ಟ್ರಾಫಿಕ್ ಕಿರಿಕಿರಿ ಕಂಟ್ರೋಲ್ಗೆ ತಂತ್ರಜ್ಞಾನ ಇದೆ ಎಂದ ಟೆಕ್ಕಿ: ಬಾರಪ್ಪ ಕಂದಾ ಎಂದ ಬೆಂಗಳೂರು ಪೊಲೀಸರು
ಬೆಂಗಳೂರು: ಬೆಂಗಳೂರಿನಲ್ಲಿ ವರ್ಷಗಳಿಂದ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಲ್ಲೇ ಇದೆ. ಟ್ರಾಫಿಕ್ಜಾಮ್ ಹೆಚ್ಚಳವಾಗುವುದಕ್ಕೆ ಕೇವಲ ವಾಹನಗಳ ಸಂಖ್ಯೆ ಹೆಚ್ಚಳ, ಕಿರಿದಾದ ರಸ್ತೆಗಳು ಮಾತ್ರ ಕಾರಣವಲ್ಲ. ಇದರೊಂದಿಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರಿಂದಲೂ ವಿಪರೀತವಾದ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತಿದೆ.
ಬೆಂಗಳೂರು ಪೊಲೀಸರೊಂದಿಗೆ ಇದೀಗ ಬೆಂಗಳೂರಿನ 27 ವರ್ಷದ ಪಂಕಜ್ ತನ್ವರ್ ಟೆಕ್ಕಿ ಕೈಜೋಡಿಸಿದ್ದಾರೆ. ಬೆಂಗಳೂರಿನ ಟೆಕ್ಕಿ ಪಂಕಜ್ ಸಿದ್ಧಪಡಿಸಿರುವ 'AI ಹೆಲ್ಮೆಟ್' ಇದೀಗ ಬೆಂಗಳೂರಿನ ಟ್ರಾಫಿಕ್ ಜಾಮ್ ಕಂಟ್ರೋಲ್ಗೆ ಮತ್ತೊಂದು ಅಸ್ತ್ರವಾಗುತ್ತಿದೆ. ಪ್ರಯೋಗ, ಪರಿಶ್ರಮ ಹಾಗೂ ಸೋಷಿಯಲ್ ಮೀಡಿಯಾ ಟ್ರೆಂಡ್ ಇದೀಗ ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ವರವಾಗಿ ಬದಲಾಗಿದೆ. ಅಲ್ಲದೇ ನಗರದ ಟ್ರಾಫಿಕ್ ಕಿರಿಕಿರಿಗೆ ಕಡಿವಾಣ ಹಾಕುವ ತಂತ್ರಜ್ಞಾನ ನನ್ನಲ್ಲಿದೆ. ಅನುಷ್ಠಾನಕ್ಕೆ ಸಹಾಯ ಮಾಡಿ ಅಂತಲೂ ಕೇಳಿದ್ದಾರೆ.

ಬೆಂಗಳೂರಿನಲ್ಲಿ ಜನ ಟ್ರಾಫಿಕ್ಜಾಮ್ನಿಂದ ಹೈರಾಣಾಗಿದ್ದಾರೆ. ಗಂಟೆಗಳ ಕಾಲ ಟ್ರಾಫಿಕ್ನಲ್ಲೇ ಸಮಯ ಸರಿದು ಹೋಗುತ್ತಿದೆ. 10 ಜನ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೂ ನೂರಾರು ಜನ ಪರದಾಡಬೇಕಾದ ಪರಿಸ್ಥಿತಿ ಇದೆ. ಏಕಕಾಲದಲ್ಲಿ ಹಾಗೂ ನಿಖರವಾದ ಸಮಯದಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ಪತ್ತೆ ಮಾಡುವುದಕ್ಕೆ ಹಾಗೂ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ಇರುವವರನ್ನು ಪತ್ತೆ ಮಾಡುವುದಕ್ಕೆ ಬೆಂಗಳೂರಿನ ಟೆಕ್ಕಿ ಪಂಕಜ್ ಸಿದ್ಧಪಡಿಸಿರುವ AI ಹೆಲ್ಮೆಟ್ ಇದೀಗ ಪ್ರಯೋಗಿಕ ಜಾರಿ ಹಂತದಲ್ಲಿದೆ. ಇದಕ್ಕೆ ಬೆಂಗಳೂರು ನಗರ ಪೊಲೀಸರ ಮುತುವರ್ಜಿಯೂ ಕಾರಣ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ನಮ್ಮೂರಿನ ಟೆಕ್ಕಿ ಪಂಕಜ್ ಸಿದ್ಧಪಡಿಸಿರುವ AI ಹೆಲ್ಮೆಟ್ ಈಗ ನಗರದ ಸಂಚಾರ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ. ಇತ್ತೀಚೆಗೆ ಈ ಹೆಲ್ಮೆಟ್ ಅಭಿವೃದ್ಧಿಪಡಿಸಿದ ಟೆಕ್ಕಿಯು ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಈ ತಂತ್ರಜ್ಞಾನದ ಕಾರ್ಯವೈಖರಿ ಮತ್ತು ಅದರ ಅಳವಡಿಕೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಲಾಗಿದೆ.
ಬೆಂಗಳೂರು ನಗರ ಪೊಲೀಸರ ಪ್ರಕಾರ, ಕೇವಲ ದಂಡ ವಿಧಿಸುವುದರಿಂದ ಸಂಚಾರ ವ್ಯವಸ್ಥೆ ಸುಧಾರಿಸುವುದಿಲ್ಲ. ಬದಲಿಗೆ, ಈ ರೀತಿಯ ತಂತ್ರಜ್ಞಾನಗಳಿಂದ ಸಾರ್ವಜನಿಕರಲ್ಲಿ "ನನ್ನನ್ನು ಯಾರೋ ಗಮನಿಸುತ್ತಿದ್ದಾರೆ" (Sense of being observed) ಎಂಬ ಭಾವನೆ ಮೂಡುತ್ತದೆ.
ಇದು ದೀರ್ಘಾವಧಿಯಲ್ಲಿ ಜನರು ಸ್ವಯಂಪ್ರೇರಿತರಾಗಿ ನಿಯಮ ಪಾಲಿಸುವಂತೆ ಮಾಡುತ್ತದೆ ಎಂದು ಅವರು ನಂಬಿದ್ದಾರೆ. ಈ ತಂತ್ರಜ್ಞಾನವನ್ನು ನೇರವಾಗಿ ಪೊಲೀಸರ ಅಧಿಕೃತ Astram API ಗಳೊಂದಿಗೆ ಸಂಯೋಜಿಸಲು (Integration) ಅವರು ಸಮ್ಮತಿಸಿದ್ದಾರೆ. ಇದರಿಂದ ಸಾರ್ವಜನಿಕರು ವರದಿ ಮಾಡುವ ಉಲ್ಲಂಘನೆಗಳು ನೇರವಾಗಿ ಇಲಾಖೆಯ ಡೇಟಾಬೇಸ್ಗೆ ಸೇರಲಿವೆ. ಇದರಿಂದ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಹಲವು ಮಾದರಿಯ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕಡಿವಾಣ ಬೀಳಲಿದೆ.
met the joint commissioner, blr today. spent ~2 hours in a detailed discussion with officers. pretty open, thoughtful and they genuinely loved the idea.
— Pankaj (@the2ndfloorguy) January 12, 2026
a few takeaways from the chat:
- direct integration with official astram apis
- snitching culture argument is baseless, goal… https://t.co/RmHpUA6YLg
ತಪ್ಪು ವರದಿ ಮಾಡುವುದು ತಪ್ಪಲ್ಲ
ಇನ್ನು ಬೇರೆಯವರ ತಪ್ಪುಗಳನ್ನು ವರದಿ ಮಾಡುವುದು ತಪ್ಪು ಎಂಬ ವಾದವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಸಮಾಜದ ಸುರಕ್ಷತೆ ಮತ್ತು ರಸ್ತೆ ಶಿಸ್ತು ಕಾಪಾಡುವಲ್ಲಿ ನಾಗರಿಕರ ಭಾಗವಹಿಸುವಿಕೆ ಅತ್ಯಗತ್ಯ ಎಂದು ಅವರು ಈ ತಂತ್ರಜ್ಞಾನವನ್ನು ಬೆಂಬಲಿಸಿದ್ದಾರೆ. ಹೀಗಾಗಿ, ಬೇರೆಯವರ ತಪ್ಪುಗಳನ್ನು ವರದಿ ಮಾಡುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Highways: ದೇಶದ 40,000 ಕಿಮೀ ಹೆದ್ದಾರಿಗೆ AI ಟಚ್, ನಿರ್ವಹಣೆ ಮತ್ತಷ್ಟು ಸುಲಭ, ಇಲ್ಲಿದೆ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications