ಭಾರತದಲ್ಲಿ ತನ್ನ ಮೊದಲ ಆನ್ಲೈನ್ ಮಳಿಗೆಯನ್ನು ತೆರೆಯಲಿದೆ ಆಪಲ್
ನವದೆಹಲಿ, ಸೆಪ್ಟೆಂಬರ್ 18: ಆಪಲ್ ತನ್ನ ಮೊದಲ ಆನ್ಲೈನ್ ಮಳಿಗೆಯನ್ನು ಮುಂದಿನ ವಾರ ಭಾರತದಲ್ಲಿ ತೆರೆಯಲಿದೆ. ಹೌದು, ಅಮೆರಿಕದ ತಂತ್ರಜ್ಞಾನ ದೈತ್ಯ ಆಪಲ್ ತನ್ನ ಮೊದಲ ಆನ್ಲೈನ್ ಅಂಗಡಿಯನ್ನು ಭಾರತದಲ್ಲಿ ಸೆಪ್ಟೆಂಬರ್ 23 ರಂದು ಪ್ರಾರಂಭಿಸಲಿದೆ.
ಈ ಮಾಹಿತಿಯನ್ನು ಆಪಲ್ ಸಿಇಒ ಟಿಮ್ ಕುಕ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಪ್ರತಿವರ್ಷ ಮಾರಾಟದ ದೃಷ್ಟಿಯಿಂದ ಚಿಲ್ಲರೆ ವ್ಯಾಪಾರಿಗಳಿಗೆ ಹಬ್ಬದ ಋತುಮಾನವು ಉತ್ತಮ ಅವಕಾಶವಾಗಿರುವುದರಿಂದ ಹಬ್ಬದ ಋತುವಿಗೆ ಮುಂಚಿತವಾಗಿ ದೇಶವು ಪಾದಾರ್ಪಣೆ ಮಾಡಲಿದೆ ಎಂದು ಐಫೋನ್ ತಯಾರಕ ಶುಕ್ರವಾರ ಹೇಳಿದ್ದಾರೆ. ಕಂಪನಿಯು ಪ್ರಸ್ತುತ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಥರ್ಡ್ ಪಾರ್ಟಿ ಮಾರಾಟಗಾರರು ಮತ್ತು ಅಮೆಜಾನ್.ಕಾಮ್ ಮತ್ತು ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ನಂತಹ ಇ-ಕಾಮರ್ಸ್ ಸೈಟ್ಗಳ ಮೂಲಕ ಮಾರಾಟ ಮಾಡುತ್ತದೆ ಎಂದು ತಿಳಿದಿದೆ.
ಆಪಲ್ ತನ್ನ ಆನ್ಲೈನ್ ಸ್ಟೋರ್ಗಾಗಿ, ಯುಪಿಐ, ಕ್ಯಾಶ್ ಆನ್ ಡೆಲಿವರಿ ಮುಂತಾದ ಪಾವತಿ ಆಯ್ಕೆಗಳೊಂದಿಗೆ ಕಂಪನಿಯು ಪಾಲುದಾರಿಕೆ ಹೊಂದಿದೆ. ತನ್ನ ಆನ್ಲೈನ್ ಚಿಲ್ಲರೆ ಪ್ಲಾಟ್ಫಾರ್ಮ್ ಮೂಲಕ, ಆಪಲ್ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಗ್ರಾಹಕರನ್ನು ಬೆಂಬಲಿಸಲು ಯೋಜಿಸಿದೆ. ಆದರೆ ಬಳಕೆದಾರರು ತಮ್ಮ ಐಪ್ಯಾಡ್ಗಳು, ಆಪಲ್ ಪೆನ್ಸಿಲ್ಗಳು ಮತ್ತು ಏರ್ಪಾಡ್ಗಳನ್ನು ಇಂಗ್ಲಿಷ್ನಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ ಮತ್ತು ಬಂಗಾಳಿ ಮತ್ತು ಗುಜರಾತಿ ಸೇರಿದಂತೆ ಕೆಲವು ಭಾರತೀಯ ಭಾಷೆಗಳನ್ನು ತೊಡಗಿಸಿಕೊಳ್ಳಲು ಅವಕಾಶವಿದೆ.

ಉದ್ಯಮದ ಅಂದಾಜಿನ ಪ್ರಕಾರ, ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆಪಲ್ನ ಮಾರುಕಟ್ಟೆ ಪಾಲು ಸುಮಾರು ಶೇ. 2 ರಷ್ಟಿದೆ. ಜೂನ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಆಪಲ್ ಭಾರತದ ಪ್ರೀಮಿಯಂ ವಿಭಾಗದಲ್ಲಿ ಶೇ. 48.8 ಮಾರುಕಟ್ಟೆ ಪಾಲನ್ನು ಗಳಿಸಿದೆ ಎಂದು ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್ನ (ಐಡಿಸಿ) ದತ್ತಾಂಶವು ತಿಳಿಸಿದೆ. ಇದು ಒಂದು ವರ್ಷದ ಹಿಂದೆ ಶೇ. 41.2 ರಷ್ಟಿದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications