ಜಾನಪದ ಲೋಕದ ಮೇರು ನೃತ್ಯ ಹುಲಿವೇಷದ ಸುತ್ತ
ಬೆಂಗಳೂರು, ಸೆ, 01 : ಜಾನಪದ ಲೋಕದ ಸೌಂದರ್ಯ, ಬೆಡಗಿಗೆ ಮಾರು ಹೋಗದ ಜನರಿಲ್ಲ. ಜನರಿಂದಲೇ ಹುಟ್ಟಿದ ಕಲೆಗಳು ಇದೀಗ ಸರ್ವವ್ಯಾಪಿಯಾಗಿ ಕಲಾಭಿಮಾನಿಗಳ ಮನತಣಿಸುತ್ತಿದೆ.
ನಮ್ಮ ಜಾನಪದರು ಮೂಲತಃ ಹಳ್ಳಿಗರು, ಇವರಿಗೆ ಸಮಯ ಕಳೆಯಲು ತಮ್ಮ ಬದುಕಿನ ನೋವು-ನಲಿವುಗಳನ್ನು ಪದ ಮಾಡಿ ಹಾಡಿದರು. ಒಂದೊಂದೇ ಹೆಜ್ಜೆ ಹಾಕಿ ನೃತ್ಯದ ಮೂಲಕ ಸಂಸ್ಕೃತಿ ಕೊಂಡೊಯ್ಯುವ ಕೂಸುಗಳಾದರು ನಮ್ಮ ಜನಪದರು.
ಹೌದು...ಜಾನಪದ ಲೋಕದಲ್ಲಿ ಜನಪದ ನೃತ್ಯ ಹಾಡು, ಗಾದೆ, ಆಟ ಹೀಗೆ ನಾನಾ ವೈವಿದ್ಯತೆ ಮೇಳೈಸಿಕೊಂಡಿದೆ. ಇವು ರಾಜ್ಯ, ದೇಶದ ಅಚಾರ, ವಿಚಾರ ಸಂಸ್ಕೃತಿಗೆ ಅನುಗುಣವಾಗಿ ಬದಲಾಗುತ್ತಾ ಸಾಗುತ್ತದೆ.[ಉಳಿಸ ಬನ್ನಿ ಮೂಡಲಪಾಯ ಯಕ್ಷಗಾನ]
ಕರ್ನಾಟಕ ಜಾನಪದ ಲೋಕದಲ್ಲಿ ಜಾನಪದ ನೃತ್ಯಗಳು ತನ್ನ ಹೆಜ್ಜೆ, ಕುಣಿತ, ವೇಷಗಳು ಇನ್ನಿತರ ಅಂಶಗಳಿಂದಾಗಿ ಮೇರು ಸ್ಥಾನದಲ್ಲಿ ನಿಂತಿದೆ. ಇದರಲ್ಲಿ ಡೊಳ್ಳು ಕುನಿತ, ವೀರಗಾಸೆ ,ಕಂಸಾಳೆ, ಪೂಜಾ ಕುಣಿತ, ಹುಲಿವೇಷ ಹೀಗೆ ಹೇಳುತ್ತಾ ಹೋದರೆ ಜಾನಪದ ನೃತ್ಯಗಳ ದೊಡ್ಡ ಪಟ್ಟಿಯೇ ಬರೆದು ಬಿಡಬಹುದು.
ಜಾನಪದ ನೃತ್ಯಗಳಲ್ಲಿ ಈಗಾಗಲೇ ಕೊರವ, ಹುಲಿವೇಷ, ಗೊರವರ ಕುಣಿತದಂತಹ ಹಲವಾರು ನೃತ್ಯಗಳು ಅಪಾಯದ ಅಂಚಿಗೆ ತಲುಪಿದೆ. ಈ ನಿಮಿತ್ತ ಪ್ರತಿಯೊಂದು ಸಂಘ ಸಂಸ್ಥೆಗಳು ಜಾನಪದ ಕಲೆಯನ್ನು ಉಳಿಸುವ ನಿರ್ಣಯ ತೆಗೆದುಕೊಂಡು, ನಾನಾ ಸಮಾರಂಭಗಳು, ಸ್ಪರ್ಧೆಗಳ ಮೂಲಕ ಜನರಿಗೆ ಜನಪದದ ವೈವಿಧ್ಯತೆಯನ್ನು ಉಣಿಸುತ್ತಿದೆ.
ಬನ್ನಿ ಜಾನಪದ ಲೋಕದಲ್ಲಿ ಒಂದು ಸುತ್ತು ವಿಹರಿಸುತ್ತಾ, ಜಾನಪದ ಲೋಕದಲ್ಲಿ ಮೇರು ಸ್ಥಾನದಲ್ಲಿರುವ ಹುಲಿವೇಷದ ಕುರಿತಾಗಿ ತಿಳಿದುಕೊಂಡು ಬರೋಣ.[ಚಿತ್ರ: ಪಿಟಿಐ]

ಹುಲಿವೇಷಕ್ಕೆ ಎಲ್ಲೆಲ್ಲಿ, ಏನೇನು ಹೆಸರು?
ಇದಕ್ಕೆ ದ್ರಾವಿಡರು ಹಾಗೂ ತಮಿಳುನಾಡಿನಲ್ಲಿ ಪುಲಿಯಾಟಂ, ಕರ್ನಾಟಕ ಹಾಗೂ ತುಳು ನಾಡಿನಲ್ಲಿ ಹುಲಿವೇಷ, ಕೇರಳದಲ್ಲಿ ಪುಳಿ ಕಳಿ, ಒಡಿಸ್ಸಾದಲ್ಲಿ ಬಾಗ್ ನಾಚ್ ಎಂದು ಕರೆಯುತ್ತಾರೆ.

ಯಾವಾಗ ಈ ನೃತ್ಯ ಮಾಡ್ತಾರೆ?
ನವರಾತ್ರಿಯ ಸಮಯದಲ್ಲಿ ಇದು ಹೆಚ್ಚು ಪ್ರಾಮುಖ್ಯ ಪಡೆದುಕೊಂಡಿದ್ದು, ಶಾರದಾ ದೇವಿಯನ್ನು ನೆನೆದು ಈ ನೃತ್ಯ ಮಾಡಲಾಗುತ್ತದೆ. ಗಂಡು ಕಲೆ ಎಂದು ಪ್ರಸಿದ್ಧಿಗೊಂಡಿರುವ ಇದರಲ್ಲಿ ತಮಟೆ ಸದ್ದು ಕೇಳುತ್ತಲೇ ಜನರು ಪುಳಕಿತರಾಗುತ್ತಾರೆ. ಇನ್ನು ಹೆಜ್ಜೆ, ನೃತ್ಯಗಾರರ ಗರ್ಜನೆ ಕಂಡು ರೋಮಾಂಚನಗೊಳ್ಳುತ್ತಾರೆ.

ಕೇರಳದ ಹುಲಿವೇಷದ ಅವತಾರ
ಎದೆ ಹೊಟ್ಟೆ ಹಾಗು ಬೆನ್ನಿನ ಭಾಗದಲ್ಲಿ ಹಾಗೂ ಭುಜಗಳ ಸೇರಿದಂತೆ ಮೈಯೆಲ್ಲಾ ಹುಲಿ ಚಿತ್ರ ಬಿಡಿಸಿಕೊಳ್ಳುತ್ತಾರೆ. ಹುಲಿಗಳಲ್ಲಿ ಬಿಳಿ ಹಾಗೂ ಹಳದಿ ಹುಲಿಗಳೆಂದುನ ಎರಡು ತೆರನಾಗಿ ವೇಷ ಹಾಕಲಾಗುತ್ತದೆ.

ಮೊದಲು ಈ ನೃತ್ಯ ಯಾರು ಮಾಡುತ್ತಿದ್ದರು?
ಆರಂಭದಲ್ಲಿ ದೇವಾಡಿಗ ಸಮುದಾಯದವರು ಮಾತ್ರ ಈ ಹುಲಿವೇಷ ಕಾಕುತ್ತಿದ್ದರು. ಕಾಲಕ್ರಮೇಣ ಇದರಲ್ಲಿ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಲು ಶುರುವಿಟ್ಟರು. ಇದೀಗ ಎಲ್ಲೆಡೆ ಜಾನಪದ ನೃತ್ಯ ಸಮೂಹ ಇದ್ದಲ್ಲಿ ಹುಲಿವೇಷವೂ ಕಾಣಬಹುದು.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications