ನೂರು ಮೋದಿ ಬಂದರೂ ಕಾಂಗ್ರೆಸ್ಮುಕ್ತವಾಗಿಸಲು ಸಾಧ್ಯವಿಲ್ಲ
Recommended Video

ಬೆಂಗಳೂರು, ಮೇ 2: ನೂರು ಮೋದಿ ಬಂದರೂ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ ಎನ್ನುವುದು ಚಿಕ್ಕಪೇಟೆ ಶಾಸಕ, ಆರ್.ವಿ ದೇವರಾಜ್ ಮಾತು.
2013ರಲ್ಲಿ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಗೆದ್ದಿದ್ದ ಆರ್.ವಿ. ದೇವರಾಜ್, ಈಗ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೃಷ್ಟಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಅವರು ಒನ್ ಇಂಡಿಯಾದೊಂದಿಗೆ ಕೆಲವು ಮಾತುಗಳನ್ನು ಹಂಚಿಕೊಂಡರು.
ದೇಶದಲ್ಲಿ ಎಲ್ಲೆಡೆ ಕಾಂಗ್ರೆಸ್ ಸೋಲು ಅನುಭವಿಸಿದ್ದಾಗ ಇಂದಿರಾಗಾಂಧಿ ಅವರನ್ನು ಗೆಲ್ಲಿಸಿ ಮತ್ತೆ ಪ್ರಧಾನಿ ಮಾಡಿದ್ದು ಕರ್ನಾಟಕ. ಸೋನಿಯಾ ಗಾಂಧಿ ಅವರನ್ನೂ ಈ ನೆಲ ಗೆಲ್ಲಿಸಿದೆ. ದೇಶದಲ್ಲಿ ಎಲ್ಲಿಯೇ ಕಾಂಗ್ರೆಸ್ ಸೋತರೂ ಕರ್ನಾಟಕ ಅದರ ಕೈ ಹಿಡಿಯುತ್ತದೆ.

ಈ ಬಾರಿ ಗುಜರಾತ್ನಲ್ಲಿ ಕಾಂಗ್ರೆಸ್ ಬರುತ್ತದೆ ಎಂದಿದ್ದೆ. ಕೆಲವು ಏಜೆಂಟ್ ಪಕ್ಷಗಳು ಮತ ಒಡೆದು ಬಿಜೆಪಿ ಗೆಲ್ಲಿಸಿದರು. ಮುಂದೆ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ಸೂಪರ್ ರಿಸಲ್ಟ್ ಬರುತ್ತದೆ. ಕರ್ನಾಟಕದಲ್ಲಂತೂ 130 ಸೀಟುಗಳು ಬರುವುದು ಅನುಮಾನವೇ ಇಲ್ಲ ಎನ್ನುತ್ತಾರೆ ದೇವರಾಜ್.
ಅನ್ನ ತಿಂದ ಯಾರೂ ಕಾಂಗ್ರೆಸ್ಗೆ ಮೋಸ ಮಾಡೊಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಸ್ಲಂಗಳಲ್ಲಿ ಉಚಿತ ನೀರು ಕೊಡುತ್ತಿದ್ದೇವೆ. ಅಕ್ಕಿ ಸಿಗುತ್ತಿದೆ. ಹತ್ತು ರೂಪಾಯಿಗೆ ಊಟ ಕೊಡುತ್ತಿದ್ದಾರೆ, ಅವರು ಮತ್ತೆ ಮುಖ್ಯಮಂತ್ರಿ ಆಗುವುದು ಖಚಿತ.
ಸಿದ್ದರಾಮಯ್ಯ ಅವರ ಯೋಜನೆಗಳಲ್ಲಿ ರಾಜ್ಯದ ಪ್ರತಿಯೊಬ್ಬರೂ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಏನು ಕೆಲಸ ಮಾಡುತ್ತಾರೆ? ಅವರು ಮಾಡೋದು ಭಾರತವನ್ನು ಒಡೆದು ಆಡೋದು. ಭಾಯಿಯೊ ಔರ್ ಬೆಹೆನೋ ಎಂದು ಸುಳ್ಳುಗಳನ್ನು ನಂಬಿಸಿ ಮತ ಕದಿಯುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪ್ರವಾಸ ಮಾಡಬೇಕು. ಅವರ ಪ್ರಚಾರದ ಅಗತ್ಯ ಬಹಳ ಇದೆ. ಅವರು ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡರಲ್ಲಿಯೂ ಗೆಲ್ಲುವುದು ನಿಶ್ಚಿತ. ಬಳಿಕ ಬಾದಾಮಿ ಕ್ಷೇತ್ರಕ್ಕೆ ರಾಜೀನಾಮೆ ನೀಡ್ತಾರೆ.
ಈ ಬಾರಿಯೂ 2013ರ ಚುನಾವಣೆ ಪುನರಾವರ್ತನೆ ಆಗುತ್ತದೆ. ಆಗ ಸಿಂಪತಿ ಇತ್ತು. ಹೋರಾಟ ಕೂಡ ನಡೆಸಿ ಗೆದ್ದೆವು. ಈಗ ಕೆಲಸ ಮಾಡಿದ್ದಕ್ಕೆ ಅಧಿಕಾರ ಬರುತ್ತದೆ. ಸುಮ್ಮನೆ ಅಧಿಕಾರ ಸಿಗುವುದಿಲ್ಲ. ಅಭಿವೃದ್ಧಿ ಮಾಡಿದ್ದೇವೆ.
ಕೆಲಸಕ್ಕೆ ಮತ ನೀಡುತ್ತಾರೆ
2013ರಲ್ಲಿ ಮೊದಲ ಬಾರಿಗೆ ಇಲ್ಲಿ ಗೆದ್ದೆ. ಆಗ ಜನರಿಗೆ ಒಂದು ಮಾತು ಹೇಳಿದ್ದೆ. ನನಗೆ ಒಮ್ಮೆ ಮತ ನೀಡಿ. ಕೆಲಸ ಮಾಡಿ ತೋರಿಸುತ್ತೇನೆ. ಕೆಲಸ ಮಾಡಿದ್ದರೆ ಓಟು ಹಾಕಿ ಎಂದಿದ್ದೆ.
1.000 ಕೋಟಿವರೆಗೂ ದುಡ್ಡು ತಂದು ಕೆಲಸ ಮಾಡಿದ್ದೇನೆ. ಬೆಳಿಗ್ಗೆ 5 ರಿಂದ ಸಂಜೆ 12 ವರೆಗೂ ಜನರಿಗೆ ಸಿಗುತ್ತೇನೆ. ಜನರು ಕೆಲಸ ಮಾಡಿದವರಿಗೆ ಮೋಸ ಮಾಡೊಲ್ಲ. ಹೀಗಾಗಿ ನಾನಿದ್ದಲ್ಲಿ ಜನರು ತಾವಾಗಿಯೇ ಸೇರುತ್ತಾರೆ.
ಮನೆಯವರು, ಮಕ್ಕಳು, ಜನರು ನನ್ನ ಪರವಾಗಿ ಪ್ರಚಾರ ಮಾಡ್ತಿದ್ದಾರೆ. ಇಲ್ಲಿ ನಾವು ಗೆಲ್ಲಲು ಯಾರೂ ಪ್ರಚಾರಕ್ಕೆ ಬೇಕಾಗಿಲ್ಲ. ನಾವೇ ಸಾಕು.
ಸಹಜ ಜೀವನ ನಡೆಸುತ್ತಿದ್ದೇವೆ. ದೇವರು ಸಾಕಷ್ಟು ಕೊಟ್ಟಿದ್ದಾನೆ. ನನ್ನ ಏಳಿಗೆಗೆ ಜನರೇ ಕಾರಣ. ಅವರಿಲ್ಲದೆ ಏನೂ ಇಲ್ಲ. ಅವರೇ ಸಂಬಂಧಿಗಳು, ಅಣ್ಣತಮ್ಮಂದಿರು. ಈ ಮಟ್ಟಕ್ಕೆ ಬರಲು ಜನರು ಹಾಕಿದ ಮತ ಭಿಕ್ಷೆ. ಅವರನ್ನು ಯಾವುದೇ ಕಾರಣಕ್ಕೂ ಮರೆಯೊಲ್ಲ ಎನ್ನುತ್ತಾರೆ ದೇವರಾಜ್.
ನನಗೆ ಕೆಲಸ ಮಾಡುವ ಸಾಮರ್ಥ್ಯವಿದೆ. ಇನ್ನೂ 15 ವರ್ಷ ನಾನೇ ಇಲ್ಲಿ ಶಾಸಕನಾಗುತ್ತೇನೆ. ಇಲ್ಲಿ ಸ್ಪರ್ಧಿಸಬೇಕು ಎಂದು ನನ್ನ ಮಗ ಎಂದೂ ಕೇಳಿಲ್ಲ. ಆತ ಕಾರ್ಪೊರೇಟರ್ ಆಗಿದ್ದಾನೆ. ಮುಂದೆ ಮೇಯರ್ ಆಗಲಿ. ಅಲ್ಲಿವರೆಗೆ ನಾನೇ ರಾಜಕಾರಣದಲ್ಲಿ ಇರುತ್ತೇನೆ.
ಅಭಿವೃದ್ಧಿಗೆ ಮಾತ್ರ ಮತ ನೀಡಿ. ಕೆಲಸ ಮಾಡದೆ ಇದ್ದರೆ ಮತ ಹಾಕಬೇಡಿ ಎಂದೇ ಜನರನ್ನು ಕೇಳುತ್ತೇನೆ. ಈಗ ಸಾಕಷ್ಟು ಕೆಲಸ ಮಾಡಿದ್ದೇನೆ. ಹಳ್ಳಿಯಂತಿದ್ದ ಇಲ್ಲಿನ ಕೆಲವು ಪ್ರದೇಶಗಳು ಡೆಲ್ಲಿ ಆಗಿವೆ. ಇನ್ನೂ ಮಾಡುವುದು ಇದೆ. ಉತ್ತಮ ಆಡಳಿತಕ್ಕೆ ಮತ ನೀಡುವಂತೆ ಕೋರುತ್ತೇನೆ ಎಂದು ಅವರು ಹೇಳುತ್ತಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications