ಬಸವನಗುಡಿಯಲ್ಲಿ ಕೃಷ್ಣ ಜನ್ಮಾಷ್ಟಮಿ, ಲೀಲೋತ್ಸವ
ಬೆಂಗಳೂರು, ಸೆ, 03 : ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ಮತ್ತೊಂದು ಪ್ರಮುಖ ಹಬ್ಬವೇ ಶ್ರೀ ಕೃಷ್ಣ ಜನ್ಮಾಷ್ಟಮಿ. ಕೃಷ್ಣನ ಪುಟಾಣಿ ಹೆಜ್ಜೆಗಳನ್ನು ನೆನಪಿಸುವ ಈ ಹಬ್ಬದ ಪ್ರಯುಕ್ತ ನಾಡಿನಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಲೀಲೋತ್ಸವವನ್ನು ಅದ್ದೂರಿಯಾಗಿ ನಡೆಸಲು ಎಲ್ಲಾ ಏರ್ಪಟುಗಳನ್ನು ಮಾಡಿಕೊಂಡಿದೆ.[World premier of 'ಕೃಷ್ಣಂ ವಂದೇ ಜಗದ್ಗುರುಂ...']
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಈ ಪ್ರಮುಖ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದು, ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 5 ರ ಶನಿವಾರ ಮತ್ತು ಸೆಪ್ಟೆಂಬರ್ 6 ರ ಭಾನುವಾರ ಕೃಷ್ಣ ಲೀಲೋತ್ಸವ ನಡೆಯಲಿದೆ, ಅಲ್ಲದೇ 5 ರ ಶನಿವಾರ ಮುಂಜಾನೆ 6 ಗಂಟೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್
5
ರ
ಧಾರ್ಮಿಕ
ಕಾರ್ಯಕ್ರಮಗಳು
:
ಮಧ್ಯಾಹ್ನ
2.30
-
ಎಂ.
ಎಸ್
ಗಿರಿಧರ್
ಮತ್ತು
ಬಳಗದಿಂದ
ಗೋವರ್ಧನ
ಸ್ಮರಣೆ
ಮಧ್ಯಾಹ್ನ
3.45
-
ಎಂ.ಎಸ್
ಗಿರಿಧರ್
ಅವರಿಂದ
ದಾಸ
ಚಿಂತನ
ಮತ್ತು
ಹಲವಾರು
ಸಾಂಸ್ಕೃತಿಕ
ಕಾರ್ಯಕ್ರಮಗಳು
ಸಂಜೆ
6
-
ಗಂಗಾವತಿ
ಪ್ರಾಣೇಶ್
ಅವರಿಂದ
ಹಾಸ್ಯ
ರಸಾಯನ
ಕಾರ್ಯಕ್ರಮ
ಸಂಜೆ
7.15
-
ಸುಧೀರ್
ಮತ್ತು
ಮಾನಸಿ
ಅವರಿಂದ
ನೃತ್ಯೋತ್ಸವ
ಸೆಪ್ಟೆಂಬರ್
6
ರ
ಧಾರ್ಮಿಕ
ಕಾರ್ಯಕ್ರಮಗಳು
:
ಬೆಳಿಗ್ಗೆ
ದೇವಾಲಯದ
ಪ್ರಾಂಗಣದಲ್ಲಿ
ವಿವಿಧ
ಧಾರ್ಮಿಕ
ಕಾರ್ಯಕ್ರಮಗಳು
ಮಧ್ಯಾಹ್ನ
2.30
-
ಶ್ರೀಕೃಷ್ಣ
ಛದ್ಮವೇಷ
ಸ್ಪರ್ಧೆ
ಸಂಜೆ
5
-
ಶ್ರೀಕೃಷ್ಣ
ಲೀಲೋತ್ಸವ
ಸಂಜೆ
6
-
ಮೊಸರು
ಕುಡಿಕೆ,
ವಾಲಗ
ಮಂಟಪ
ಪೂಜೆ,
ಅಷ್ಟಾವಧಾನ,
ಮಹಾ
ಮಂಗಳಾರತಿ,
ಪ್ರಸಾದ
ವಿತರಣೆ
ಹೆಚ್ಚಿನ ಮಾಹಿತಿಗಾಗಿ :
ಶ್ರೀ
ಗೋವರ್ಧನ
ಕ್ಷೇತ್ರ,
ಪುತ್ತಿಗೆ
ಮಠ,
ಬುಲ್
ಟೆಂಪಲ್
ರಸ್ತೆ,
ಬಸವನಗುಡಿ,
ಬೆಂಗಳೂರು
ಮೊ.
ನಂ
:
9845820775