ಪ್ರಶಸ್ತಿ ನಾಮಾಂಕಿತರ ಅನುಚಿತ ವರ್ತನೆ, 'ನಮ್ಮ ಬೆಂಗಳೂರು' ಸ್ಪಷ್ಟನೆ
ಬೆಂಗಳೂರು, ಮಾರ್ಚ್ 26: 'ನಮ್ಮ ಬೆಂಗಳೂರು' ಪ್ರಶಸ್ತಿಯ ಒಂಬತ್ತನೇ ಅವತರಣಿಕೆಯಲ್ಲಿ ಸರಕಾರಿ ಅಧಿಕಾರಿಗಳ ವರ್ಗದಿಂದ ನಾಮ ನಿರ್ದೇಶನಗೊಂಡಿದ್ದ ಒಬ್ಬರ ಅನುಚಿತ ವರ್ತನೆಯಿಂದ ನಮಗೆ ದುಃಖ ಹಾಗೂ ಆಘಾತ ಆಗಿದೆ ಎಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪ್ರಶಸ್ತಿ ವಿಚಾರದಲ್ಲಿ ಇಷ್ಟು ದೀರ್ಘ ಇತಿಹಾಸ ಹೊಂದಿರುವ ಪ್ರತಿಷ್ಠಾನದ ತೀರ್ಪುಗಾರರಿಗೆ ಈ ಹಿಂದೆ ಎಂದೂ ಇಂಥ ಲಾಬಿ ಅನುಭವಕ್ಕೆ ಬಂದಿರಲಿಲ್ಲ. ಆ ನಂತರ ಪ್ರಶಸ್ತಿಗೆ ಅಂತಿಮ ವಿಜಯಿಯಾಗಿ ಹೆಸರು ಕೇಳಿಬರದವರಿಂದ ಇಂಥ ಅಪ್ರಬುದ್ಧ ನಡವಳಿಕೆಯೂ ನಮಗೆ ಅನುಭವಕ್ಕೆ ಬಂದಿಲ್ಲ.
ನಮ್ಮ ಬೆಂಗಳೂರು ಪ್ರತಿಷ್ಠಾನದ ತಂಡ, ಟ್ರಸ್ಟಿ ಹಾಗೂ ತೀರ್ಪುಗಾರರ ಜತೆಗೆ ಈ ನಾಮನಿರ್ದೇಶನಗೊಂಡವರು ಹಲವು ಬಗೆಯ ಸಂವಹನದ ಮೂಲಕ ಲಾಬಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಂದಹಾಗೆ ನಮ್ಮ ತೀರ್ಪುಗಾರರ ಪ್ರಕಾರ, ನಾಮನಿರ್ದೇಶನ ಆದವರು, ಹೆಸರು ಅಂತಿಮ ಪಟ್ಟಿಯಲ್ಲಿ ಇರುವ ಪ್ರತಿಷ್ಠಿತ ಬೆಂಗಳೂರಿಗರು ಎಲ್ಲರೂ ವಿಜಯಿಗಳೇ.

ನಿಸ್ವಾರ್ಥ ಹಾಗೂ ನಿರಂತರ ಸೇವೆ ಸಲ್ಲಿಸುತ್ತಿರುವ ನಾಗರಿಕರು ಹಾಗೂ ಸಂಸ್ಥೆಗಳ ಬಗ್ಗೆ ತೀರ್ಪುಗಾರರು ಆ ಗೌರವ ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಇನ್ನು ಈ ವಿಚಾರದ ಬಗ್ಗೆ ಕೆಲ ವಾಸ್ತವಾಂಶಗಳು ಎಂದು ತಿಳಿಸಲಾಗಿದೆ.
* ಈ ವ್ಯಕ್ತಿ ತೀರ್ಪುಗಾರರ ಜತೆ ಸುದೀರ್ಘ ಮಾತುಕತೆ ನಡೆಸಿದ್ದು, ಈ ಹೊಸದಾಗಿ ಕಂಡುಕೊಂಡ 'ದೃಷ್ಟಿಕೋನ'ವನ್ನು ತಮ್ಮ ಮಾತುಕತೆಯ ಯಾವ ಹಂತದಲ್ಲೂ ತಿಳಿಸಿಲ್ಲ
* ಇದರ ಬದಲಿಗೆ, ಆಕೆಯ ಪತ್ರ, ವಾಟ್ಸಾಪ್ ಸಂದೇಶ ಸೇರಿದಂತೆ ಹಲವು ಸಂವಹನದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿ ಬಗ್ಗೆ ಗೌರವದ ಬಗ್ಗೆ ತಿಳಿಸಿದ್ದಾರೆ
* ಅಂತಿಮ ವಿಜಯಿಗಳು ಯಾರು ಎಂದು ತೀರ್ಪುಗಾರರು ನಿರ್ಧರಿಸಿದ ನಂತರ ಆಕೆಯ ದೃಷ್ಟಿಕೋನವು ಗೊತ್ತಾಗಿದೆ
* ಆಕೆಗೆ ಪ್ರಶಸ್ತಿಯನ್ನು ನೀಡಿಲ್ಲವಾದ್ದರಿಂದ ಅದನ್ನು ನಿರಾಕರಿಸುವ ಮಾತೇ ಬರುವುದಿಲ್ಲ.
* ವಿಜಯಿಗಳನ್ನು ತುಂಬ ಕಠಿಣವಾದ ಪ್ರಕ್ರಿಯೆಗಳ ಮೂಲಕ ನಮ್ಮ ಪ್ರತಿಷ್ಠಾನ ಆರಿಸುತ್ತದೆ. ಆ ಕಾರಣಕ್ಕೆ ಪ್ರಶಸ್ತಿಯು ಗೌರವ ಹಾಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ
ಈ ಎಲ್ಲ ನಾಟಕದ ಸನ್ನಿವೇಶ ಆಕೆಯ ನಿರಾಶೆಯಿಂದ ಎಂಬುದು ಸಹಜ. ದುಃಖದ ವಿಚಾರ ಅಂದರೆ, ಇವೆಲ್ಲ ಆಕೆಗೆ ತಿಳಿಸಲು ಆಗುತ್ತಿಲ್ಲ: ಎಲ್ಲ ನಾಮಾಂಕಿತರು ವಿಜಯಿಗಳೇ ಎಂಬುದು ನಮ್ಮ ದೃಷ್ಟಿಕೋನ.
ಬೆಂಗಳೂರಿಗೆ ನೀಡಿದ ಅದ್ಭುತ ಮತ್ತು ಧೈರ್ಯವಾದ ಕೊಡುಗೆಯನ್ನು ಪರಿಗಣಿಸಿ ತೀರ್ಪುಗಾರರು ವಿಜಯಿಗಳನ್ನು ಆರಿಸುತ್ತಾರೆ. ಈ ವರೆಗೆ ನಮ್ಮ ಬೆಂಗಳೂರು ಪ್ರಶಸ್ತಿ ಪುರಸ್ಕೃತರು ಯಾರೂ ಈ ರೀತಿಯಾಗಿ ನೋಡಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ಬೆಂಗಳೂರು ಫೌಂಡೇಷನ್ ಸ್ಥಾಪಕರು ಹಾಗೂ ಬೆಂಬಲಿಗರು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್. ಬೆಂಗಳೂರನ್ನು ಮಾದರಿ ನಗರವಾಗಿ ರೂಪಿಸಲು ಈ ಸಂಸ್ಥೆ ಶ್ರಮಿಸುತ್ತಿದೆ. ಸಾಮಾನ್ಯ ನಾಗರಿಕರಾಗಿ ಬೆಂಗಳೂರಿನ ಉದ್ಧಾರಕ್ಕಾಗಿ ಅಸಾಮಾನ್ಯ ಕೆಲಸ ಮಾಡುತ್ತಿರುವವರಿಗೆ ಈ ಫೌಂಡೇಷನ್ ನಿಂದ ಪ್ರಶಸ್ತಿ ನೀಡಲಾಗುತ್ತಿದೆ.












Click it and Unblock the Notifications