ಬೆಂಗಳೂರು: ಹಾಳಾದ ಹಾಲು ಹಿಂತಿರುಗಿಸಲು ಹೋಗಿ ₹77,000 ಕಳೆದುಕೊಂಡ ಮಹಿಳೆ.!, ಹೇಗೆ ಸಾಧ್ಯ?-ಇಲ್ಲಿದೆ ಮಾಹಿತಿ
ಬೆಂಗಳೂರು, ಮಾರ್ಚ್, 26: ಆನ್ಲೈನ್ ಪೇಮೆಂಟ್ ವಿಚಾರದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೇ ಇಂಥಹದ್ದೇ ಘಟನೆಯೊಂದು ಇದೀಗ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟಕ್ಕೂ ಈ ವಂಚನೆ ನಡೆದಿದ್ದಾರೂ ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿನ ಮಹಿಳೆಯೊಬ್ಬರು ಇತ್ತೀಚೆಗೆ ಆನ್ಲೈನ್ನಲ್ಲಿ ತಂದಿದ್ದ ಹಾಳಾದ ಹಾಲನ್ನು ಹಿಂದಿರುಗಿಸಲು ಪ್ರಯತ್ನಿಸುವಾಗ 77,000 ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ ಅಂತಾ ಮನಿ ಕಂಟ್ರೋಲ್ ವರದಿ ಮಾಡಿದೆ. ನಿವೃತ್ತ ಸೇನಾಧಿಕಾರಿಯೊಬ್ಬರ ಪತ್ನಿ ಹಾಗೂ ನಗರದ ಕಸ್ತೂರಬಾ ನಗರದ ನಿವಾಸಿ ಆಗಿರುವ ಮಹಿಳೆ ಆನ್ಲೈನ್ ಕಿರಾಣಿ ಅಂಗಡಿಯಿಂದ ನಿತ್ಯ ಹಾಲು ಖರೀದಿಸುತ್ತಿದ್ದರು. ಆದರೆ, ಮಾರ್ಚ್ 18ರಂದು ಹಾಲು ಹಾಳಾಗಿರುವುದನ್ನು ಗಮನಿಸಿ ವಾಪಸ್ ಕೊಡಲು ನಿರ್ಧರಿಸಿದ್ದಾಳೆ.

ಆನ್ಲೈನ್ನಲ್ಲಿ ಪ್ಲಾಟ್ಫಾರ್ಮ್ನ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕಿ ನಂತರ, ಮಹಿಳೆ ಆ ಸಂಖ್ಯೆಯನ್ನು ಡಯಲ್ ಮಾಡಿದ್ದಾರೆ. ಬಳಿಕ ಆ ವ್ಯಕ್ತಿಯು ತನ್ನನ್ನು ಕಿರಾಣಿ ಪ್ಲಾಟ್ಫಾರ್ಮ್ನ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡಿದ್ದಾನೆ. ಹಾಳಾದ ಹಾಲನ್ನು ಹಿಂತಿರುಗಿಸಬೇಕಾಗಿಲ್ಲ. ಈ ಕಾರ್ಯವಿಧಾನವನ್ನು ಅನುಸರಿಸಿದರೆ ಹಣವನ್ನು ಹಿಂತಿರುಗಿಸಲಾಗುವುದು ಎಂದು ಆ ವ್ಯಕ್ತಿ ಮಹಿಳೆಗೆ ತಿಳಿಸಿದ್ದಾನೆ.
ಬಳಿಕ ಮಹಿಳೆಯು ಅಪರಿಚಿತ ವ್ಯಕ್ತಿಯಿಂದ UPI ಐಡಿ ಸಂಖ್ಯೆ 081958ನೊಂದಿಗೆ WhatsApp ಸಂದೇಶವನ್ನು ಪಡೆದಿದ್ದಾಳೆ. ಬಳಿಕ ಆ ವಂಚಕನು PhonePeನಲ್ಲಿ "ಹಣವನ್ನು ವರ್ಗಾಯಿಸಿ" ಎಂಬ ಆಯ್ಕೆಯನ್ನು ಒತ್ತಿ, "To Bank/UPI ID" ಐಕಾನ್ ಅನ್ನು ಕ್ಲಿಕ್ ಮಾಡಲು ಹೇಳಿದ್ದಾನೆ.
ತಾನು ವಂಚನೆಗೆ ಒಳಗಾಗುತ್ತಿದ್ದೇನೆ ಎಂದು ತಿಳಿಯದ ಮಹಿಳೆ ಸೂಚನೆಗಳನ್ನು ಅನುಸರಿಸಿದಳು. ಬಳಿಕ ಸ್ಕ್ಯಾಮರ್ ಅವಳನ್ನು UPI ಐಡಿ ಆಯ್ಕೆಯನ್ನು ಆಯ್ಕೆ ಮಾಡಲು ಹೇಳಿದ್ದಾನೆ. ನಂತರ WhatsAppನಲ್ಲಿ ಅವಳು ಸಂದೇಶವನ್ನು ಸ್ವೀಕರಿಸಿದ ಸಂಖ್ಯೆಯನ್ನು ಸೇರಿಸಲು ಹೇಳಿದ್ದಾನೆ. ಆಕೆಯ ಮೊಬೈಲ್ ಸಂಖ್ಯೆಯ ಕೊನೆಯ 5 ಸಂಖ್ಯೆಗಳನ್ನು ನಮೂದಿಸಿದ ನಂತರ ಮಹಿಳೆಗೆ "ಪಾವತಿ" ಆಯ್ಕೆಯನ್ನು ಕ್ಲಿಕ್ ಮಾಡಲು ಹೇಳಿದ್ದು, ಆಕೆಯ ಹಣವನ್ನು ಮರಳಿ ಪಡೆಯಲು UPI ಐಡಿಯನ್ನು ನಮೂದಿಸಲು ಹೇಳಿದ್ದಾನೆ.
ಯುಪಿಐ ಸಂಖ್ಯೆಯನ್ನು ನಮೂದಿಸಿದ ನಂತರ, ಆಕೆಯ ಖಾತೆಯಿಂದ ಮೊತ್ತವನ್ನು ಎಗರಿಸಲಾಯಿತು. ಬಳಿಕ ವಂಚಕ ಕರೆಯನ್ನು ಕಟ್ ಮಾಡಿದ್ದಾರೆ. ಆಗ ಮಹಿಳೆ ತಾನು ವಂಚನೆಗೊಳಗಾಗಿರುವುದನ್ನು ಅರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇನ್ನು "ನಾವು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ. ವಂಚಕರ ಖಾತೆಯಿಂದ ಮೊತ್ತವನ್ನು ಸ್ಥಗಿತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದಲ್ಲಿ ಹೀಗೆ ಮಹಿಳೆಯರು ಫೋನ್ ಮೂಲಕ ಕರೆ ಮಾಡುವವರಿಂದ ತಿಳಿಯದೆ ವಂಚನೆಗೊಳಗಾದ ಅನೇಕ ಘಟನೆಗಳಲ್ಲಿ ಇದು ಒಂದು ಮಾತ್ರ.
ಈ ವರ್ಷದ ಆರಂಭದಲ್ಲಿ ನಗರದಲ್ಲಿ ಮಹಿಳೆಯೊಬ್ಬರು ಫೆಡೆಕ್ಸ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಂದು ತೋರಿಸಿದ ಆನ್ಲೈನ್ ವಂಚಕರಿಂದ 48,00,000 ರೂಪಾಯಿ ವಂಚನೆಗೆ ಒಳಗಾಗಿದ್ದು, ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸಿದ ಹಿನ್ನೆಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
-
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications