ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಅಡ್ಡ ನಿಂತ 'ನೋಟಾ'
Recommended Video

ಭೋಪಾಲ್, ಡಿಸೆಂಬರ್ 13: ಪಂಚರಾಜ್ಯಗಳ ಚುನಾವಣೆ ಫಲಿತಾಂಶಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿದ್ದು ಮಧ್ಯಪ್ರದೇಶದ ಫಲಿತಾಂಶ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿಯಲ್ಲಿ ಕೊನೆಗೆ ಮ್ಯಾಜಿಕ್ ನಂಬರ್ 116 ದಾಟಿದ ಕಾಂಗ್ರೆಸ್ಸಿಗೆ ಅಧಿಕಾರ ಸ್ಥಾಪಿಸುವ ಅವಕಾಶ ಲಭ್ಯವಾಗಲಿದೆ.
ಮಧ್ಯಪ್ರದೇಶದಲ್ಲಿ ಈ ಮೂಲಕ 15 ವರ್ಷಗಳ ಬಳಿಕ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶವನ್ನು ಗಮನಿಸಿದರೆ, ಗುಜರಾತ್, ಹಿಮಾಚಲಪ್ರದೇಶ ಚುನಾವಣೆಯಂತೆ ಪಂಚ ರಾಜ್ಯಗಳ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳ ಗೆಲುವಿಗೆ ನೋಟಾ ಅಡ್ಡಗಾಲಾಗಿ ನಿಂತಿದೆ.
ಮಧ್ಯಪ್ರದೇಶದಲ್ಲಿ ನೋಟಾ ಶೇಕಡಾವಾರು ಮತಗಳಿಕೆ 1.5%ನಷ್ಟಿದೆ. ಸಮಾಜವಾದಿ ಪಕ್ಷಕ್ಕೆ ಶೇ 1ರಷ್ಟು ಮತ ಸಿಕ್ಕಿದೆ. ಎಎಪಿಗೆ ಶೇ 0.7 ಮತಗಳು ಮಾತ್ರ ಲಭಿಸಿವೆ.
ಒಟ್ಟಾರೆ, ಶೇಕಡಾವಾರು ಮತ ಗಳಿಕೆಯಲ್ಲಿ 5ನೇ ಸ್ಥಾನದಲ್ಲಿರುವ ನೋಟಾ ದೆಸೆಯಿಂದ ಸುಮಾರು 22 ಕ್ಷೇತ್ರಗಳ ಫಲಿತಾಂಶ ಉಲ್ಪಾ ಪಲ್ಪಾ ಆಗಿದೆ. ಬಹುತೇಕ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ.

ಶೇಕಡಾವಾರು ಮತ ಗಳಿಕೆ ಪ್ರಮಾಣ
ಡಿಸೆಂಬರ್ 11ರಂದು 8 ಗಂಟೆಗೆ ಆರಂಭವಾದ 230 ಕ್ಷೇತ್ರಗಳ ಮತ ಎಣಿಕೆ ಡಿ 12ರಂದು ಬೆಳಗ್ಗೆ ಮುಕ್ತಾಯ ಕಂಡಿತು. ಒಟ್ಟಾರೆ 5.4 ಮತಗಳ ಪೈಕಿ ನೋಟಾಕ್ಕೆ ಶೇ 1.4 ಪಾಲು ಸಿಕ್ಕಿದೆ. ಬಿಜೆಪಿ ಶೇ 41ರಷ್ಟು, ಕಾಂಗ್ರೆಸ್ ಶೇ 40.9ರಷ್ಟು ಗಳಿಸಿವೆ. ಬಿಎಸ್ಪಿ ಹಾಗೂ ಜಿಜಿಪಿ ಕ್ರಮವಾಗಿ ಶೇ 5 ಹಾಗೂ 1.8ರಷ್ಟು ಮತ ಗಳಿಕೆ ಪಡೆದಿವೆ.

ಗ್ವಾಲಿಯರ್ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಿದ ನೋಟಾ
ಮಧ್ಯಪ್ರದೇಶದಲ್ಲಿ ಅತ್ಯಂತ ಕಡಿಮೆ ಅಂತರದ ಸೋಲು ಗ್ವಾಲಿಯರ್ ದಕ್ಷಿಣ ಕ್ಷೇತ್ರದಲ್ಲಿ ದಾಖಲಾಗಿದೆ. 121 ಮತಗಳ ಅಂತರದಿಂದ ಬಿಜೆಪಿಯ ನಾರಾಯಣ್ ಸಿಂಗ್ ಕುಶ್ವಾಹ ಸೋಲು ಕಂಡರು. ಕಾಂಗ್ರೆಸ್ಸಿನ ಪ್ರವೀಣ್ ಪಾಠಕ್ 56369 ಮತಗಳನ್ನು ಗಳಿಸಿದರೆ, ನಾರಾಯಣ್ ಸಿಂಗ್ 56248 ಮತ ಗಳಿಸಿದರು. ಇಲ್ಲಿ ನೋಟಾ 1550 ಗಳಿಸಿದೆ.

ದಮೋಹ್ ನಲ್ಲೂ ಬಿಜೆಪಿಗೆ ನೋಟಾ ಅಡ್ಡಿಗಾಲು
ದಮೋಹ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ವಿತ್ತ ಸಚಿವ ಜಯಂತ್ ಮಾಳವಿಯಾ ಅವರು 799 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ನೋಟಾ ಇಲಿ 1299 ಮತಗಳನ್ನು ಗಳಿಸಿದೆ, ಜಬಲ್ ಪುರ್ ನಲ್ಲಿ ಶರದ್ ಜೈನ್ ಅವರು 578 ಮತಗಳಿಂದ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ನೋಟಾ 1299 ಮತಗಳನ್ನು ಗಳಿಸಿದೆ.

ಕಾಂಗ್ರೆಸ್ಸಿಗೂ ಮುಳುವಾದ ನೋಟಾ
ತಿಮಾರ್ನಿ ಕ್ಷೇತ್ರದಲ್ಲಿ 4,084 ನೋಟಾ ದಾಖಲಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಅಭಿಜಿತ್ ಸಹಾ ಅವರು 2,213 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ನಗೋಂದ್ ಕ್ಷೇತ್ರದಲ್ಲಿ ಯದ್ವೇಂದ್ರ ಸಿಂಗ್ ಅವರು 1234 ಅಂತರದಿಂದ ಸೋಲು ಕಂಡಿದ್ದರೆ, ನೋಟಾ 2301 ದಾಖಲಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications