ಬನ್ನೇರುಘಟ್ಟ ಉದ್ಯಾನದ ಗೇಟ್ ಗಳಿಗೆ ಸೆನ್ಸರ್ ಅಳವಡಿಕೆ
ಬೆಂಗಳೂರು, ಜನವರಿ 23: ಬನ್ನೇರುಘಟ್ಟ ಉದ್ಯಾನದ ಗೇಟ್ ಗಳಿಗೆ ಶೀಘ್ರವೇ ಸೆನ್ಸರ್ ಅಳವಡಿಸಲಾಗುತ್ತದೆ. ಇದರಿಂದ ಒಂದು ಆವರಣದಿಂದ ಪ್ರಾಣಿಗಳು ಇನ್ನೊಂದಕ್ಕೆ ನುಗ್ಗಿ ಅನಾಹುತವಾಗುವ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿವಿಧ ಸಫಾರಿಗಳಲ್ಲಿ ಗೇಟ್ ಗಳು ಸೆನ್ಸರ್ ನೆರವಿನಿಂದ ತೆರೆಯುವ ಹಾಗೂ ಮುಚ್ಚುವ ವ್ಯವಸ್ಥೆ ಶೀಘ್ರ ಜಾರಿಗೊಳ್ಳಲಿದೆ. ಪ್ರತಿ ಸಫಾರಿ ವಲಯ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರ ಎರಡು ಗೇಟ್ ಗಳನ್ನು ಹೊಂದಿದ್ದು, ವಾಹನಗಳು ಪ್ರವೇಶುವಾಗ ಪ್ರಾಣಿಗಳು ಹೊರಹೋಗದಂತೆ ತಡೆಯುವ ರೀತಿಯಲ್ಲಿ ರೂಪಿಸಲಾಗಿದೆ. ಹೀಗಿದ್ದರೂ ಸಫಾರಿ ವಹನಗಳು ಸಾಗುವಾಗ ಪ್ರಾಣಿಗಳು ಇನ್ನೊಂದು ಆವರಣಕ್ಕೆ ಪ್ರವೇಶಿಸಿ ಅನಾಹುತ ಉಂಟಾದ ಹಲವು ಉದಾಹರಣೆಗಳಿವೆ.
ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಹಿಡಿದು ಅವುಗಳನ್ನು ಆವರಣಕ್ಕೆ ಸೇರಿಸುವುದು ಸಿಬ್ಬಂದಿಗೆ ಕಷ್ಟದ ಕೆಲಸವಾಗಿದೆ. ಆಯಾ ಸಫಾರಿಯಲ್ಲಿ ಒಬ್ಬನೇ ಗೇಟ್ ಆಪರೇಟರ್ ಗೇಟ್ ತೆರೆಯುವುದು ಮತ್ತು ಮುಚ್ಚುವ ಕೆಲಸವನ್ನು ಮಾಡಲು ಕಷ್ಟ ಎಂಬುದನ್ನು ಅರಿತು ಉದ್ಯಾನದ ಆಡಳಿತ ಮಂಡಳಿ ಹೊಸ ವ್ಯವಸ್ಥೆ ಪರಿಷಯಿಸಲು ಮುಂದಾಗಿದೆ.

ಇತ್ತೀಚೆಗೆ ಎರಡು ಬಿಳಿ ಹುಲಿಗಳು ಸಪಾರಿ ವಾಹನದ ಜತೆ ಸಾಗಿ ರಾಯಲ್ ಬೆಂಗಾಲ್ ಹುಲಿಗಳಿರುವ ಆವರಣ ಪ್ರವೇಶಿಸಿದ್ದವು. ತಮ್ಮ ಆವರಣ್ಕೆ ಬೇರೆ ಹುಲಿಗಳು ಪ್ರವೇಶಿಸಿದ್ದನ್ನು ಕಂಡು ರಾಯಲ್ ಹುಲಿಗಳು ಬಿಳಿ ಹುಲಿಗಳ ಮೇಲೆ ದಾಳಿ ಮಾಡಿದ್ದವು.
ಬಿಳಿ ಹುಲಿಗಳನ್ನು ಅದರದೇ ಸ್ಥಾನಕ್ಕೆ ಸೇರಿಸಲು ಸಿಬ್ಬಂದಿ ಹರಸಾಹಸ ಪಡೆಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಎಲ್ಲ ಸಫಾರಿಗಳಲ್ಲಿ ಹೊಸ ಗೇಟ್ ಗಳನ್ನು ಅಳವಡಿಸಲಾಗುತ್ತದೆ. ಆಗಮನದ ಗೇಟ್ ಮುಚ್ಚಿದ್ದಲ್ಲಿ ಮಾತ್ರ ನಿರ್ಗಮನದ ಗೇಟ್ ತೆರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಪ್ರಾಣಿಗಳು ಸಫಾರಿ ವಾಹನದೊಂದಿಗೆ ಬೇರೆ ಆವರಣಕ್ಕೆ ನುಗ್ಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಳಿ ಹುಲಿ, ಬೆಂಗಾಲ್ ಟೈಗರ್, ಸಿಂಹ, ಕರಡಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಸಫಾರಿ ಇದೆ. ಹೊಸ ವ್ಯವಸ್ಥೆ ಪ್ರಾಯೋಗಿಕ ಪರೀಕ್ಷೆಯನ್ನು ಈಗಾಗಲೇ ನಡೆಸಲಾಗಿದೆ. ಜನವರಿ ಕೊನೆಯ ವಾರದಲ್ಲಿ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications