ನಿಲ್ಲುತ್ತಿಲ್ಲ ಮಳೆ; ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಕಪ್ಪೆಗಳಿಗೆ ಡಿವೋರ್ಸ್!
ಭೋಪಾಲ್, ಸೆಪ್ಟೆಂಬರ್ 13: ಮಳೆಯಿಲ್ಲದೇ ಬರ ಬಂದಾಗ, ಚೆನ್ನಾಗಿ ಮಳೆಯಾಗಲಿ ಎಂದು ಕೆಲವು ಕಡೆ ಕಪ್ಪೆಗಳಿಗೆ ಮದುವೆ ಮಾಡುವುದನ್ನು ಕೇಳಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಕಪ್ಪೆಗಳಿಗೆ ಡಿವೋರ್ಸ್ ನೀಡಲಾಗಿದೆ.
ಕಪ್ಪೆಗಳಿಗೆ ಮದುವೆ ಮಾಡಿಸಿದರೆ ವರುಣದೇವ ಮಳೆ ಕರುಣಿಸುತ್ತಾನೆ ಎಂದು ಎರಡು ಕಪ್ಪೆಗಳನ್ನು ತಂದು ಅವುಗಳನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡುವ ನಂಬಿಕೆ ಕೆಲವೆಡೆ ಇದೆ. ಕೆಲವೊಮ್ಮೆ ಮದುವೆ ಮಾಡಿಸಿದ ನಂತರ ಪ್ರಾಸಂಗಿಕ ಎಂಬಂತೆ ಮಳೆಯೂ ಆಗಿಬಿಡುತ್ತದೆ. ಅದೇ ನಂಬಿಕೆಯಿಂದ ಭೋಪಾಲ್ ನಲ್ಲೂ ಎರಡು ತಿಂಗಳ ಹಿಂದೆ ಕಪ್ಪೆಗಳನ್ನು ತಂದು ಮದುವೆ ಮಾಡಿಸಲಾಗಿತ್ತು.
ಮಳೆಯಿಲ್ಲದೇ ನರಳುತ್ತಿದ್ದ ಮಧ್ಯಪ್ರದೇಶದ ಭೋಪಾಲ್ ನಲ್ಲಿನ ಇಂದ್ರಪುರಿಯಲ್ಲಿ ಚೆನ್ನಾಗಿ ಮಳೆಯಾಗಲೆಂದು ಜುಲೈ 19ರಂದು ಈ ಕಪ್ಪೆಗಳನ್ನು ಎಲ್ಲೆಲ್ಲಿಂದಲೋ ತಂದು ಮದುವೆ ಮಾಡಿಸಿದ್ದರು. ನೀರಿಲ್ಲದೇ ನರಳುತ್ತಿದ್ದ ಜನ ಕಪ್ಪೆ ಮದುವೆಯಿಂದಲಾದರೂ ಮಳೆಯಾಗುತ್ತದಾ ಎಂದು ಆಕಾಶ ನೋಡುತ್ತಾ ಕಾಯುತ್ತಿದ್ದರು.

ಆದರೆ ಅದೇನು ಮಾಯವೋ ಏನೋ, ಅಂದುಕೊಂಡಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚೇ ಮಳೆಯಾಗಿಹೋಯಿತು. ಮಳೆಯಾಗುವುದಿರಲಿ, ಪ್ರವಾಹವೂ ಬಂದುಬಿಟ್ಟಿತು. ಮಧ್ಯಪ್ರದೇಶದಲ್ಲಿ ಹದಿಮೂರು ವರ್ಷದ ನಂತರ ಈ ರೀತಿ ದಾಖಲೆ ಮಳೆ ಸುರಿಯಿತು. ಇದೇ ಬುಧವಾರ ಸೆಪ್ಟೆಂಬರ್ 11ಕ್ಕೆ ಮಳೆಯಿಂದ ಮಧ್ಯಪ್ರದೇಶದ ಎಷ್ಟೋ ಪ್ರದೇಶಗಳು ಜಲಾವೃತವೂ ಆಗಿಬಿಟ್ಟವು. ನಿನ್ನೆ ಹವಾಮಾನ ಇಲಾಖೆ ಇನ್ನೂ ಹೆಚ್ಚು ಮಳೆಯಾಗುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು.
ಹೀಗೆಲ್ಲಾ ಆಗಲು ಕಾರಣವೇನು ಎಂದು ಯೋಚಿಸುತ್ತಿದ್ದ ಕೆಲವರಿಗೆ ಈ ಕಪ್ಪೆಗಳ ಮದುವೆ ಮಾಡಿಸಿದ್ದು ನೆನಪಿಗೆ ಬಂದುಬಿಟ್ಟಿದೆ. ಮದುವೆ ಮಾಡಿದ್ದಕ್ಕೆ ಇಷ್ಟೆಲ್ಲಾ ಆಗಿದೆ, ಈಗ ಆ ಕಪ್ಪೆಗಳಿಗೆ ವಿಚ್ಛೇದನ ನೀಡಿದರೆ ಮಳೆ ನಿಲ್ಲಬಹುದು ಎಂದು ಕಪ್ಪೆಗಳಿಗೆ ಡಿವೋರ್ಸ್ ನೀಡುವ ಆಲೋಚನೆ ಹೊಳೆದಿದೆ.
ಓಂ ಶಿವ ಸೇವಾ ಶಕ್ತಿ ಸಂಘದ ಸದಸ್ಯರು ಮಳೆಗೆ ಪರಿಹಾರವಾಗಿ ಕಪ್ಪೆಗಳಿಗೆ ವಿಚ್ಛೇದನ ನೀಡಿಸಿದ್ದಾರೆ. ಕಪ್ಪೆಗಳ ಬೊಂಬೆಗಳನ್ನು ಮಾಡಿ, ಮದುವೆ ಮಾಡಿಸಿದ್ದ ಕಪ್ಪೆಗಳ ಹೆಸರಿನಲ್ಲಿ, ಅವುಗಳಿಗೆ ಮಂತ್ರಪಠಣದ ಮೂಲಕ ವಿಚ್ಛೇದನ ನೀಡಿಸಿದ್ದಾರೆ. ಈ ಮೂಲಕ ಪ್ರಪಂಚದಲ್ಲಿ ವಿಚ್ಛೇದನ ಪಡೆದ ಮೊದಲ ಕಪ್ಪೆ ಜೋಡಿಗಳು ಎನಿಸಿಕೊಂಡಿವೆ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications