ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಶೇ.20ರಷ್ಟು ನೀರು ಸಂರಕ್ಷಿಸಿದ ಡಿಸಿಪಿ ಕಚೇರಿ
ಬೆಂಗಳೂರು ಜೂ. 28: ನಿತ್ಯ ಬಳಕೆಯ ನೀರಿನ ನಲ್ಲಿಗೆ (ಟ್ಯಾಪ್) ವಿನೂತನ ಅತ್ಯಂತ ಸರಳ ತಂತ್ರಜ್ಞಾನ ಅಳವಡಿಕೆಯಿಂದ ಮಾಸಿಕ ಶೇ.20ರಷ್ಟು ನೀರಿನ ಸಂರಕ್ಷಣೆ ಆಗಿದೆ. ಸಾವಿರಾರು ರೂ. ನೀರಿನ ಶುಲ್ಕ ಸಹ ಉಳಿಸಬಹುದಾಗಿದೆ ಎಂಬುದನ್ನು ಬೆಂಗಳೂರಿನ ಉಪ ಪೊಲೀಸ್ ಆಯುಕ್ತರ ಕಚೇರಿ ಸಾಬೀತು ಮಾಡಿದೆ.
ಹೌದು, ನೀರಿನ ನಲ್ಲಿಗೆ ಸರಳ ತಂತ್ರಜ್ಞಾನ ಅಳವಡಿಕೆಯಿಂದ ಮಾಸಿಕವಾಗಿ ಬಳಕೆ ಆಗುತ್ತಿದ್ದ ಒಟ್ಟು ನೀರಿನಲ್ಲಿ ಶೇ.20ರಷ್ಟು ನೀರಿನ ಸಂರಕ್ಷಣೆ ಆಗಿದ್ದು, ಇದರಿಂದ ಮಾಸಿಕ ನೀರಿನ ಶುಲ್ಕ ಅಂದಾಜು 39,000 ರೂ. ಉಳಿಸಲು ಸಾಧ್ಯವಾಗಿದೆ ಎಂದು ಬೆಂಗಳೂರಿನ ಉಪ ಪೊಲೀಸ್ ಆಯುಕ್ತರಾದ ನಿಶಾ ಜೇಮ್ಸ ಕಚೇರಿಯ ಆಡಳಿತ ಸಿಬ್ಬಂದಿ ಮಾಹಿತಿ ನೀಡಿದೆ.
ಈ ಸಿಬ್ಬಂದಿ ಮಾಹಿತಿ ಪ್ರಕಾರ, ಉಪ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಚ್ ಎಸ್ ಆರ್ ಬಡಾವಣೆ ಮೂಲದ ಎವ್ರಿಥಿಂಗ್ ಇಕೋ ಎನ್ವಿರೋ ಸಲೂಷನ್ ಪ್ರವೈಟ್ ಲಿಮಿಟೆಡ್ ನಿಂದ ಸೇವೆ ಪಡೆಯಲಾಗಿದೆ. ಕಂಪನಿಯು ಕಚೇರಿ ಆವರಣದಲ್ಲಿದ್ದ ಸುಮಾರು 90 ನೀರಿನ ನಲ್ಲಿಗಳಿಗೆ ನೀರು ಉಳಿತಾಯವಾಗುವ ಏರೇಟರ್ ಸಾಧನ ಅಳವಡಿಸಿದೆ.
ಇದರಿಂದ ಪ್ರತಿ ಸಿಬ್ಬಂದಿ ಮೇ ತಿಂಗಳಲ್ಲೇ ತಲಾ 349 ಲೀಟರ್ ನೀರು ಉಳಿಸಿದ್ದಾರೆ. ಇಷ್ಟು ನೀರನ್ನು ಒಟ್ಟುಗೂಡಿಸಿದರೆ ಮಾಸಿಕ ಬಳಕೆಯ ಶೇ.20ರಷ್ಟು ನೀರು ಉಳಿಕೆಯಾದಂತಾಗಿದೆ. ಈ ಸರಳ ತಂತ್ರಜ್ಞಾನ ಅಳವಡಿಕೆಯಿಂದಾಗಿ ಅಂದಾಜು 39,000 ರೂ. ಉಳಿತಾಯವಾಗಿದೆ. ಇದು ಜೂನ್ ನಲ್ಲಿ ಬಂದ ಕಚೇರಿ ನೀರಿನ ಬಿಲ್ ನಿಂದ ತಿಳಿದು ಬಂದಿದೆ.

23 ಕಚೇರಿಗೂ ಅಳವಡಿಕೆಗೆ ಮುಂದಾದ ಇಲಾಖೆ
"ಈ ಒಂದು ಕಚೇರಿಯಲ್ಲಿ ನೀರಿನ ಸಂರಕ್ಷಣೆ ಉದ್ದೇಶ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಎಲ್ಲ 23 ಕಚೇರಿಗಳ ನಲ್ಲಿಗಳಿಗೂ ಅಳವಡಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಇಲಾಖೆಗೆ ತಿಳಿಸಲಾಗುವುದು. ಅಲ್ಲದೇ ಕಚೇರಿಯಲ್ಲಿನ ಸಿಬ್ಬಂದಿ ಅವರ ಕುಟುಂಬದವರು, ಪೊಲೀಸ್ ಕ್ವಾಟ್ರರ್ಸ್, ಮನೆಗಳಲ್ಲಿ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು. ಭವಿಷ್ಯದ ದೃಷ್ಟಿಯಿಂದ ನೀರಿನ ಸಂಕ್ಷಣೆ ಹಾಗೂ ನೀರಿನ ಮಿತ ಬಳಕೆ ಅಗತ್ಯವಾಗಿದೆ," ಎಂದು ಡಿಸಿಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಒಂದು ನಲ್ಲಿಗೆ 68ರು. ಖರ್ಚು ಮಾಡಿದರೆ ಸಾಕು
ಚಿಕ್ಕದೆನಿಸಿದರೆ ಪರಿಣಾಮಕಾರಿ ಎನಿಸುವ ಈ ಏರೇಟರ್ ಸಾಧನವನ್ನು ಅಳವಡಿಕೆಗೆ ಅತ್ಯಂತ ಕಡಿಮೆ ಹಣ ಸಾಕಾಗುತ್ತದೆ. ಒಂದು ನಲ್ಲಿಗೆ 68ರು.ಗೆ ಸಿಗುವ ಏರೇಟರ್ ಅಳವಡಿಸಿದರೆ ನೀರನ್ನು ಮಿತ ಬಳಕೆ ಸಾಧ್ಯವಾಗುತ್ತದೆ. ಆಯುಕ್ತರ ಕಚೇರಿಯಲ್ಲಿನ ಒಟ್ಟು 90ನಲ್ಲಿ (ಟ್ಯಾಪ್) ಗಳಿಗೆ ಒಟ್ಟು 6120 ರೂ. ವ್ಯಯಿಸಿ ಏರೇಟರ್ ಅಳವಡಿಕೆ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

17.29ಲಕ್ಷ ಲೀ. ಬದಲಾಗಿ 13.86ಲಕ್ಷ ಲೀ.ನೀರು ಬಳಕೆ
ಏರೇಟರ್ ಸಾಧನ ಅಳವಡಿಕೆ ಕುರಿತು ಕಚೇರಿ ಉಸ್ತುವಾರಿ ನಾಗರಾಜ್ ಪ್ರತಿಕ್ರಿಯಸಿ, "ಏರೇಟರ್ ಸಾಧನ ಅಳವಡಿಕೆಗೂ ಮುನ್ನ ಏಪ್ರಿಲ್ ನಲ್ಲಿ ಬಳಕೆಯಾದ 17.29ಲಕ್ಷ ಲೀಟರ್ ನೀರಿಗೆ ಮೇ ತಿಂಗಳಲ್ಲಿ ಬಂದ ಒಟ್ಟು ನೀರಿನ ಬಿಲ್ ಮೊತ್ತ 1,90,846 ರೂ.. ಅದೇ ಮೇ ತಿಂಗಳಲ್ಲಿ ಏರೇಟರ್ ಅಳವಡಿಸದ ಮೇಲೆ 13.86ಲಕ್ಷ ಲೀಟರ್ ನೀರು ಬಳಕೆ ಆಗಿದೆ. ಇದರ ಬಿಲ್ ಜೂನ್ ಒಟ್ಟು 1,49,671ರೂ. ಬಂದಿದೆ. ಸರಳ ಉಪಾಯದಿಂದ ಅಮೂಲ್ಯವಾದ ನೀರು ಹಾಗೂ ಹಣ ಸಹ ಉಳಿತಾಯವಾಗುತ್ತದೆ," ಎಂದು ಅವರು ತಿಳಿಸಿದರು.

ನೀರಿನ ಹರಿವು ಕಡಿಮೆಗೊಳಿಸುವ ಏರೇಟರ್:
ಎಚ್ ಎಸ್ ಆರ್ ಬಡಾವಣೆ ಮೂಲದ ಎವ್ರಿಥಿಂಗ್ ಇಕೋ ಎನ್ವಿರೋ ಸಲೂಷನ್ ಪ್ರವೈಟ್ ಲಿಮಿಟೆಡ್ನ ನಿರ್ದೇಶಕ ಕರುನ್ ಕನವಿ ಮಾತನಾಡಿ, "ಸಾಮಾನ್ಯವಾಗಿ ಒಂದು ನಿಮಿಷಕ್ಕೆ ಒಂದು ನಲ್ಲಿಯಿಂದ ಸುಮಾರು 10ಲೀಟರ್ ಸುರಿಸಬಹುದು. ನೀರಿನ ಹರಿದು ಹೆಚ್ಚಿದ್ದರೆ ನಿಮಿಷಕ್ಕೆ 13ಲೀಟರ್ ವರೆಗೆ ನೀರು ಹಿಡಿಯಬಹುದು. ಆದರೆ ಈ ಏರಿಯಟರ್ ಬಳಸಿದರೆ ಒಂದು ನಲ್ಲಿಯಿಂದ ನಿಮಿಷಕ್ಕೆ ಮೂರು ಲೀಟರ್ ನೀರು ಸಂಗ್ರಹಿಸಬಹುದು. ನಲ್ಲಿಯಿಂದ ನೀರು ಜೋರಾಗಿ ಬಿದ್ದು ವ್ಯರ್ಥವಾಗುವುದನ್ನು ಇದು ತಪ್ಪಿಸುತ್ತದೆ," ಎಂದು ತಿಳಿಸಿದರು.
Recommended Video
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ












Click it and Unblock the Notifications