ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಅಡ್ಡ ನಿಂತ 'ನೋಟಾ'
Recommended Video

ಭೋಪಾಲ್, ಡಿಸೆಂಬರ್ 13: ಪಂಚರಾಜ್ಯಗಳ ಚುನಾವಣೆ ಫಲಿತಾಂಶಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿದ್ದು ಮಧ್ಯಪ್ರದೇಶದ ಫಲಿತಾಂಶ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿಯಲ್ಲಿ ಕೊನೆಗೆ ಮ್ಯಾಜಿಕ್ ನಂಬರ್ 116 ದಾಟಿದ ಕಾಂಗ್ರೆಸ್ಸಿಗೆ ಅಧಿಕಾರ ಸ್ಥಾಪಿಸುವ ಅವಕಾಶ ಲಭ್ಯವಾಗಲಿದೆ.
ಮಧ್ಯಪ್ರದೇಶದಲ್ಲಿ ಈ ಮೂಲಕ 15 ವರ್ಷಗಳ ಬಳಿಕ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶವನ್ನು ಗಮನಿಸಿದರೆ, ಗುಜರಾತ್, ಹಿಮಾಚಲಪ್ರದೇಶ ಚುನಾವಣೆಯಂತೆ ಪಂಚ ರಾಜ್ಯಗಳ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳ ಗೆಲುವಿಗೆ ನೋಟಾ ಅಡ್ಡಗಾಲಾಗಿ ನಿಂತಿದೆ.
ಮಧ್ಯಪ್ರದೇಶದಲ್ಲಿ ನೋಟಾ ಶೇಕಡಾವಾರು ಮತಗಳಿಕೆ 1.5%ನಷ್ಟಿದೆ. ಸಮಾಜವಾದಿ ಪಕ್ಷಕ್ಕೆ ಶೇ 1ರಷ್ಟು ಮತ ಸಿಕ್ಕಿದೆ. ಎಎಪಿಗೆ ಶೇ 0.7 ಮತಗಳು ಮಾತ್ರ ಲಭಿಸಿವೆ.
ಒಟ್ಟಾರೆ, ಶೇಕಡಾವಾರು ಮತ ಗಳಿಕೆಯಲ್ಲಿ 5ನೇ ಸ್ಥಾನದಲ್ಲಿರುವ ನೋಟಾ ದೆಸೆಯಿಂದ ಸುಮಾರು 22 ಕ್ಷೇತ್ರಗಳ ಫಲಿತಾಂಶ ಉಲ್ಪಾ ಪಲ್ಪಾ ಆಗಿದೆ. ಬಹುತೇಕ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ.

ಶೇಕಡಾವಾರು ಮತ ಗಳಿಕೆ ಪ್ರಮಾಣ
ಡಿಸೆಂಬರ್ 11ರಂದು 8 ಗಂಟೆಗೆ ಆರಂಭವಾದ 230 ಕ್ಷೇತ್ರಗಳ ಮತ ಎಣಿಕೆ ಡಿ 12ರಂದು ಬೆಳಗ್ಗೆ ಮುಕ್ತಾಯ ಕಂಡಿತು. ಒಟ್ಟಾರೆ 5.4 ಮತಗಳ ಪೈಕಿ ನೋಟಾಕ್ಕೆ ಶೇ 1.4 ಪಾಲು ಸಿಕ್ಕಿದೆ. ಬಿಜೆಪಿ ಶೇ 41ರಷ್ಟು, ಕಾಂಗ್ರೆಸ್ ಶೇ 40.9ರಷ್ಟು ಗಳಿಸಿವೆ. ಬಿಎಸ್ಪಿ ಹಾಗೂ ಜಿಜಿಪಿ ಕ್ರಮವಾಗಿ ಶೇ 5 ಹಾಗೂ 1.8ರಷ್ಟು ಮತ ಗಳಿಕೆ ಪಡೆದಿವೆ.

ಗ್ವಾಲಿಯರ್ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಿದ ನೋಟಾ
ಮಧ್ಯಪ್ರದೇಶದಲ್ಲಿ ಅತ್ಯಂತ ಕಡಿಮೆ ಅಂತರದ ಸೋಲು ಗ್ವಾಲಿಯರ್ ದಕ್ಷಿಣ ಕ್ಷೇತ್ರದಲ್ಲಿ ದಾಖಲಾಗಿದೆ. 121 ಮತಗಳ ಅಂತರದಿಂದ ಬಿಜೆಪಿಯ ನಾರಾಯಣ್ ಸಿಂಗ್ ಕುಶ್ವಾಹ ಸೋಲು ಕಂಡರು. ಕಾಂಗ್ರೆಸ್ಸಿನ ಪ್ರವೀಣ್ ಪಾಠಕ್ 56369 ಮತಗಳನ್ನು ಗಳಿಸಿದರೆ, ನಾರಾಯಣ್ ಸಿಂಗ್ 56248 ಮತ ಗಳಿಸಿದರು. ಇಲ್ಲಿ ನೋಟಾ 1550 ಗಳಿಸಿದೆ.

ದಮೋಹ್ ನಲ್ಲೂ ಬಿಜೆಪಿಗೆ ನೋಟಾ ಅಡ್ಡಿಗಾಲು
ದಮೋಹ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ವಿತ್ತ ಸಚಿವ ಜಯಂತ್ ಮಾಳವಿಯಾ ಅವರು 799 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ನೋಟಾ ಇಲಿ 1299 ಮತಗಳನ್ನು ಗಳಿಸಿದೆ, ಜಬಲ್ ಪುರ್ ನಲ್ಲಿ ಶರದ್ ಜೈನ್ ಅವರು 578 ಮತಗಳಿಂದ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ನೋಟಾ 1299 ಮತಗಳನ್ನು ಗಳಿಸಿದೆ.

ಕಾಂಗ್ರೆಸ್ಸಿಗೂ ಮುಳುವಾದ ನೋಟಾ
ತಿಮಾರ್ನಿ ಕ್ಷೇತ್ರದಲ್ಲಿ 4,084 ನೋಟಾ ದಾಖಲಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಅಭಿಜಿತ್ ಸಹಾ ಅವರು 2,213 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ನಗೋಂದ್ ಕ್ಷೇತ್ರದಲ್ಲಿ ಯದ್ವೇಂದ್ರ ಸಿಂಗ್ ಅವರು 1234 ಅಂತರದಿಂದ ಸೋಲು ಕಂಡಿದ್ದರೆ, ನೋಟಾ 2301 ದಾಖಲಾಗಿದೆ.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications