Bengaluru Rain: ಬೆಂಗಳೂರಿನಲ್ಲಿ ರೌದ್ರವಾತಾರ ಮುಂದುವರೆಸಿದ ಮಳೆರಾಯ
Bengaluru Rain: ಈಗಾಗಲೇ ರಾಜ್ಯಾಂತ ಮುಂಗಾರು ಮಳೆ ಚುರುಕು ಪಡೆದಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಗ್ಯಾಪ್ ಕೊಟ್ಟು ಮಳೆರಾಯನ ಅಬ್ಬರಿಸುತ್ತಿದ್ದಾನೆ. ಇನ್ನು ಇಂದು (ಜೂನ್ 07) ಸಂಜೆ 4:30ರ ವೇಳೆಗೆ ನಗರದ ಹಲವೆಡೆ ಮಳೆರಾಯ ಆರ್ಭಟ ಶುರು ಮಾಡಿದ್ದಾನೆ. ಹಾಗಾದರೆ ಎಲ್ಲೆಲ್ಲಿ ಮಳೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೇ ಆರಂಭದಿಂದಲೂ ಬೆಂಗಳೂರಿನಲ್ಲಿ ಬಿಡುವು ನೀಡಿ ಮಳೆರಾಯ ಆರ್ಭಟಿಸುತ್ತಲೇ ಇದ್ದಾನೆ. ಇನ್ನು ಜೂನ್ ಆರಂಭದಿಂದಲೇ ಮುಂಗಾರು ಆರಂಭವಾಗಿದ್ದು, ನಗರದಲ್ಲಿ ಬೆಳಗ್ಗೆಯೆಲ್ಲ ಬಿಡುವು ನೀಡಿ, ಸಂಜೆ ಅಥವಾ ರಾತ್ರಿಯಾಗುತ್ತಿಂದತೆ ಮಳೆರಾಯ ತನ್ನ ಆರ್ಭಟವನ್ನು ಶುರು ಮಾಡುತ್ತಿದ್ದಾರೆ. ಹಾಗೆಯೇ ಇಂದು (ಜೂನ್ 07) ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರಣ ಸಂಜೆಯಾಗುತ್ತಿದಂತೆ ಮತ್ತೆ ರಾಣಾರ್ಭಟವನ್ನು ಶುರು ಮಾಡಿದ್ದಾನೆ.

ಎಲ್ಲೆಲ್ಲಿ ಮಳೆ?: ನಗರದ ಕೋರಮಂಗಲ, ಎಚ್ಎಸ್ಆರ್ ಲೇಔಟ್, ಮೆಜೆಸ್ಟಿಕ್, ಶೇಶಾದ್ರಪುರಂ, ವಿದ್ಯಾರಣ್ಯಪುರಂ, ಸಿಲ್ಕ್ಬೋರ್ಡ್, ವೈಟ್ಫೀಲ್ಡ್, ಕೆಆರ್ ಪುರಂ, ಯಶವಂತಪುರ ಸೇರಿದಂತೆ ಹಲವೆಡೆ ಮಳಡರಾಯ ರೌದ್ರವಾತಾರವನ್ನು ಶುರು ಮಾಡಿದ್ದಾನೆ. ಇನ್ನು ರಾತ್ರಿಯೂ ಕೂಡ ಮಳೆ ಮುಂದುವರೆಯುವ ಮುನ್ಸೂಚನೆ ಇದೆ.












Click it and Unblock the Notifications