ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಮೃತ ದೇಹದ ಶವಸಂಸ್ಕಾರ: ಡಿಕೆಶಿ ಕೊಟ್ಟ ಸಲಹೆ ಕಡೆ ಗಮನಕೊಡಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ತಾಂಡವಾಡುತ್ತಿರುವ ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

"ಶವ ಸಂಸ್ಕಾರಕ್ಕೆ 35 ಸಾವಿರ ರೂಪಾಯಿ ಖರ್ಚು ಮಾಡಬೇಕು ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಅಷ್ಟು ದುಡ್ಡು ಕೊಟ್ಟರೂ ಕೆಲವು ಸ್ಮಶಾನಗಳಲ್ಲಿ ಜಾಗ ಸಿಗುತ್ತಿಲ್ಲ. ನಾನು ಸರಕಾರಕ್ಕೆ ಸಲಹೆಯೊಂದನ್ನು ನೀಡುತ್ತೇನೆ"ಎಂದು ಡಿಕೆಶಿ ಹೇಳಿದ್ದಾರೆ.

 18ವರ್ಷ ಮೇಲ್ಪಟ್ಟ ಸರ್ವರಿಗೂ ಕೊರೊನಾ ಲಸಿಕೆ: ಎರಡು ಬಹುದೊಡ್ಡ ಸವಾಲುಗಳು 18ವರ್ಷ ಮೇಲ್ಪಟ್ಟ ಸರ್ವರಿಗೂ ಕೊರೊನಾ ಲಸಿಕೆ: ಎರಡು ಬಹುದೊಡ್ಡ ಸವಾಲುಗಳು

"ಕಂದಾಯ ಸಚಿವರೇ, ಬೆಂಗಳೂರು ಸುತ್ತಮುತ್ತ ಅಷ್ಟೊಂದು ಜಮೀನುಗಳಿವೆ. ಹೊರವಲಯದಲ್ಲಿ ಹತ್ತು ಎಕರೆ ಜಮೀನನ್ನು ಶವಸಂಸ್ಕಾರಕ್ಕೆ ತಾತ್ಕಾಲಿಕವಾಗಿ ಯಾಕೆ ಕೊಡಬಾರದು"ಎನ್ನುವ ಸಲಹೆಯನ್ನು ಡಿಕೆಶಿ ನೀಡಿದ್ದಾರೆ.

Corona Effected Death Funeral Of The Body, D K Shivakumar Given Valuable Suggestion To Government

"ನಮ್ಮ ದೇಶದ ಆಸ್ತಿ ಏನಂದರೆ, ನಮ್ಮ ಸಂಸ್ಕೃತಿ, ನಮ್ಮ ಕುಟುಂಬದವರನ್ನು ಗೌರವಯುತವಾಗಿ ಕಳುಹಿಸಿ ಕೊಡುವುದು ಕರ್ತವ್ಯವಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕು. ಅದಕ್ಕೆ ಸರಕಾರ ಅವಕಾಶ ಮಾಡಿಕೊಡಬೇಕು"ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

"ಸೌದೆನೋ, ಕರೆಂಟೋ ಏನಾದರೂ ಬೆಂಗಳೂರಿನ ಏಳು ಕಡೆ ಹತ್ತತ್ತು ಎಕರೆ ಜಮೀನನ್ನು ತುರ್ತಾಗಿ ಮತ್ತು ತಾತ್ಕಾಲಿಕವಾಗಿ ನೀಡಿ. ಶವಸಂಸ್ಕಾರಕ್ಕೆ ಎಷ್ಟು ಜನರ ಮಾರ್ಗಸೂಚಿಯನ್ನು ನೀಡುತ್ತೀರೋ, ಅದರ ಪ್ರಕಾರ ಆ ಕೆಲಸ ನಡೆಯಲಿ"ಎಂದು ಡಿಕೆಶಿಯವರು ಸರಕಾರವನ್ನು ಒತ್ತಾಯಿಸಿದ್ದಾರೆ.

"ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಳ್ಳಬೇಡಿ"

"ಇಂತಹ ಸಣ್ಣ ಕೆಲಸವನ್ನು ಮಾಡಲಾಗದ ಇದೂ ಒಂದು ಸರಕಾರನಾ, ಇದನ್ನೂ ನಮ್ಮ ಬಾಯಿಯಿಂದ ಕೇಳಿಸಿಕೊಳ್ಳಬೇಕಾ. ಇದೊಂದು ಬೇಸಿಕ್ ಕಾಮನ್ ಸೆನ್ಸ್ ಅಲ್ಲವೇ"ಎಂದು ಡಿ.ಕೆ.ಶಿವಕುಮಾರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Recommended Video

ಸರ್ಕಾರದ ಹೊಸ ಕಟ್ಟು ನಿಟ್ಟಿನ ಕ್ರಮ ! | Oneindia Kannada

English summary
Corona Effected Death Funeral Of The Body, D K Shivakumar Given Valuable Suggestion To Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X