ಲೋಕಸಭೆ ಚುನಾವಣೆ: ಪ್ರಜ್ಞಾ ಸಿಂಗ್ ಸ್ಪರ್ಧೆ ರದ್ದತಿ ಅಸಾಧ್ಯ?
ಭೋಪಾಲ್, ಏ.19: ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಸ್ಪರ್ಧೆಯನ್ನು ಚುನಾವಣಾ ಆಯೋಗ ರದ್ದುಗೊಳಿಸುವ ಸಾಧ್ಯತೆ ಇಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಾಲಿ ಕಾನೂನುಗಳ ಪ್ರಕಾರ ಪ್ರಜ್ಞಾ ಸಿಂಗ್ ಸ್ಪರ್ಧೆಯನ್ನು ವಜಾಗೊಳಿಸುವುದು ಅಥವಾ ರದ್ದುಗೊಳಿಸುವುದು ಅಸಾಧ್ಯವಾಗಿದೆ. ಎರಡು ವರ್ಷ ಜೈಲು ಶಿಕ್ಷಯನ್ನು ಎದುರಿಸುತ್ತಿರುವ ಅಪರಾಧಿಗಳಿ ಸ್ಪರ್ಧೆಯನ್ನು ಅನರ್ಹ ಗೊಳಿಸಲು ಸಧ್ಯದ ಕಾನೂನಿನಲ್ಲಿ ಅವಕಾಶವಿದೆ.
ಬಂಧನದ ವೇಳೆ ತಮಗಾದ ಹಿಂಸೆ ನೆನೆದು ಕುಸಿದುಹೋದ ಸಾಧ್ವಿ ಪ್ರಗ್ಯಾ ಸಿಂಗ್
ಆದರೆ ಈ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ. ಪ್ರಜ್ಞಾ ಸಿಂಗ್ ಸ್ಪರ್ಧೆಯನ್ನು ರದ್ದುಗೊಳಿಸಬೇಕು ಎಂದು ಸಮಾಜಿಕ ಹೋರಾಟಗಾರ ತೆಹಸೀನ್ ಪೂನಾವಾಲಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತಂತೆ ಆಯೋಗ ತನ್ನ ಆದೇಶವನ್ನು ನೀಡಬೇಕಿದೆ.
ಪ್ರಜ್ಞಾ ಸಿಂಗ್ ಠಾಕೂರ್ ಮಾಲ್ಗಾವ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದಾರೆ. ಸಧ್ಯ ಬಿಜೆಪಿಯು ಭೋಪಾಲ್ನಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.ಹೀಗಾಗಿ ಈ ಕ್ಷೇತ್ರಗಳು ಭಾರಿ ವಿವಾದಕ್ಕೆ ಕಾರಣವಾಗಿದೆ.