ಜಾನಪದ ಲೋಕದ ಮೇರು ನೃತ್ಯ ಹುಲಿವೇಷದ ಸುತ್ತ
ಬೆಂಗಳೂರು, ಸೆ, 01 : ಜಾನಪದ ಲೋಕದ ಸೌಂದರ್ಯ, ಬೆಡಗಿಗೆ ಮಾರು ಹೋಗದ ಜನರಿಲ್ಲ. ಜನರಿಂದಲೇ ಹುಟ್ಟಿದ ಕಲೆಗಳು ಇದೀಗ ಸರ್ವವ್ಯಾಪಿಯಾಗಿ ಕಲಾಭಿಮಾನಿಗಳ ಮನತಣಿಸುತ್ತಿದೆ.
ನಮ್ಮ ಜಾನಪದರು ಮೂಲತಃ ಹಳ್ಳಿಗರು, ಇವರಿಗೆ ಸಮಯ ಕಳೆಯಲು ತಮ್ಮ ಬದುಕಿನ ನೋವು-ನಲಿವುಗಳನ್ನು ಪದ ಮಾಡಿ ಹಾಡಿದರು. ಒಂದೊಂದೇ ಹೆಜ್ಜೆ ಹಾಕಿ ನೃತ್ಯದ ಮೂಲಕ ಸಂಸ್ಕೃತಿ ಕೊಂಡೊಯ್ಯುವ ಕೂಸುಗಳಾದರು ನಮ್ಮ ಜನಪದರು.
ಹೌದು...ಜಾನಪದ ಲೋಕದಲ್ಲಿ ಜನಪದ ನೃತ್ಯ ಹಾಡು, ಗಾದೆ, ಆಟ ಹೀಗೆ ನಾನಾ ವೈವಿದ್ಯತೆ ಮೇಳೈಸಿಕೊಂಡಿದೆ. ಇವು ರಾಜ್ಯ, ದೇಶದ ಅಚಾರ, ವಿಚಾರ ಸಂಸ್ಕೃತಿಗೆ ಅನುಗುಣವಾಗಿ ಬದಲಾಗುತ್ತಾ ಸಾಗುತ್ತದೆ.[ಉಳಿಸ ಬನ್ನಿ ಮೂಡಲಪಾಯ ಯಕ್ಷಗಾನ]
ಕರ್ನಾಟಕ ಜಾನಪದ ಲೋಕದಲ್ಲಿ ಜಾನಪದ ನೃತ್ಯಗಳು ತನ್ನ ಹೆಜ್ಜೆ, ಕುಣಿತ, ವೇಷಗಳು ಇನ್ನಿತರ ಅಂಶಗಳಿಂದಾಗಿ ಮೇರು ಸ್ಥಾನದಲ್ಲಿ ನಿಂತಿದೆ. ಇದರಲ್ಲಿ ಡೊಳ್ಳು ಕುನಿತ, ವೀರಗಾಸೆ ,ಕಂಸಾಳೆ, ಪೂಜಾ ಕುಣಿತ, ಹುಲಿವೇಷ ಹೀಗೆ ಹೇಳುತ್ತಾ ಹೋದರೆ ಜಾನಪದ ನೃತ್ಯಗಳ ದೊಡ್ಡ ಪಟ್ಟಿಯೇ ಬರೆದು ಬಿಡಬಹುದು.
ಜಾನಪದ ನೃತ್ಯಗಳಲ್ಲಿ ಈಗಾಗಲೇ ಕೊರವ, ಹುಲಿವೇಷ, ಗೊರವರ ಕುಣಿತದಂತಹ ಹಲವಾರು ನೃತ್ಯಗಳು ಅಪಾಯದ ಅಂಚಿಗೆ ತಲುಪಿದೆ. ಈ ನಿಮಿತ್ತ ಪ್ರತಿಯೊಂದು ಸಂಘ ಸಂಸ್ಥೆಗಳು ಜಾನಪದ ಕಲೆಯನ್ನು ಉಳಿಸುವ ನಿರ್ಣಯ ತೆಗೆದುಕೊಂಡು, ನಾನಾ ಸಮಾರಂಭಗಳು, ಸ್ಪರ್ಧೆಗಳ ಮೂಲಕ ಜನರಿಗೆ ಜನಪದದ ವೈವಿಧ್ಯತೆಯನ್ನು ಉಣಿಸುತ್ತಿದೆ.
ಬನ್ನಿ ಜಾನಪದ ಲೋಕದಲ್ಲಿ ಒಂದು ಸುತ್ತು ವಿಹರಿಸುತ್ತಾ, ಜಾನಪದ ಲೋಕದಲ್ಲಿ ಮೇರು ಸ್ಥಾನದಲ್ಲಿರುವ ಹುಲಿವೇಷದ ಕುರಿತಾಗಿ ತಿಳಿದುಕೊಂಡು ಬರೋಣ.[ಚಿತ್ರ: ಪಿಟಿಐ]

ಹುಲಿವೇಷಕ್ಕೆ ಎಲ್ಲೆಲ್ಲಿ, ಏನೇನು ಹೆಸರು?
ಇದಕ್ಕೆ ದ್ರಾವಿಡರು ಹಾಗೂ ತಮಿಳುನಾಡಿನಲ್ಲಿ ಪುಲಿಯಾಟಂ, ಕರ್ನಾಟಕ ಹಾಗೂ ತುಳು ನಾಡಿನಲ್ಲಿ ಹುಲಿವೇಷ, ಕೇರಳದಲ್ಲಿ ಪುಳಿ ಕಳಿ, ಒಡಿಸ್ಸಾದಲ್ಲಿ ಬಾಗ್ ನಾಚ್ ಎಂದು ಕರೆಯುತ್ತಾರೆ.

ಯಾವಾಗ ಈ ನೃತ್ಯ ಮಾಡ್ತಾರೆ?
ನವರಾತ್ರಿಯ ಸಮಯದಲ್ಲಿ ಇದು ಹೆಚ್ಚು ಪ್ರಾಮುಖ್ಯ ಪಡೆದುಕೊಂಡಿದ್ದು, ಶಾರದಾ ದೇವಿಯನ್ನು ನೆನೆದು ಈ ನೃತ್ಯ ಮಾಡಲಾಗುತ್ತದೆ. ಗಂಡು ಕಲೆ ಎಂದು ಪ್ರಸಿದ್ಧಿಗೊಂಡಿರುವ ಇದರಲ್ಲಿ ತಮಟೆ ಸದ್ದು ಕೇಳುತ್ತಲೇ ಜನರು ಪುಳಕಿತರಾಗುತ್ತಾರೆ. ಇನ್ನು ಹೆಜ್ಜೆ, ನೃತ್ಯಗಾರರ ಗರ್ಜನೆ ಕಂಡು ರೋಮಾಂಚನಗೊಳ್ಳುತ್ತಾರೆ.

ಕೇರಳದ ಹುಲಿವೇಷದ ಅವತಾರ
ಎದೆ ಹೊಟ್ಟೆ ಹಾಗು ಬೆನ್ನಿನ ಭಾಗದಲ್ಲಿ ಹಾಗೂ ಭುಜಗಳ ಸೇರಿದಂತೆ ಮೈಯೆಲ್ಲಾ ಹುಲಿ ಚಿತ್ರ ಬಿಡಿಸಿಕೊಳ್ಳುತ್ತಾರೆ. ಹುಲಿಗಳಲ್ಲಿ ಬಿಳಿ ಹಾಗೂ ಹಳದಿ ಹುಲಿಗಳೆಂದುನ ಎರಡು ತೆರನಾಗಿ ವೇಷ ಹಾಕಲಾಗುತ್ತದೆ.

ಮೊದಲು ಈ ನೃತ್ಯ ಯಾರು ಮಾಡುತ್ತಿದ್ದರು?
ಆರಂಭದಲ್ಲಿ ದೇವಾಡಿಗ ಸಮುದಾಯದವರು ಮಾತ್ರ ಈ ಹುಲಿವೇಷ ಕಾಕುತ್ತಿದ್ದರು. ಕಾಲಕ್ರಮೇಣ ಇದರಲ್ಲಿ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಲು ಶುರುವಿಟ್ಟರು. ಇದೀಗ ಎಲ್ಲೆಡೆ ಜಾನಪದ ನೃತ್ಯ ಸಮೂಹ ಇದ್ದಲ್ಲಿ ಹುಲಿವೇಷವೂ ಕಾಣಬಹುದು.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications