ಬ್ಯಾಂಕುಗಳಿಗೆ ಸರಣಿ ರಜೆ, ಗ್ರಾಹಕರಿಗೆ ಆಗಲಿದೆಯೆ ಸಜೆ?
ಬೆಂಗಳೂರು, ಮಾರ್ಚ್ 14: ಮಾರ್ಚ್ ತಿಂಗಳ ಅಂತ್ಯಕ್ಕೆ ಬ್ಯಾಂಕುಗಳಿಗೆ ಸರಣಿ ರಜೆ ಸಿಗುತ್ತಿದೆ. ಹಬ್ಬ ಹರಿದಿನಗಳಿಗೆ ತಯಾರಾಗುತ್ತಿರುವ ಜನ ಸಾಮಾನ್ಯರು ಈಗ ಬ್ಯಾಂಕುಗಳ ರಜೆಯನ್ನು ಎದುರಿಸಲು ಸಿದ್ಧರಾಗಬೇಕಿದೆ. ದೇಶದ ಹಲವೆಡೆ ಮಾರ್ಚ್ 23ರಿಂದ ಮಾರ್ಚ್ 27ರ ತನಕ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ ಗುಡ್ ಫ್ರೈಡೇ ದಿನದಂದು ಮಾತ್ರ ರಜೆ ಇದೆ.
ಕರ್ನಾಟಕದಲ್ಲಿ ಗುರುವಾರ(ಮಾರ್ಚ್ 24) ರಜೆ ಇಲ್ಲ, ಶುಕ್ರವಾರ (ಮಾರ್ಚ್ 25) ಗುಡ್ ಫ್ರೈಡೇ ರಜೆ, ಮಾರ್ಚ್ 26 ಶನಿವಾರ (ನಾಲ್ಕನೇ ಶನಿವಾರ) ರಜೆ ಹಾಗೂ ಭಾನುವಾರ ಕೂಡಾ ರಜೆ., ಹೀಗಾಗಿ ಮೂರು ದಿನ ರಜೆ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲೂ ಇರುತ್ತದೆ.
ಉತ್ತರ ಭಾರತದಲ್ಲಿ ಗುಡ್ ಫ್ರೈಡೇ ಜೊತೆಗೆ ಹೋಳಿ ಹಬ್ಬದ ಸಂಭ್ರಮಾಚರಣೆಗಾಗಿ ವಿವಿಧ ರಾಜ್ಯಗಳಲ್ಲಿ ರಜೆ ಘೋಷಿಸಲಾಗಿದೆ. ಕನಿಷ್ಠ ನಾಲ್ಕು ರಜೆ ಇದ್ದೇ ಇದೆ. ಈ ಸಮಯದಲ್ಲಿ ಎಟಿಎಂ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಗೆ ಮೊರೆ ಹೋಗದೆ ವಿಧಿ ಇಲ್ಲ.[2016ರ ದೇಶದ ಎಲ್ಲಾ ಬ್ಯಾಂಕುಗಳ ರಜೆ ಪಟ್ಟಿ ಇಲ್ಲಿದೆ]

ಮಾರ್ಚ್ 23ರಂದು ಉತ್ತರಪ್ರದೇಶದ ಬ್ಯಾಂಕುಗಳಿಗೆ ಮಾತ್ರ ರಜೆ. ಮಾರ್ಚ್ 24ರಂದು ದೇಶದ ವಿವಿಧೆಡೆ ಹೋಳಿ ರಜೆ, ಮಾರ್ಚ್ 25ರಂದು ಗುಡ್ ಫ್ರೈಡೇ(ಎಲ್ಲಾ ರಾಜ್ಯಗಳಿಗೂ ಅನ್ವಯ), ರಜೆಗಳ ಪಟ್ಟಿಗೆ ನಿಲ್ಲುವುದಿಲ್ಲ. ಮಾರ್ಚ್ 26ರಂದು ಶನಿವಾರ (ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆ ಇರುತ್ತದೆ) ರಜೆ, ಮಾರ್ಚ್ 27ರಂದು ಭಾನುವಾರದ ರಜೆ ಬೇರೆ ಸೇರಿದೆ.
ಉತ್ತರಪ್ರದೇಶ ಬಿಟ್ಟರೆ ಜಾರ್ಖಂಡ್ ಕೂಡಾ ಐದು ದಿನಗಳ ರಜೆ ಅನುಭವಿಸಲಿದೆ. ಗುಜರಾತ್, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಮಾರ್ಚ್ 25ರಂದು ಮಾತ್ರ ರಜೆ ಇದೆ. ಬಿಹಾರದಲ್ಲಿ ಮಾರ್ಚ್ 22ರಂದು 'ಬಿಹಾರ್ ದಿವಸ್' ಇರುವುದರಿಂದ ಮತ್ತೊಂದು ದಿನ ರಜೆ ಸಿಗಲಿದೆ. ಹೀಗಾಗಿ ಬಹುತೇಕ ದೇಶದ ಹಲವೆಡೆ ಸೋಮವಾರ ಹಾಗೂ ಮಂಗಳವಾರ ಮಾತ್ರ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿವೆ. ಗ್ರಾಹಕರು ಈ ವೇಳಾಪಟ್ಟಿಗೆ ತಕ್ಕಂತೆ ತಮ್ಮ ಯೋಜನೆ ಹಾಕಿಕೊಂಡರೆ ಒಳ್ಳೆಯದು.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications