ಕನ್ನಡಪರ ಹೋರಾಟದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ: ಗುಂಡೂರಾವ್
ಬೆಂಗಳೂರು, ಜನವರಿ 22 : ಕನ್ನಡಪರ ಹೋರಾಟದಲ್ಲಿ ಸರ್ಕಾರದ ಹಸ್ತಕ್ಷೇಪವಿದೆ ಎನ್ನುವ ಪಿಜೆಪಿಯವರ ಆರೋಪ ಸತ್ಯಕ್ಕೆ ದೂರವಾದದ್ದು, 26 ಗಣರಾಜ್ಯೋತ್ಸವ ಇರುವುದರಿಂದ 25 ಕ್ಕೆ ಬಂದ್ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಹದಾಯಿ ವಿಚಾರದಲ್ಲಿ ರಾಜ್ಯದ ಬೆನ್ನಿಗೆ ನಿಲ್ಲಲಿಲ್ಲ, ಇದು ಸತ್ಯ. ಇದು ರಾಜ್ಯದ ಜನತೆಯಲ್ಲಿ ಬೇಸರ ತರಿಸಿದೆ. ಮಹದಾಯಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದರು.
ಜ.25ರ ರಾಜ್ಯ ಬಂದ್ ಹಿಂದೆ ಸಿಎಂ ನೇರ ಕೈವಾಡ: ಬಿಎಸ್ವೈ
ಈ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ಮಾಡ್ತಿವೆ. ಮೊದಲು ಈ ವಿಚಾರವನ್ನು ರಾಜಕೀಯಕ್ಕಾಗಿ ಬಳಸಿಕೊಂಡೋರು ಯಾರು ಇದೇ ಬಿಜೆಪಿಯ ಯಡಿಯೂರಪ್ಪ. ಆದ್ರೆ, ಈ ವಿಚಾರದಲ್ಲಿ ಬಿಜೆಪಿಯವರಿಗೆ ನಿರಾಸೆಯಾಯ್ತು.ಪ್ರಧಾನಿ ಮಧ್ಯಪ್ರವೇಶ ಮಾಡಿ ಅಂತಾ ಆಗ್ರಹಿಸಿ ರೈತಪರ,ಕನ್ನಡಪರ ಹಾಗೂ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಅದಕ್ಕೆ ಎಲ್ಲರೂ ಬೆಂಬಲ ನೀಡಬೇಕಿದೆ ಎಂದು ಹೇಳಿದರು.
ಬಂದ್ ಗೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದೆವು 26 ಗಣರಾಜ್ಯೋತ್ಸವ ಇರುವುದರಿಂದ 25 ಕ್ಕೆ ಮಾಡಿ ಎಂದು ಸಿಎಂ ಹೇಳಿದ್ದರು. ನಮಗೇನು ಮೋದಿ, ಅಮಿತ್ ಶಾ ಬರ್ತಾರೆ ಅನ್ನೋದು ಗೊತ್ತಿದೆಯಾ ಎಂದು ಪ್ರಶಸ್ನಿಸಿದರು. ಈ ವಿಚಾರದಲ್ಲಿ ತಮ್ಮ ಹೇಳಿಕೆಯನ್ನು ಅಶೋಕ್ ಹಿಂಪಡೆಯಬೇಕು ಎಂದರು.