Get Updates
Get notified of breaking news, exclusive insights, and must-see stories!

ಬಡ ಕಲಾವಿದರಿಗೆ ದಿನಸಿ ನೀಡಿದ ಹಿರಿಯ ನಟಿ ಲೀಲಾವತಿ

ಬೆಂಗಳೂರು, ಏಪ್ರಿಲ್ 03: ಲಾಕ್‌ಡೌನ್‌ನಿಂದ ದಿನನಿತ್ಯದ ಕೂಲಿ ಕಾರ್ಮಿಕರಿಗೆ ದೊಡ್ಡ ಸಮಸ್ಯೆಯಾಗಿದೆ. ಚಿತ್ರರಂಗದ ಬಡ ಕಲಾವಿದರು ಸಹ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಇಂತಹವರ ನೆರವಿಗೆ ಇದೀಗ ಹಿರಿಯ ನಟಿ ಲೀಲಾವತಿ ಬಂದಿದ್ದಾರೆ.

ಲಾಕ್‌ಡೌನ್‌ನಿಂದ ತೊಂದರೆಯಲ್ಲಿ ಇದ್ದ ಜೂನಿಯರ್ ಆರ್ಟಿಸ್ಟ್‌ಗಳ ಕುಟುಂಬಕ್ಕೆ ದಿನಸಿಯನ್ನು ಲೀಲಾವತಿ ನೀಡಿದ್ದಾರೆ. ನಿನ್ನೆ ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿ ಜೂನಿಯರ್ ಆರ್ಟಿಸ್ಟ್‌ಗಳ ಸಂಘಕ್ಕೆ ಆಹಾರ ಪದಾರ್ಥಗಳನ್ನು ಕೊಟ್ಟಿದ್ದಾರೆ. ಲೀಲಾವತಿ ಪುತ್ರ ವಿನೋದ್ ರಾಜ್ ಸಹ ಈ ವೇಳೆ ಹಾಜರಿದ್ದರು.

ತಮ್ಮ ತೋಟದಲ್ಲಿ ಬೆಳೆದ ಬೆಳೆಗಳೊಂದಿಗೆ, ನೆಲಮಂಗಲದ ಅಂಗಡಿಯಲ್ಲಿ ದಿನಸಿ ವಸ್ತುಗಳನ್ನು ಕೊಂಡುಕೊಂಡು ಕಲಾವಿದರಿಗೆ ನೀಡಿದ್ದಾರೆ. ನೂರಾರೂ ಬಡ ಕಲಾವಿದರ ಹೊಟ್ಟೆ ಇದರಿಂದ ತುಂಬಿದೆ. ಲೀಲಾವತಿಯವರ ಈ ಕೆಲಸ ಕಂಡು ಆ ಕಲಾವಿದರು ಖುಷಿಯಾಗಿದ್ದಾರೆ.

Senior Actress Leelavathi Distributed Food Items Junior Artists

ಕೆಲ ದಿನಗಳ ಹಿಂದೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಗ್ರಾಮದಲ್ಲಿ ನಟ ವಿನೋದ್ ರಾಜ್ ತಾವೇ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರು. ಕೊರೊನಾ ವೈರಸ್‌ ಭೀತಿ ಇದ್ದ ಕಾರಣ ಕ್ರಿಮಿನಾಶಕ ಸಿಂಪಡಿಸಿ ಕೊರೊನಾ ನಿಯಂತ್ರಣ ಕೆಲಸದಲ್ಲಿ ಭಾಗಿಯಾಗಿದ್ದರು.

ಸಿನಿಮಾಗಳು ಹಾಗೂ ಧಾರಾವಾಹಿಗಳ ಚಿತ್ರೀಕರಣ ಸಂಪೂರ್ಣ ಬಂದ್ ಆಗಿರುವ ಕಾರಣ ಇದೇ ಕೆಲಸವನ್ನು ನಂಬಿಕೊಂಡ ನೂರಾರೂ ಕುಟುಂಬಗಳಿಗೆ ತೊಂದರೆ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+