ನಮ್ಮ ಮೆಟ್ರೋ: 11 ಲಕ್ಷ ಸ್ಮಾರ್ಟ್ ಕಾರ್ಡ್ ಮಾರಾಟ
Recommended Video

ಬೆಂಗಳೂರು, ಏಪ್ರಿಲ್ 04: ನಮ್ಮ ಮೆಟ್ರೋದಲ್ಲಿ ನಗದುರಹಿತ ಪ್ರಯಾಣ ಹೆಚ್ಚಾಗುತ್ತಿದೆ. ಪ್ರಯಾಣಿಕರು ಟೋಕನ್ ಕೊಳ್ಳುವ ಬದಲು ಸ್ಮಾರ್ಟ್ ಕಾರ್ಡ್ ಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಬೆಂಗಳೂರಿನ ಒಟ್ಟು 10.93 ಲಕ್ಷ ಜನರು ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಖರೀದಿಸಿದ್ದು, ಇದರಲ್ಲಿ ಪ್ರತಿನಿತ್ಯ 3ಲಕ್ಷ ಜನ ಸ್ಮಾರ್ಟ್ ಕಾರ್ಡ್ ಬಳಸಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ನೋಟು ಅಮಾನ್ಯೀಕರಣ ಬಳಿಕ ದೇಶದಲ್ಲಿ ನಗದು ರಹಿತ ವಹಿವಾಟು ಹೆಚ್ಚಾಗುತ್ತಿದೆ.
ನಮ್ಮ ಮೆಟ್ರೋ ಆರಂಭವಾದ ವರ್ಷ 2012ರಲ್ಲಿ ಎಂಜಿ ರಸ್ತೆ-ಬೈಯಪ್ಪನಹಳ್ಳಿ ನಡುವೆ ಕೇವಲ 6ಕಿ.ಮೀ ಮೆಟ್ರೋ ಸಂಚಾರವಿತ್ತು. ಅಂದು ಸ್ಮಾರ್ಟ್ ಕಾರ್ಡ್ ಪ್ರಯಾಣಿಕರ ಸಂಖ್ಯೆ ಕೇವಲ 17,775, ಮೊದಲನೇ ಹಂತ(43ಕಿ.ಮೀ) 2017ರಲ್ಲಿ ಸಂಚಾರ ಮುಕ್ತವಾದ ಬಳಿಕ ಸ್ಮಾರ್ಟ್ ಕಾರ್ಡ್ ಹೊಂದಿರುವವರ ಸಂಖ್ಯೆ 10.93ಲಕ್ಷಕ್ಕೇರಿದೆ.

183ಕೋಟಿ ರೂ. ರೀಚಾರ್ಜ್: ನಗದುರಹಿತ ಪ್ರಯಾಣಕ್ಕಾಗಿ ಬಿಎಂಆರ್ ಸಿಎಲ್ ಹೊರತಂದಿರುವ ಸ್ಮಾರ್ಟ್ ಕಾರ್ಡ್ ಪ್ರಯಾಣಿಕರನ್ನು ಸೆಳೆಯುವಲ್ಲಿ ಯಶ್ವಿಯಾಗಿದೆ.ಸ್ಮಾರ್ಟ್ ಕಾರ್ಡ್ ಪ್ರಯಾಣಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸ್ಮಾರ್ಟ್ ಕಾರ್ಡ್ ಬಳಸಿ ಶೇ.15 ರಿಯಾಯಿತಿ ಸಿಗುತ್ತಿದ್ದು, ನಿತ್ಯ ಪ್ರಯಾಣಿಸುವವರು ಕಾರ್ಡ್ ಮೊರೆ ಹೋಗಿದ್ದಾರೆ.
ಸ್ಮಾರ್ಟ್ ಕಾರ್ಡ್ ಇದ್ದರೆ ಟಿಕೆಟ್ ಪಡೆಯಲು ಸರತಿಯಲ್ಲಿ ನಿಲ್ಲಬೇಕಿಲ್ಲ. ಇದು ಇನ್ನಷ್ಟು ಕಾರ್ಡ್ ಕೊಳ್ಳಲು ಪ್ರಯಾಣಿಕರನ್ನು ಪ್ರೇರೇಪಿಸುತ್ತದೆ.
ಠೇವಣಿ ಲಾಭ: ಪ್ರತಿ ಸಮಾರ್ಟ್ ಕಾರ್ಡ್ ತಯಾರಿಗೆ ನಿಗಮ 60.15 ರೂ. ಖರ್ಚು ಮಾಡುತ್ತದೆ. ಪ್ರಯಾಣಿಕರು ಕಾರ್ಡ್ ಗೆ ಮಾಡಿಸುವ ರಿಚಾರ್ಜ್ ಮೊತ್ತ ನಿಗಮಕ್ಕೆ ಉಳಿತಾಯ ಖಾತೆಯ ರೀತಿ ಕಾರ್ಯನಿರ್ವಹಿಸುತ್ತದೆ. 10ಲಕ್ಷ ಜನ ಮೆಟ್ರೋ ಖರೀದಿಸಿದ್ದರೂ, ನಿತ್ಯ ಬಳಸುವವರ ಸಂಖ್ಯೆ 3ಲಕ್ದವರೆಗಿರಬಹುದು.
ಓರ್ವ ಪ್ರಯಾಣಿಕ ಕನಿಷ್ಠ 100ರಿಂದ 500ರೂ ವರೆಗೆ ರೀಚಾರ್ಜ್ ಮಾಡಿಸುತ್ತಾನೆ. ಆದರೆ, ವಾರಕ್ಕೊಮ್ಮೆಯೋ ಅಥವಾ ತಿಂಗಳಿಗೊಮ್ಮೆಯೋ ಮೆಟ್ರೋ ಬಳಸುತ್ತಾನೆ. ಇಂತಹ ಲಕ್ಷಾಂತರ ಪ್ರಯಾಣಿಕರು ಮಾಡಿಸಿರುವ ರೀಚಾರ್ಜ್ ಮೊತ್ತ ನಿಗಮಕ್ಕೆ ಲಾಭದಾಯಕವಾಗಿದೆ.
-
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ












Click it and Unblock the Notifications