New Year 2026: ಹೊಸ ವರ್ಷಾಚರಣೆ ಮೇಲೆ ನಿಗಾ ಇಡಲಿದೆ ಡ್ರೋನ್, ಬೆಂಗಳೂರು ಪೊಲೀಸರಿಂದ ಮಾಸ್ಟರ್ಪ್ಲ್ಯಾನ್
ನೋಡ ನೋಡುತ್ತಲೇ ಈ ವರ್ಷ ಮುಗಿಯುತ್ತಿದೆ. 2025ಕ್ಕೆ ಗುಡ್ಬೈ ಹೇಳಿ 2026ಕ್ಕೆ ಹಾಯ್ ಹೇಳಲು ಇನ್ನು ಎರಡೇ ವಾರ ಬಾಕಿ ಇದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷ ಅಂದ್ರೇನೇ ಒಂದು ದೊಡ್ಡ ಹಬ್ಬ, ಸಂಭ್ರಮ. ಡಿಸೆಂಬರ್ 31ರ ರಾತ್ರಿಯೇ ಕುಣಿದು ಕುಪ್ಪಳಿಸಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಎಂಜಾಯ್ ಮಾಡಲು ಈಗಿನಿಂದಲೇ ಸಕಲ ತಯಾರಿಗಳು ನಡೆದಿವೆ. ಹೊಸ ವರ್ಷಾಚರಣೆಯ ಹಾಟ್ಸ್ಪಾಟ್ಗಳಾಗಿರುವ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ಜಾಗಗಳಲ್ಲಿ ಆ ದಿನ ಲಕ್ಷಾಂತರ ಜನ ಜಮಾಯಿಸಿ ಹೊಸ ವರುಷವನ್ನು ಹರುಷದಿಂದ ಬರಮಾಡಿಕೊಳ್ಳುತ್ತಾರೆ. ಹೀಗಾಗಿ ಹೆಚ್ಚು ಜ ಸೇರುವುದರಿಂದ ಜನಸಂದಣಿ ನಿಯಂತ್ರಿಸಲು ಹಾಗೂ ಎಲ್ಲೆಡೆ ನಿಗಾ ಇಡಲು ಬೆಂಗಳೂರು ಪೊಲೀಸರು ಹೊಸ ಮಾಸ್ಟರ್ಪ್ಯಾನ್ ಮಾಡಿದ್ದಾರೆ.
ಪ್ರತಿ ವರ್ಷವು ಹೊಸ ವರ್ಷಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ ಪೊಲೀಸರ ಸರ್ಪಗಾವಲು ಇದ್ದೇ ಇರುತ್ತೆ. ಯುವಕರು, ಯುವತಿಯರು ಒಂದೆಡೆ ಸೇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹದ್ದಿನಗಣ್ಣಿಡುತ್ತಾರೆ. ಜೊತೆಗೆ ಹೆಚ್ಚುವರಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇಡುತ್ತಾರೆ. ಆದರೂ ಬೆಂಗಳೂರಿಗೆ ಇದು ಸಾಕಾಗಲ್ಲ. ಇದನ್ನು ಮನಗಂಡ ಪೊಲೀಸರು ಈ ವರ್ಷಾಚರಣೆ ಮೇಲೆ ಕಣ್ಗಾವಲಿಗಾಗಿ ಡ್ರೋನ್ಗಳನ್ನು ಬಳಸಲು ಮುಂದಾಗಿದ್ದಾರೆ.
ಬೆಂಗಳೂರಿನ ನೂತನ ವರ್ಷದ ಆಚರಣೆಯ ರಾತ್ರಿಗೆ ಸಕಲ ದೃಷ್ಟಿಕೋನದಲ್ಲಿ ಭರದಿಂದ ಸಿದ್ಧತೆ!
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) December 15, 2025
ನೂತನ ವರ್ಷದ ಸಂಜೆಗೆ ಸಿದ್ಧರಾಗುತ್ತಿರುವಾಗ, ಜನಜಂಗುಳಿಯ ಸೂಕ್ಷ್ಮ ವರ್ಧನೆ ಮತ್ತು ನಿರ್ವಹಣೆ, ಸಂಚಾರ ಹರಿವು ಮತ್ತು ತ್ವರಿತ ತುರ್ತು ಪ್ರತಿಕ್ರಿಯೆಯನ್ನು ಹೆಚ್ಚಿಸಲು ಡ್ರೋನ್ ಆಧಾರಿತ ಕಣ್ಗಾವಲು ವ್ಯವಸ್ಥೆ (ವಿಷುಯಲ್ ಏರಿಯಲ್ ನೆಟ್ವರ್ಕ್ ಫಾರ್… pic.twitter.com/DbgYC9iIBl
ಹೊಸ ವರ್ಷಕ್ಕೆ ಇನ್ನು ಎರಡೇ ವಾರ ಬಾಕಿ ಇರುವುದರಿಂದ ಬೆಂಗಳೂರು ಪೊಲೀಸರಿಗೆ ಈಗಾಗಲೇ ಡ್ರೋನ್ ಬಳಸುವ ತರಬೇತಿ ನೀಡಲಾಗಿದೆ. ಹೆಚ್ಚು ಜನ ಸೇರುವ ಜಾಗಗಳಲ್ಲಿ ಈ ಡ್ರೋನ್ಗಳನ್ನು ಬಳಸುವ ಮೂಲಕ ಜನಸಂದಣಿ ನಿಯಂತ್ರಣ ಹಾಗೂ ನಿಗಾ ಇಡಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಪೊಲೀಸರು, ಬೆಂಗಳೂರಿನ ನೂತನ ವರ್ಷದ ಆಚರಣೆಯ ರಾತ್ರಿಗೆ ಸಕಲ ದೃಷ್ಟಿಕೋನದಲ್ಲಿ ಭರದಿಂದ ಸಿದ್ಧತೆ ನಡೆದಿದೆ. ನೂತನ ವರ್ಷದ ಸಂಜೆಗೆ ಸಿದ್ಧರಾಗುತ್ತಿರುವಾಗ, ಜನಜಂಗುಳಿಯ ಸೂಕ್ಷ್ಮವರ್ಧನೆ ಮತ್ತು ನಿರ್ವಹಣೆ, ಸಂಚಾರ ಹರಿವು ಮತ್ತು ತ್ವರಿತ ತುರ್ತು ಪ್ರತಿಕ್ರಿಯೆಯನ್ನು ಹೆಚ್ಚಿಸಲು ಡ್ರೋನ್ ಆಧಾರಿತ ಕಣ್ಗಾವಲು ವ್ಯವಸ್ಥೆ (ವಿಷುಯಲ್ ಏರಿಯಲ್ ನೆಟ್ವರ್ಕ್ ಫಾರ್ ನಾಲೆಡ್ಜಬಲ್ ಇನ್ಸೈಟ್ಸ್-VANKi) ಅನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಒಟ್ಟಿಗೆ 2026ರ ನೂತನ ವರ್ಷವನ್ನು ಜವಾಬ್ದಾರಿಯುತವಾಗಿ ಸ್ವಾಗತಿಸೋಣ ಎಂದು ಹೇಳಿದ್ದಾರೆ.

ಎಂಜಿ ರೋಡ್ನಲ್ಲಿ ಸಂಭ್ರಮಾಚರಣೆಗೆ ಬ್ರೇಕ್?
ಆರ್ಸಿಬಿ ಕಾಲ್ತುಳಿತ ದುರಂತದ ಬಳಿಕ ಹೊಸ ವರ್ಷಾಚರಣೆ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಈ ಸಂಬಂಧ ಜಿಬಿಎ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಸರಣಿ ಸಭೆ ನಡೆಸಿದ್ದಾರೆ. ಜನರ ಭದ್ರತಾ ದೃಷ್ಟಿಯಿಂದ ಈ ಬಾರಿ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ಬೇಡ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ದುರಂತದ ಬಳಿಕ ಮತ್ತೆ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಹಾಗಾಗಿ ಈ ಬಾರಿ ಹೊಸ ವರ್ಷಾಚರಣೆಗೆ ಅನುಮತಿ ನೀಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications