ಬೆಂಗಳೂರು ಉತ್ತರದಿಂದ ಅಶೋಕ್ ಸ್ಪರ್ಧೆಯಿಲ್ಲ!
ಬೆಂಗಳೂರು, ಮಾ.3 : ಹಲವು ದಿನಗಳ ಹಗ್ಗಜಗ್ಗಾಟದ ನಂತರ ಬೆಂಗಳೂರು ಉತ್ತರ ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಿದ್ದು ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ ಮಧ್ಯಾಹ್ನ ಬಿಜೆಪಿ ನಾಯಕರ ಸಭೆ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಮಾರ್ಚ್
10ರೊಳಗೆ
ಪಕ್ಷದ
ಅಭ್ಯರ್ಥಿಗಳ
ಪಟ್ಟಿ
ಬಿಡುಗಡೆ
ಮಾಡುವ
ತಯಾರಿಯಲ್ಲಿ
ಬಿಜೆಪಿ
ತೊಡಗಿದೆ.
ಆದರೆ,
ಪಕ್ಷದ
ಆಂತರಿಕ
ಕಲಹದಿಂದಾಗಿ
ಅಭ್ಯರ್ಥಿಗಳನ್ನು
ಅಂತಿಮಗೊಳಿಸುವುದು
ಪಕ್ಷದ
ಪಾಲಿಗೆ
ಸವಾಲಾಗಿದೆ.
ಹಲವು
ಗೊಂದಲಗಳಿಗೆ
ಕಾರಣವಾಗಿದ್ದ
ಬೆಂಗಳೂರು
ಉತ್ತರ
ಕ್ಷೇತ್ರದ
ಕಣದಿಂದ
ಮಾಜಿ
ಡಿಸಿಎಂ
ಆರ್
ಅಶೋಕ್
ಹಿಂದೆ
ಸರಿದಿದ್ದಾರೆ.
[ಚುನಾವಣಾ
ಕಣದಿಂದ
ಹಿಂದೆ
ಸರಿದ
ಡಿವಿಎಸ್]
ಸೋಮವಾರ ಮಧ್ಯಾಹ್ನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಮುಖ ನಾಯಕರ ಸಭೆ ನಡೆಯಲಿದ್ದು, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯಲಿದೆ. ಇಂದಿನ ಸಭೆಯಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. [ಬಿಜೆಪಿ ಪಟ್ಟಿ ಅಖೈರು]
ಆರ್.ಅಶೋಕ್ ಉತ್ತರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದಿರುವುದರಿಂದ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಿಎಂ ಡಿವಿ ಸದಾನಂದ ಗೌಡ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮತ್ತೊಮ್ಮೆ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಸೋಮವಾರ ನಡೆಯುವ ಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗೆ ಉತ್ತರ ದೊರೆಯುವ ನಿರೀಕ್ಷೆ ಇದೆ.