ಮಹಿಳೆಗೆ ಪತಿ ನೀಡಿದ್ದ ಚಿನ್ನದ ಉಡುಗೊರೆ ರಹಸ್ಯ ಬಯಲು ಮಾಡಿದ ಸರಗಳ್ಳರು !
ಬೆಂಗಳೂರು, ಫೆಬ್ರವರಿ 04: ಆತನಿಗೆ ತನ್ನ ಹೆಂಡತಿ ಎಂದರೆ ಪಂಚ ಪ್ರಾಣ. ಸಾಯುವ ಮುನ್ನ ಕೂಡ ತನ್ನ ಹೆಂಡತಿಗೆ ಮಾಂಗಲ್ಯ ಸರವನ್ನು ಉಡುಗೊರೆ ನೀಡಿ ಕೊನೆಯುಸಿರು ಎಳೆದಿದ್ದ ! ಆಕೆ ಗಂಡ ನೀಡಿದ ಸರ ಎಂದು ಯಾವಾಗಲೂ ಕೊರಳಿಗೆ ಹಾಕಿಕೊಂಡಿದ್ದಳು ! ಆ ಮಾಂಗಲ್ಯ ಸರವನ್ನು ಸರಗಳ್ಳರು ಕದ್ದು ಮಾರಾಟ ಮಾಡಲು ಹೋದಾಗ ಮಹಿಳೆಗೆ ಗಂಡ ನೀಡಿದ್ದ ಚಿನ್ನದ ಸರದ ನಿಜವಾದ ಸತ್ಯ ಗೊತ್ತಾಗಿ ಆಕೆ ಮೂರ್ಛೆ ಹೋಗಿದ್ದಾಳೆ ! ಪೊಲೀಸರು ನಕ್ಕಿ ನಕ್ಕಿ ಸುಸ್ತಾಗಿದ್ದಾರೆ .
ಹೌದು. ಇದು ಯಾವುದೊ ಸಿನಿಮಾ ಸ್ಟೋರಿಯ ಎಳೆಯಲ್ಲ. ಬೆಂಗಳೂರಿನಲ್ಲಿ ನಡೆದಿರುವ ನೈಜ ಅಪರಾಧ ಪ್ರಕರಣದ ವಿವರ. ಮೈತುಂಬ ಸಾಲ ಮಾಡಿಕೊಂಡಿದ್ದ ಸಂತೋಷ್ ಮತ್ತು ಜೈಕುಮಾರ್ ಎಂಬುವರು ಸರಕಳ್ಳತನ ಮಾಡಿ ಸಾಲ ತೀರಿಸುವ ಉಪಾಯ ಉಡುಕಿಕೊಂಟಿದ್ದರು. ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಮಹಿಳೆಯೊಬ್ಬಳ ಸರ ಎಗರಿಸಿದ್ದರು. ಈ ಸರವನ್ನು ಕದ್ದ ಖುಷಿಯಲ್ಲಿ ಇಬ್ಬರು ಸರಗಳ್ಳ್ರು ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಲು ತೆರಳಿದ್ದಾರೆ. ಇಬ್ಬರ ಬಗ್ಗೆ ಅನುಮಾನಗೊಂಡ ಚಿನ್ನದ ಅಂಗಡಿ ಮಾಲೀಕ ಮೈಕೋ ಲೇಔಟ್ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಚಿನ್ನದ ಅಂಗಡಿ ಮಾಲೀಕ ನಮ್ಮ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂಬುದು ಅರಿತ ಕೂಡಲೇ ಇಬ್ಬರು ಕಳ್ಳರು ಚಿನ್ನದ ಸರ ಸಮೇತ ಎಸ್ಕೇಪ್ ಆಗಿದ್ದಾರೆ.

ಚಿನ್ನದ ಅಂಗಡಿಗೆ ಬಂದು ಹೋದ ಕಳ್ಳರ ಸಿಸಿಟಿವಿ ದೃಶ್ಯ ಆಧರಿಸಿ ಜಯಕುಮಾರ್ ಮತ್ತು ಸಂತೋಷ್ ನನ್ನು ಬಂಧಿಸಿದ್ದಾರೆ. ಇಬ್ಬರ ಬಳಿಯಿದ್ದ ಮಾಂಗಲ್ಯ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿನ್ನದ ಸರ ಕಳೆದುಕೊಂಡಿದ್ದ ಮಹಿಳೆಯನ್ನು ಕರೆಸಿ ಮಾಂಗಲ್ಯ ಸರವನ್ನು ಮಹಿಳೆಗೆ ಕೊಟ್ಟಾಗ ಆಕೆಗೆ ಆದ ಸಂತೋಷ ಪಾರೇ ಇರಲಿಲ್ಲ. ನನ್ನ ಗಂಡ ಸಾಯುವ ಮುನ್ನ ಪ್ರೀತಿಯಿಂದ ಮಾಂಗಲ್ಯ ಸರ ಮಾಡಿಸಿದ್ದು ಎಂದು ಪೊಲೀಸರಿಗೆ ಹೇಳಿದ್ದಾರೆ. ಈ ವೇಳೆ ಪೊಲೀಸರು ಚಿನ್ನದ ಸರದ ಅಸಲಿ ಸತ್ಯವನ್ನು ಹೇಳಿದ್ದಾರೆ. ನಿಮ್ಮ ಗಂಡ ನಿಮಗೆ ನೀಡಿರುವುದು ಚಿನ್ನದ ಸರವಲ್ಲ, ಇದು ರೋಲ್ಡ್ ಗೋಲ್ಡ್ ಚಿನ್ನ. ಇದರಲ್ಲಿ ಒಂದು ಗ್ರಾಂ ಕೂಡ ಚಿನ್ನ ಇಲ್ಲ ಎಂದು ಹೇಳಿದ್ದಾರೆ. ಈ ವಿಷಯ ತಿಳಿದ ಮಹಿಳೆ ಮೂರ್ಛೆ ಹೋಗೋದು ಬಾಕಿ. ಸತ್ತು ಸ್ವರ್ಗ ಸೇರಿರುವ ಗಂಡ ಸಾಯುವ ಮುನ್ನ ಕೂಡ ಮೋಸ ಮಾಡಿ ಇಹ ಲೋಕ ತ್ಯಜಿಸಿದ್ದಾನೆ. ಕೊನೆಗೆ ರೋಲ್ಡ್ ಗೋಲ್ಡ್ ಚಿನ್ನದ ಸರವನ್ನು ತೆಗೆದುಕೊಂಡು ಮಹಿಳೆ ಮನೆಗೆ ಹೋಗಿದ್ದಾಳೆ. ಅಂತೂ ಕಳ್ಳರು ಮಹಿಳೆಯೊಬ್ಬಳಿಗೆ ತನ್ನ ಗಂಡ ಸಾಯುವ ಮುನ್ನ ರೋಲ್ಡ್ ಗೋಲ್ಡ್ ಮಾಂಗಲ್ಯ ಸರ ನೀಡಿ ಚಿನ್ನದ ಸರ ಎಂದು ನಂಬಿಸಿದ್ದ ಸಂಗತಿ ಗೊತ್ತಾಗಿದೆ. ಈ ವಿಷಯ ತಿಳಿದ ಪೊಲೀಸರು ಏನು ಮಾಡಬೇಕು ಅಂತಲೂ ತೋಚಿಲ್ಲ

Recommended Video
ಸಾಲ ತೀರಿಸಲು ಚಿನ್ನದ ಸರ ಕದಿಯಲು ಹೋಗಿ ರೋಲ್ಡ್ ಗೋಲ್ಡ್ ಸರ ಕದ್ದು ಸಂತೋಷ್ ಮತ್ತು ಜೈಕುಮಾರ್ ನನ್ನು ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ












Click it and Unblock the Notifications