ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯ ಆರ್ಭಟ: ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ಹಾನಿ?

|
Google Oneindia Kannada News

Recommended Video

ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆಗೆ ಹಾನಿಯಾಗಿದ್ದು ಅಷ್ಟಿಷ್ಟಲ್ಲ | Oneindia Kannada

ಬೆಂಗಳೂರು, ಜೂನ್ 3: ನಗರದಲ್ಲಿ ಭಾನುವಾರ ಸುರಿದ ಮಳೆಗೆ 35ಕ್ಕೂ ಹೆಚ್ಚು ಮರಗಳು ಬುಡಮೇಲಾಗಿ ಬಿದ್ದಿವೆ. ಹಾಗಾಗಿ ಭಾನುವಾರ ಸಂಜೆ ವೇಳೆಗೆ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಯಲಹಂಕದಲ್ಲಿ 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ, ದೇವಸಂದ್ರದಲ್ಲಿ ಮೂರು ಮರಗಳು ಹಾಗೂ ಸಿದ್ದಾಪುರದಲ್ಲಿ 2 ಮರಗಳು, ಜೆಪಿನಗರ, ದೊಮ್ಮಲೂರು ಹಾಗೂ ರಾಘವೇಂದ್ರ ವೃತ್ತ, ಹೆಬ್ಬಾಳ, ಲುಂಬಿನಿ ಗಾರ್ಡನ್, ಸುಲ್ತಾನ್ ಪಾಳ್ಯ, ಸಹಕಾರನಗರ, ಎಚ್‌ಬಿಆರ್ ಲೇಔಟ್, ವಿದ್ಯಾರಣ್ಯಪುರ, ಎಂಎಸ್ ಪಾಳ್ಯ, ಎಚ್‌ಎಸ್‌ಆರ್ ಲೇಔಟ್, ಭದ್ರಪ್ಪ ಲೇಔಟ್‌ನಲ್ಲಿ ಮರಗಳ ಬೇರುಗಳು ಸಡಿಲಗೊಂಡು ಬಿದ್ದವೆ.

ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು, ಮೈಸೂರಿನಲ್ಲಿ ಭಾರಿ ಮಳೆ ಸಾಧ್ಯತೆಮುಂದಿನ 24 ಗಂಟೆಗಳಲ್ಲಿ ಬೆಂಗಳೂರು, ಮೈಸೂರಿನಲ್ಲಿ ಭಾರಿ ಮಳೆ ಸಾಧ್ಯತೆ

36ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಬೆಸ್ಕಾಂ ಮಾಹಿತಿ ಪ್ರಕಾರ ದೊಮ್ಮಲೂರು, ಜೆಪಿನಗರ ಎರಡನೇ ಹಂತ, ಎಇಸಿಎಸ್ ಲೇಔಟ್, ಸಿದ್ದಾಪುರ, ಬಾಬುಸಪಾಳ್ಯ, ದಾಸರಹಳ್ಳಿ , ದೇವಸಂದ್ರ, ಸಹಕಾರನಗರದಲ್ಲಿ ವಿದ್ಯುತ್ ಕಂಬಗಳು ಬಿದ್ದಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು ಎಂದು ತಿಳಿಸಿದ್ದಾರೆ.

Heavy rain brings down trees

ಕೊಡಿಗೆಹಳ್ಳಿಯ ಬಳ್ಳಾರಿ ರಸ್ತೆ ಎಕ್ಸ್‌ಪ್ರೆಸ್‌ ವೇನಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

ಜೂನ್ 6ರಂದು ಅಧಿಕೃತವಾಗಿ ಕೇರಳ ಪ್ರವೇಶಿಸಲಿದೆ ಮುಂಗಾರುಜೂನ್ 6ರಂದು ಅಧಿಕೃತವಾಗಿ ಕೇರಳ ಪ್ರವೇಶಿಸಲಿದೆ ಮುಂಗಾರು

ನಗರದಲ್ಲಿ ಜೂನ್ 4ರವರೆಗೂ ಮಳೆ ಬರಲಿದ್ದು, ಮಳೆಯಾಗುವ ವೇಳೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

English summary
Heavy rain, accompanied by lightning, thunder and strong winds, brought down many trees across the city. The downpour affected power supply plunging many areas into darkness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X