ಮಾನವ ಸಂಬಂಧದ ಕತೆ ಹೇಳುವ ಬ್ರಿಟಿಷ್ ಏರ್ವೇಸ್ ವಿಡಿಯೋ
ಬೆಂಗಳೂರು, ಮಾರ್ಚ್, 16: ಇದೊಂದು ವಿಡಿಯೋ ಮಾನವ ಸಂಬಂಧಗಳ ಮೌಲ್ಯವನ್ನು ಸಾರಿ ಹೇಳುತ್ತದೆ. ಮಗನನನ್ನು ಇಂಗ್ಲೆಂಡ್ ನಲ್ಲಿ ಭೇಟಿ ಮಾಡಿ ಭಾರತಕ್ಕೆ ಹಿಂದಿರುಗುತ್ತಿದ್ದ ಹಿರಿಯ ಜೀವವನ್ನು ಸಾಂತ್ವನ ಮಾಡುವ ಪರಿ ಎಂಥವರನ್ನು ಒಂದು ಕ್ಷಣ ಮೂಢರನ್ನಾಗಿಸುತ್ತದೆ.
ಗಗನ ಸಖಿ ಮತ್ತು ಹಿರಿಯ ಜೀವದ ನಡುವಿನ ಬಾಂಧವ್ಯದ ಬದುಕನ್ನು ನೋಡಿಯೇ ಸವಿಯಬೇಕು. ವಿಮಾನದ ಸಿಬ್ಬಂದಿ ತಮ್ಮ ಪ್ರಯಾಣಿಕರನ್ನು ಕಾಣುವ ಬಗೆ, ಗಟ್ಟಿಗೊಳ್ಳುವ ಬಾಂಧವ್ಯ ಎಲ್ಲವೂ ಇಲ್ಲಿ ಕಾಣಸಿಗುತ್ತದೆ.[ನಮ್ಮ ಬೆಂಗಳೂರು ಹೀಗಾದರೆ ಚೆನ್ನ.. ವಿಡಿಯೋ ನೋಡಿ]
1924ರಿಂದ ಭಾರತನ್ನು ಪ್ರೀತಿಸುತ್ತಲೇ ಬಂದಿರುವ ಬ್ರಿಟಿಷ್ ಏರ್ ವೇಸ್ ನ ಸಂಬಂಧಗಳ ಒಟ್ಟು ಮೌಲ್ಯ ಈ ವಿಡಿಯೋದಲ್ಲಿದೆ. ವಿಮಾನ ಪ್ರಯಾಣ ಇಲ್ಲಿ ಕೇವಲ ಪ್ರಯಾಣವಲ್ಲ. ಮನುಷ್ಯರ ನಡುವಿನ ಸಂಬಂಧ ಸೇತು ಎಂದು ವಿಡಿಯೋ ಹೇಳುತ್ತದೆ.
ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ ವಿಡಿಯೋವನ್ನು ನೋಡಲೇಬೇಕು. ಮಗನನನ್ನು ನೋಡಿಕೊಂಡು ಹೈದರಾಬಾದಿಗೆ ಹಿಂದಿರುಗುತ್ತಿದ್ದ ತಾಯಿಯನ್ನು ಗಗನಸಖಿ ಆರೈಕೆ ಮಾಡುವ ಪರಿಯ ಪರಿಣಾಮ ಪ್ರಯಾಣದ ಅಂತ್ಯದಲ್ಲಿ ಆಕೆಗೆ ಮಗಳಾಗಿ ಬದಲಾಗುತ್ತಾಳೆ.[ಪ್ಲೂಟೋನ ಚಂದ್ರ ಚಾರೋನ್ನಲ್ಲಿ ಸಾಗರ ಕಂಡ ನಾಸಾ]
ಗಗನ ಸಖಿ ಹೆಲೆನಾ ಮತ್ತು ಭಾರತದ ಹಿರಿಯ ಜೀವ ತಾಯಿ ಮಗಳಂತೆ ಕಣ್ಣಲ್ಲೆ ಮಾತನಾಡಿಕೊಳ್ಳುತ್ತಾರೆ. ಮಗನನ್ನು ಇಂಗ್ಲೆಂಡಿನಲ್ಲೇ ಬಿಟ್ಟು ಬಂದ ನೋವು ವಿಮಾನ ಇಳಿಯುವ ವೇಳೆಗೆ ತಾಯಿಯಿಂದ ದೂರವಾಗಿರುತ್ತದೆ.
ಧನ್ಯವಾದ ಎಂಬ ಒಂದೇ ಪದದಿಂದ ಸಂಬಂಧ ಅಂತ್ಯವಾಗಲ್ಲ. ನಿಲ್ದಾಣದಲ್ಲಿ ಇಳಿಯುವ ವೇಳೆ ತಾಯಿ ತಮ್ಮ ಮನೆಗೆ ಬರುವಂತೆ ಹೆಲೆನಾಗೆ ಕೋರಿಕೊಳ್ಳುತ್ತಾರೆ. ಅಂತೆಯೇ ಹೆಲೆನಾ ಸಹ ಹಿರಿಯ ಜೀವದ ಮನೆಗೆ ಹೋಗುತ್ತಾರೆ. ಅಲ್ಲಿ ಆಕೆಗೆ ಸಕಲ ಆದರ-ಆಥಿತ್ಯಗಳು ದೊರೆಯುತ್ತವೆ.
ಕೊನೆಯಲ್ಲಿ ಹಿರಿಯ ಜೀವ ಕರವಸ್ತ್ರವೊಂದನ್ನು ಹೆಲೆನಾ ಕೈಗೆ ನೀಡುವಾಗ ನಿಮ್ಮ ಕಣ್ಣಲ್ಲೂ ನೀರು ಬರದೇ ಇರಲು ಸಾಧ್ಯವಿಲ್ಲ. ಇದೊಂದು ಚಿಕ್ಕ ವಿಡಿಯೋ ಬ್ರಿಟಿಷ್ ಏರ್ ವೇಸ್ ನ ಸೇವಾ ಮನೋಭಾವವನ್ನು, ಭಾರತೀಯರ ಅತಿಥಿ ಸತ್ಕಾರದ ಗುಣವನ್ನು, ತಾಯಿ-ಮಗಳ ಬಾಂಧವ್ಯವನ್ನು ನಮ್ಮ ಮುಂದೆ ಕಟ್ಟಿಕೊಡುತ್ತದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications