ದಾಖಲೆಯ ಧ್ಯಾನ, ನಿರಾಹಾರ ಉಪವಾಸ ವ್ರತಕ್ಕೆ ಬೆಂಗಳೂರು ಸಾಕ್ಷಿ
ಬೆಂಗಳೂರು ಸೆಪ್ಟಂಬರ್ 02: ಒಂದು ದಿನ ಅನ್ನ, ನೀರಿಲ್ಲದೆ ಬದುಕುವುದು ಎಷ್ಟು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಉದ್ಯಾನನಗರಿ ವಿಶೇಷ ಉಪವಾಸ ವ್ರತಕ್ಕೆ ಸಾಕ್ಷಿಯಾಗಿದೆ. ದಿಗಂಬರ ಜೈನಮುನಿಶ್ರೀ 108 ಶ್ರೀ ಪ್ರಸನ್ನ ಸಾಗರಜೀ ಮಹಾರಾಜ್ ಅವರು ಒಂದು ಹನಿ ನೀರನ್ನೂ ಕುಡಿಯದೆ ಸತತ 16 ದಿನಗಳ ಕಾಲ ಕೈಗೊಂಡಿದ್ದ ನಿರಾಹಾರ ಉಪವಾಸ ವ್ರತವನ್ನು ಅಂತ್ಯ ಮಾಡಿದ್ದಾರೆ.
ಅಷ್ಟೇ ಅಲ್ಲ, ಈ ಅವಧಿಯಲ್ಲಿ ಅವರು ಬರೋಬ್ಬರಿ 384 ಗಂಟೆಗಳ ಕಾಲ ಕುಳಿತಲ್ಲೇ ಧ್ಯಾನಗೈದು ದಾಖಲೆ ನಿರ್ಮಿಸಿದ್ದಾರೆ. ಆಷಾಢ ಮಾಸದ ಚತುದರ್ಶಿಯಂದು (ಆಗಸ್ಟ್ 17 ರಂದು ಶ್ರಾವಣ ಹುಣ್ಣಿಮೆಗೂ ಮುನ್ನಾದಿನ) ಆರಂಭಗೊಂಡ ಮುನಿಶ್ರೀ 108 ಶ್ರೀಪ್ರಸನ್ನ ಸಾಗರಜೀ ಮಹಾರಾಜ್ ಅವರ ನಿರಾಹಾರ ಉಪವಾಸ ವ್ರತ' ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಮಾಪನಗೊಂಡಿತು.[ಪ್ರಕೃತಿಯ ವರದಾನ ವರಂಗ ಕೆರೆ ಬಸದಿಯ ನೋಡಿ]

ಧರ್ಮಸ್ಥಳ ಶ್ರೀ ಸುರೇಂದ್ರ ಕುಮಾರ್ ಮತ್ತು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ತ್ಯಾಗಿ ಸೇವಾ ಟ್ರಸ್ಟ್ ಮತ್ತು ಅಂತರ್ಮನ ಪದ್ಮಪ್ರಭು ಗುರುಭಕ್ತ ಪರಿವಾರ ಕರ್ನಾಟಕ ಜೈನ ಎಸೋಷಿಯೆಶನ್, ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ, ಖಂಡೇಲವಾಲ ದಿಗಂಬರ ಜೈನ ಸಮಾಜ ಮತ್ತು ಸಕಲ ಜೈನ ಸಮಾಜ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಸ್ವೌಮ್ಯ ಮೂರ್ತಿ ಮುನಿಶ್ರೀ 108 ಪಿಯೂಷ್ ಜೀ ಮಹಾರಾಜರು ಈ ಮಂಗಳ ಕಾರ್ಯಕ್ರಮಕ್ಕೆ ನಿರ್ದೇಶನ ನೀಡಿ ಉಪಸ್ಥಿತರಿದ್ದರು. ಜೈನ ಶ್ವೇತಾಂಬರ ಪಂಥದ ಸಾಧುಗಳು ಕೂಡಾ ಈ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮುನಿಶ್ರೀ ಪ್ರಸನ್ನ ಸಾಗರರಿಗೆ ಶುಭಕೋರಿದರು. ಕನಕಗಿರಿ ಕ್ಷೇತ್ರದ ಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮಿಗಳು ಉಪಸ್ಥಿತರಿದ್ದರು.[ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ]
ಮುನಿಶ್ರೀ ಅವರು ತಮ್ಮ ಪ್ರವಚನದಲ್ಲಿ "ರಾಗಿಗೆ ರಾಗ, ವೈರಾಗಿಗೆ ವೈರಾಗ್ಯ ಚೆನ್ನಾಗಿರುತ್ತದೆ ಎಂದು ಮನುಷ್ಯ ಸ್ವಭಾವವನ್ನು ತಿಳಿಸಿದರು. ನಮ್ಮಲ್ಲಿ ಧರ್ಮವನ್ನು ನಂಬುವವರು ಕಡಿಮೆ. ಧರ್ಮವನ್ನು ಮಾಡುವವರು ಇನ್ನು ಕಡಿಮೆ. ಅದಕ್ಕಿಂತಲೂ ಕಮ್ಮಿ ಜನ ಪಾಪ ಕರ್ಮ ಬಿಡಲು ಬಯಸುತ್ತಾರೆ" ಎಂದರು. ಮುನಿಶ್ರೀ ಅವರು ಸಾರ್ವಜನಿಕರ ಎದುರು ಭಕ್ತರಿಂದ ಆಹಾರ ಸ್ವೀಕರಿಸಿ ಉಪವಾಸ ಮುಕ್ತಾಯಗೊಳಿಸಿದರು.

ದಿಂಗಬರ ಜೈನ ಮುನಿಗಳ ಆಹಾರ ಕ್ರಮ:
ಪಂಚ ನಮಸ್ಕಾರ ಮಂತ್ರದ ಮೂಲಕ ಭಕ್ತರು, ಮುನಿಶ್ರೀಗಳಿಗೆ ಪ್ರದಕ್ಷಿಣೆ ಮಾಡಿ, ಉಚ್ಚಾಸನದಲ್ಲಿ ಕೂರಿಸಿ, ಪಾದಪೂಜೆ ನೆರವೇರಿಸುತ್ತಾರೆ. ನಂತರ ನಮ್ಮ ದೇಹ-ಮನಸ್ಸು- ಮಾತು, ತಮಗೆ ಅರ್ಪಿಸುತ್ತಿರುವ ಆಹಾರ, ಜಲ ಶುದ್ಧವಾಗಿದೆ. ಆಹಾರ ಸ್ವೀಕರಿಸಿ, ಎಂದು ನವಧಾಭಕ್ತಿಯಿಂದ ಪ್ರಾರ್ಥಿಸುತ್ತಾರೆ .
ವಿಶೇಷವೆಂದರೆ, ಮುನಿಶ್ರೀಗಳಿಗೆ ಆಹಾರ ನೀಡುವ (ಶ್ರಾವಕರು)ಭಕ್ತರೂ ಸಹ ಕಟ್ಟುನಿಟ್ಟಿನ ವ್ರತ ಕೈಗೊಂಡಿರಬೇಕು. ಜೀವನ ಪೂರ್ತಿ ರಾತ್ರಿ ಭೋಜನ ತ್ಯಜಿಸಿದವರು, ಭೂಮಿಯಾಳದಲ್ಲಿ ಬೆಳೆಯುವ ಕಂದಮೂಲಗಳನ್ನು ತಿನ್ನದವರು ಮಾತ್ರ ಈ ದಿಂಗಬರ ಸಂತರಿಗೆ ಆಹಾರ ನೀಡಲು ಅರ್ಹತೆ ಪಡೆದಿರುತ್ತಾರೆ. ಇದೇ ಮೊದಲ ಬಾರಿಗೆ ಈ ಪಾರಣಾ ಮಹೋತ್ಸವ' ದಲ್ಲಿ ಮುನಿಶ್ರೀ 108 ಶ್ರೀಪ್ರಸನ್ನ ಸಾಗರಜೀ ಮಹಾರಾಜರು ಸಾರ್ವಜನಿಕವಾಗಿ ಬೊಗಸೆಯಲ್ಲಿ ಆಹಾರ ಸ್ವೀಕರಿಸಿದರು.
ಜೈನ ಸಂಪ್ರದಾಯದಲ್ಲಿ ಉಪವಾಸ ವ್ರತಕ್ಕೆ ತುಂಬಾ ಮಹತ್ವವಿದೆ. ವಿಶೇಷವಾಗಿ ಅಂತರ್ಮನ ಮುನಿಶ್ರೀ ಪ್ರಸನ್ನ ಸಾಗರಜೀ ಮಹಾರಾಜರು ಆತ್ಮಕಲ್ಯಾಣದ ಜೊತೆಗೆ ಲೋಕ ಕಲ್ಯಾಣಕ್ಕಾಗಿ ನಿರಂತರ 16 ದಿನಗಳ ಕಾಲ ನಿರಾಹಾರ (ಅನಶನ ವ್ರತ) ಉಪವಾಸ ವ್ರತವನ್ನು ಕೈಗೊಂಡಿದ್ದರು.
-
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ












Click it and Unblock the Notifications