Get Updates
Get notified of breaking news, exclusive insights, and must-see stories!

Bengaluru Kannada: ಬೆಂಗಳೂರಲ್ಲಿ ಕನ್ನಡವನ್ನು ಅತ್ಯಂತ ಕೀಳಾಗಿ ಕಾಣುವುದರಲ್ಲಿ ಇವರೇ ಮೊದಲಿಗರು: ಗೀತ ರಚನೆಕಾರ ಕವಿರಾಜ್

ಬೆಂಗಳೂರಿನಲ್ಲಿ ಕನ್ನಡ ಭಾಷೆ ವಿಚಾರವಾಗಿ ಮಹತ್ವದ ಗೀತ ರಚನೆಕಾರರಾದ ಕವಿರಾಜ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಲ್ಲಿ ಇವತ್ತು ಕನ್ನಡವನ್ನು ಅತ್ಯಂತ ಕೀಳಾಗಿ ಕಾಣುವುದರಲ್ಲಿ ಮೊದಲಿಗರು ಖಾಸಗಿ ಶಾಲಾ-ಕಾಲೇಜುಗಳು. ಅದರಿಂದಾಗಿ ಮಕ್ಕಳ ಮನಸ್ಸಿನಲ್ಲೇ, ಆರಂಭಿಕ ಹಂತದಲ್ಲೇ ಕನ್ನಡದ ಬಗ್ಗೆ ಕೀಳರಿಮೆ ಬೆಳೆಸುತ್ತಿದ್ದಾರೆ. ಅವರ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ, ಕನ್ನಡ ನಾಡಲ್ಲೇ ಕನ್ನಡ ಮಾತನಾಡಿದರೆ ದಂಡ ಹಾಕುವಷ್ಟರ ಮಟ್ಟಿಗೆ ಇವರ ದುರಹಂಕಾರವನ್ನು ಬೆಳೆಯಲು ಬಿಟ್ಟಿದ್ದೇವೆಂದರೆ ನಾವಿನ್ನೆಂತಾ ಅಭಿಮಾನ ಶೂನ್ಯರಿರಬೇಕು. ಇವರನ್ನು ರಿಪೇರಿ ಮಾಡಲಾಗದೇ ಹೋದರೆ ನಮ್ಮ ಹೋರಾಟಗಳೆಲ್ಲ ವ್ಯರ್ಥ ಅರಣ್ಯ ರೋಧನವಷ್ಟೇ ಎಂದು ಅವರು ಹೇಳಿದ್ದಾರೆ. ಇದಕ್ಕೆ ಹಲವು ಕನ್ನಡಿಗರು ಸಮ್ಮತಿಸಿದ್ದಾರೆ.

Private Schools Colleges Disrespect Kannada in Bengaluru Lyricist Kaviraj Speaks Out

ಬರಹಗಾರ ವಲ್ಲೀಶ್ ಕುಮಾರ್ ಎಸ್ ಅವರು, ಶಾಲಾ ಮಟ್ಟದಲ್ಲಿ ಕನ್ನಡ ಒಂದು ವಿಷಯವಾಗಿ ಕಲಿಕೆ ಕಡ್ಡಾಯವಾಗಿ ಆಗಿಬಿಟ್ಟರೆ ಅನಿಯಂತ್ರಿತ ವಲಸೆಯಿಂದ ಆಗುವ ಎಷ್ಟೋ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹಾಂತೇಶ್ ಚಿನ್ನ ಎನ್ನುವವರು ಇದಕ್ಕೆಲ್ಲ ಮೂಲ ಮತ್ತು ನಿಖರವಾದ ಉತ್ತರವೇನೆಂದರೆ ಖಾಸಗಿ ಶಾಲೆಗಳು ನಡೆಸುವವರನ್ನೇ ಗುರಿಯಾಗಿಸಬೇಕೇ ಹೊರತು, ಅಲ್ಲಿನ ಕೆಲವೇ ಕೆಲವರನ್ನು ಶಿಕ್ಷೆ ನೀಡಿದರೆ ಇದೆಂದು ಬಗೆಹರಿಯದ ಕಾರ್ಯ.. ಅದಕ್ಕೆ ಹೋರಾಟಗಳು ಆಗುತ್ತಲೇ ಇರುತ್ತೆ. ಹೋರಾಟ ಬದಲು ಕಟ್ಟು ನಿಟ್ಟಾಗಿ, ಸಂಬಂಧಪಟ್ಟ ಅದರ ಮಾಲೀಕರಿಗೆ ಶಿಕ್ಷೆ ಆಗಬೇಕು ಹಾಗೂ ಜೊತೆಗೆ ದಂಡವು ವಿಧಿಸಿ, ಸರ್ಕಾರಿ ಶಾಲೆಗಳಿಗೆ ಒತ್ತು ಕೊಡುವಂತೆ ಮಾಡಬೇಕು.

ಬಹುಶಃ ನಾವು ಕನ್ನಡದ ಅಭಿಮಾನಿಗಳು, ತುಂಬಾ ಸ್ವಾಭಿಮಾನಿಗಳು, ನಮ್ಮ ಭಾಷೆ ಕಷ್ಟದಲ್ಲಿ ಇದೆ ಅಂತ ಅನ್ಕೊಂಡು ರಸ್ತೆಗೆ ಇಳಿಯುತ್ತೇವೆ ಹೊರತು, ಸರಿಯಾದ ನ್ಯಾಯ ಸಿಗುವುದು ಕಮ್ಮಿಯೇ. ಆದರೆ ಕೆಲ ರಾಜಕಾರಣಿಗಳು ಮಾತ್ರ ತಮ್ಮ ಸ್ವಾರ್ಥಕ್ಕೆ ಅಂತ ಕನ್ನಡದ ಉಳಿವಿಗಾಗಿ ನಾವೂ ಇರುತ್ತೇವೆ ಎನ್ನುವ ಸುಳ್ಳು ಆಶ್ವಾಸನೆ ಕೊಡುತ್ತಲೇ ಇದ್ದಾರೆ. ಹಂತ ಹಂತವಾಗಿ ಕನ್ನಡವನ್ನು ಮೂಲೆಗುಂಪು ಆಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಇಷ್ಟೇ ಅಲ್ಲ ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವದಲ್ಲಿ ಅನವಶ್ಯಕವಾಗಿ ಪರಭಾಷಾ ಚಿತ್ರಗೀತೆಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುವುದು, ಇದು ಅತ್ಯಂತ ನೋವಿನ ಸಂಗತಿ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ವಿಶ್ವನಾಥ ಭಂಡಾರಿ ಎನ್ನುವವರು ಇದಕ್ಕೆ ಪ್ರಥಮ ಪರಿಹಾರವೆಂದರೆ, ಎಲ್ಲಾ ಖಾಸಗಿ ಶಾಲೆಗಳನ್ನು ಸರ್ಕಾರವೇ ವಹಿಸಿಕೊಂಡು ಕನ್ನಡ ಭಾಷೆಯನ್ನು ಕಡ್ಡಾಯ ಪ್ರಥಮ ಭಾಷೆಯಾಗಿ ಹಾಗೂ 1ನೇ ತರಗತಿಯಿಂದ ಕಾಲೇಜು ಶಿಕ್ಷಣದವರೆಗೆ ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು. ಆಗ ಎಲ್ಲರಿಗೂ ಕನ್ನಡ ಕಲಿಸಿದಂತಾಗುತ್ತದೆ ಹಾಗೂ ಯಾವುದೇ ಭೇದ ಭಾವವಿಲ್ಲದೆ ಎಲ್ಲರಿಗೂ ಉಚಿತ ಶಿಕ್ಷಣ ದೊರೆಯುತ್ತದೆ ಎಂದು ಹೇಳಿದ್ದಾರೆ.

ಕಳೆದ ತಿಂಗಳಿನಿಂದ ಆಂಗ್ಲ ಶಾಲೆಗಳಲ್ಲಿ ನಡೆಯುತ್ತಿರುವ ಅದ್ದೂರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಹಿಂದಿ ಹಾಡುಗಳದ್ದೇ ಅಬ್ಬರ. ಬಾಯಿ ಮಾತಿಗೆ ನಾವೂ ಕನ್ನಡಿಗರೇ ಎನ್ನುವ ಮಾಲೀಕರ ದುರಾಸೆ ಮತ್ತು ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣ. ಪ್ರಾಂಶುಪಾಲರಿಗೆ ಕನ್ನಡ ಪ್ರೇಮ ಇಲ್ಲದಿದ್ದರೆ ಶಾಲೆಯಲ್ಲಿ ಅಥವಾ ಶಾಲಾ ಕಾರ್ಯಕ್ರಮದಲ್ಲಿ ಕನ್ನಡ ನಿರೀಕ್ಷಿಸುವುದು ನಮ್ಮ ಮೂರ್ಖತನ ಎಂದು ಪ್ರಶಾಂತ್ ಮರೂರು ಎನ್ನುವವರು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+