ಮನಿ ಲಾಂಡ್ರಿಂಗ್ ಕೇಸ್: ಬಿನೀಶ್ ಕೊಡಿಯೇರಿ ಆಪ್ತರಿಗೆ ಇಡಿ ನೋಟಿಸ್
ಬೆಂಗಳೂರು, ನ. 16 : ಡ್ರಗ್ಸ್ ಜಾಲದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಕೇರಳ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯೇರಿ ಜತೆ ನಂಟು ಹೊಂದಿರುವ ಆಪ್ತರಿಗೂ
ಜಾರಿ ನಿರ್ದೇಶಾನಾಲಯ(ಇಡಿ) ನೋಟಿಸ್ ಜಾರಿ ಮಾಡಿದೆ.
ಬಿನೀಶ್ ಜತೆ ಸಂಪರ್ಕದಲ್ಲಿದ್ದ ಉದ್ಯಮಿಗಳು ಹಾಗೂ ನಟಿಯರಿಗೂ ''ಇಡಿ'' ಆತಂಕ ಎದುರಾಗಿದೆ. ಬಿನೀಶ್ ವಿಚಾರಣೆ ವೇಳೆ ನೀಡಿರುವ ಮಾಹಿತಿ ಆಧರಿಸಿ ಕೇರಳ ಮೂಲದ ರಶೀದ್, ಅಬ್ದುಲ್, ಲತನ್ ಹಾಗೂ ಅನಿಕುಟ್ಟನ್ ಅರುಣ್ ಎಂಬುವರಿಗೆ ಇಡಿ ಸಮನ್ಸ್ ನೀಡಿದೆ. ನವೆಂಬರ್ 18 ರಂದು ವಿಚಾರಣೆಗೆ ಹಾಜರಾಗಲು ಇಡಿ ಅಧಿಕಾರಿಗಳು ಸೂಚಿಸಿದ್ದಾರೆ. ವಿಚಾರಣೆ ವೇಳೆ ಸಾಕ್ಷಾಧಾರಗಳ ಲಭ್ಯತೆ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ.

Recommended Video
ಲಸಿಕೆಯಿಂದ ತೊಂದ್ರೆ ಆಗತ್ತಾ! | Oneindia Kannada
ಇನ್ನು ಡ್ರಗ್ ಜಾಲದಲ್ಲಿ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಾಧಾರಗಳನ್ನು ಇಡಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ.












Click it and Unblock the Notifications