ಸುಮಧುರ ಕನ್ನಡ ಚಿತ್ರ ಗೀತೆಗಳ 'ಗಾನಯಾನ'
ಬೆಂಗಳೂರು, ಮಾರ್ಚ್ 22: ಚಲನಚಿತ್ರ ರಂಗದ ಇತಿಹಾಸ ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರ ಗೀತೆಗಳ ಭಾವಯಾನ ಗಾನಯಾನ ಕಾರ್ಯಕ್ರಮ ಮಾ.23ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರಸ್ ಕಮ್ಯುನಿಕೇಷನ್ ಸಂಸ್ಥೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾನಯಾನದಲ್ಲಿ ಚಲನಚಿತ್ರ ಹಾಗೂ ಸಂಗೀತ ಕಲಾವಿದರಾದ ಮೋಹನ್, ಜೋಗಿ ಸುನಿತಾ, ಮಂಗಳ ರವಿ,ಶ್ರಾವ್ಯ ಆಚಾರ್, ಶ್ರೀನಿವಾಸ್ ಆಚಾರ್ ನಡೆಸಿಕೊಳ್ಳಲಿದ್ದಾರೆ .ಸಂಜೆ 6ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.
ವಲಸೆ ಬದುಕಿನ ಮೇಲೆ ಬೆಳಕು ಚೆಲ್ಲುವ 'ಹಿಜಾಬ್' ಕುರಿತು ಅವಲೋಕನ
ಕನ್ನಡ ನಾಡು-ನುಡಿ ಹಾಗೂ ನೆಲ-ಜಲ ಮತ್ತು ಚಲನಚಿತ್ರದ ಇತಿಹಾಸವನ್ನು ನೆನಪಿಸುವ ಕಾರ್ಯಕ್ರಮವಾಗಿದೆ. ಈ ಗಾನಯಾನ ಕಾರ್ಯಕ್ರಮ, ಮೈಸೂರು, ಮಂಗಳೂರು, ಮಡಿಕೇರಿ ಹೀಗೆ ರಾಜ್ಯದ ಹಲವಾರು ಭಾಗಗಳಲ್ಲಿ ನಡೆಸಲಾಗುತ್ತದೆ.
Comments
English summary
Department of Information and public relations and Saras Communications have jointly organising Gaana Yaana. Classical singing program on March 23 at 6pm at Chitrakala parishat.
Story first published: Thursday, March 22, 2018, 14:41 [IST]