ಕಸ ಮಾರಿ ಹಣ ಮಾಡಿ, ತ್ಯಾಜ್ಯ ವಿಲೇವಾರಿಗೆ ಹೊಸ ಮಂತ್ರ
ಬೆಂಗಳೂರು, ಡಿಸೆಂಬರ್ 11: ನಂದಿನಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ವಿನೂತನ ತ್ಯಾಜ್ಯ ಬೇರ್ಪಡಿಸುವಿಕೆ ಹಾಗೂ ವಿಲೇವಾರಿ ವ್ಯವಸ್ಥೆ ಜಾರಿಗೊಳಿಸಿದ್ದು ಜನಪ್ರಿಯತೆ ಗಳಿಸುತ್ತಿದೆ.
ಬೆಂಗಳೂರಿನ ಅನೇಕ ಬಡಾವಣೆಗಳು ತ್ಯಾಜ್ಯದ ವೈಜ್ಞಾನಿಕ ಮತ್ತು ಸಮರ್ಪಕ ನಿರ್ವಹಣೆಗೆ ಪರಿತಪಿಸುತ್ತಿದೆ, ಆದರೆ ನಂದಿನಿ ಲೇಔಟ್ ನಿವಾಸಿಗಳ ಸಂಘ ಕಳೆದ ಒಂದು ವರ್ಷದಿಂದ 'ಕಸ ಮಾರಿ, ದುಡ್ಡು ಮಾಡಿ' ಎಂಬ ಘೋಷ ವಾಕ್ಯವನ್ನು ಬಿಬಿಎಂಪಿ ಸಹಯೋಗದಲ್ಲಿ ಅನುಷ್ಠಾನಗೊಳಿಸಿದೆ.

ಕಸ ಮಾರಿ ದುಡ್ಡು ಮಾಡಿ ಯೋಜನೆಯ ವೈಶಿಷ್ಟ್ಯತೆ ಎಂದರೆ ನಂದಿನಿ ಬಡಾವಣೆಯ ಸುಮಾರು ೨೦ ಸಾವಿರ ಮನೆಗಳು ತಮ್ಮ ಮನೆಯ ತ್ಯಾಜ್ಯಗಳನ್ನು ಸಮರ್ಪಕವಾಗಿ ಬೇರ್ಪಡಿಸಿ ಬಿಬಿಎಂಪಿಗೆ ಮಾರಾಟ ಮಾಡುವ ಮೂಲಕ ಗಣ ಗಳಿಸುತ್ತಿದ್ದಾರೆ. ದಿನಪತ್ರಿಕೆ ಪ್ರತಿ ಕೆಜಿಗೆ 8ರೂ. ಪ್ಲಾಸ್ಟಿಕ್ಗೆ 14 ರೂ. ಕಾರ್ಡ್ ಬೋರ್ಡ್ ಹಾಗೂ ಪುಸ್ತಕಗಳಿಗೆ ತಲಾ 5ರೂ. ಹೀಗೆ ನಾನಾ ರೀತಿಯ ತ್ಯಾಜ್ಯಕ್ಕೆ ನಾನಾ ದರವನ್ನು ಪಾಲಿಕೆ ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಘ ದರ ನಿಗದಿ ಮಾಡಿದೆ.
ಪ್ರತಿದಿನ ಬೆಳಗ್ಗೆ 11ಗಂಟೆಗೆ ಪೌರಕಾರ್ಮಿಕರು ತಮ್ ನಿತ್ಯದ ಕೆಲಸದ ನಂತರ ಮನೆಮನೆಗೆ ತೆರಳಿ ಬೇರ್ಪಟ್ಟ ತ್ಯಾಜ್ಯ ಸಂಗ್ರಹಿಸುತ್ತಾರೆ. ಇದೇ ವೇಳೆ ತ್ಯಾಜ್ಯಕ್ಕೆ ತಕ್ಕ ಹಣ ಪಾವತಿಸುತ್ತಾರೆ. ಈ ರೀತಿ ನಿತ್ಯ20 ಸಾವಿರ ಮನೆಗಳಿಂದ90 ಸಾವಿರ ಜನಸಂಖ್ಯೆಯ ಬಡಾವಣೆಯಿಂದ 12 ಟನ್ ಕಸ ಸಂಗ್ರಹಿಸುವ ಪೌರ ಕಾರ್ಮಿಕರು ಪಾಲಿಕೆ ತೆರೆದಿರುವ ಕಸ ಸಂಗ್ರಹ ಕೇಂದ್ರಕ್ಕೆ ರವಾನಿಸುತ್ತಾರೆ.












Click it and Unblock the Notifications