ಆರಂಭವಾಗಿದ್ದು, ಬಿಡ್ಗಳನ್ನು ಸಲ್ಲಿಸಲು ಆಸಕ್ತ ಖರೀದಿದಾರರಿಗೆ 64 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
'ಏರ್ ಇಂಡಿಯಾವನ್ನು ಶೇ 100ರಷ್ಟು ಬಂಡವಾಳ ಹಿಂತೆಗೆತಕ್ಕೆ ನಾವು ನಿರ್ಧರಿಸಿದ್ದೇವೆ. ಬಂಡವಾಳ ಹಿಂತೆಗೆಯ ಅಥವಾ ಹೂಡಿಕೆ ವಾಪಸ್ ಪಡೆಯದಿರುವ ನಡುವೆ ನಾವು ಆಯ್ಕೆ ಮಾಡುತ್ತಿಲ್ಲ. ಅದು ಹೂಡಿಕೆ ಹಿಂತೆಗೆತ ಮತ್ತು ಸಂಪೂರ್ಣ ಸ್ಥಗಿತಗೊಳಿಸುವುದರ ನಡುವೆ ಇದೆ. ಏರ್ ಇಂಡಿಯಾವು ಅತ್ಯುತ್ತಮ ಗುಣಮಟ್ಟದ ಆಸ್ತಿ. ಆದರೆ ಅದಕ್ಕೆ 60,000 ಕೋಟಿ ರೂ ಸಾಲದ ಹೊರೆ ಇದೆ. ಅದನ್ನು ಸಾಲದಿಂದ ಮುಕ್ತಗೊಳಿಸಿ ಸ್ವಚ್ಛಗೊಳಿಸಬೇಕಿದೆ. ಅದು ಹೊಸ ಆಸರೆಯನ್ನು ಕಂಡುಕೊಳ್ಳಲೇಬೇಕು' ಎಂದು ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಖರೀದಿಯ ಬಿಡ್ಡಿಂಗ್ ನಡೆಸಲು ವಿವಿಧ ಸಂಸ್ಥೆಗಳು ಕಳೆದ ತಿಂಗಳು ಆಸಕ್ತಿ ತೋರಿಸಿದ್ದವು. 'ಸೋಮವಾರ ನಡೆದ ಕಳೆದ ಸಭೆಯಲ್ಲಿ ಹೂಡಿಕೆ ಹಿಂತೆಗೆತ ಪ್ರಕ್ರಿಯೆಯಲ್ಲಿನ ಬಿಡ್ಡರ್ಗಳ ಶಾರ್ಟ್ ಪಟ್ಟಿಗೆ 64 ದಿನಗಳ ಒಳಗೆ ಅವರ ಬಿಡ್ಗಳು ಬರುವಂತೆ ಸೂಚಿಸಲಾಗಿತ್ತು. ಈ ಬಾರಿ ಈ ವಿಚಾರದಲ್ಲಿ ಯಾವುದೇ ಹಿಂದೇಟು ಹಾಕದೆ ಇರಲು ಸರ್ಕಾರ ದೃಢನಿರ್ಧಾರ ತೆಗೆದುಕೊಂಡಿದೆ' ಎಂದು ಅವರು ಹೇಳಿದ್ದಾರೆ.

ಏರ್ ಇಂಡಿಯಾದ ಹಣಕಾಸು ಮರು ರಚನೆಯ ಭಾಗವಾಗಿ 2,268 ಕೋಟಿ ರೂ ಮೊತ್ತವನ್ನು ವಿಶೇಷ ಉದ್ದೇಶದ ವಾಹನ ಸ್ಥಾಪನೆಗೆ ಸರ್ಕಾರ ಬಜೆಟ್ನಲ್ಲಿ ಹಂಚಿಕೆ ಮಾಡಿತ್ತು. ಮುಂದಿನ ಹಣಕಾಸು ವರ್ಷದೊಳಗೆ ಏರ್ ಇಂಡಿಯಾ ಮತ್ತು ಪವನ್ ಹನ್ಸ್ಗಳನ್ನು ಮುಂದಿನ ಹಣಕಾಸು ವರ್ಷದೊಳಗೆ ಖಾಸಗಿಗಳಿಗೆ ಒಪ್ಪಿಸಿ ಹುಡಿಕೆ ವಾಪಸ್ ಪಡೆಯುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications