ಬನ್ನೇರುಘಟ್ಟ ಉದ್ಯಾನದ ಗೇಟ್ ಗಳಿಗೆ ಸೆನ್ಸರ್ ಅಳವಡಿಕೆ
ಬೆಂಗಳೂರು, ಜನವರಿ 23: ಬನ್ನೇರುಘಟ್ಟ ಉದ್ಯಾನದ ಗೇಟ್ ಗಳಿಗೆ ಶೀಘ್ರವೇ ಸೆನ್ಸರ್ ಅಳವಡಿಸಲಾಗುತ್ತದೆ. ಇದರಿಂದ ಒಂದು ಆವರಣದಿಂದ ಪ್ರಾಣಿಗಳು ಇನ್ನೊಂದಕ್ಕೆ ನುಗ್ಗಿ ಅನಾಹುತವಾಗುವ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿವಿಧ ಸಫಾರಿಗಳಲ್ಲಿ ಗೇಟ್ ಗಳು ಸೆನ್ಸರ್ ನೆರವಿನಿಂದ ತೆರೆಯುವ ಹಾಗೂ ಮುಚ್ಚುವ ವ್ಯವಸ್ಥೆ ಶೀಘ್ರ ಜಾರಿಗೊಳ್ಳಲಿದೆ. ಪ್ರತಿ ಸಫಾರಿ ವಲಯ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರ ಎರಡು ಗೇಟ್ ಗಳನ್ನು ಹೊಂದಿದ್ದು, ವಾಹನಗಳು ಪ್ರವೇಶುವಾಗ ಪ್ರಾಣಿಗಳು ಹೊರಹೋಗದಂತೆ ತಡೆಯುವ ರೀತಿಯಲ್ಲಿ ರೂಪಿಸಲಾಗಿದೆ. ಹೀಗಿದ್ದರೂ ಸಫಾರಿ ವಹನಗಳು ಸಾಗುವಾಗ ಪ್ರಾಣಿಗಳು ಇನ್ನೊಂದು ಆವರಣಕ್ಕೆ ಪ್ರವೇಶಿಸಿ ಅನಾಹುತ ಉಂಟಾದ ಹಲವು ಉದಾಹರಣೆಗಳಿವೆ.
ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಹಿಡಿದು ಅವುಗಳನ್ನು ಆವರಣಕ್ಕೆ ಸೇರಿಸುವುದು ಸಿಬ್ಬಂದಿಗೆ ಕಷ್ಟದ ಕೆಲಸವಾಗಿದೆ. ಆಯಾ ಸಫಾರಿಯಲ್ಲಿ ಒಬ್ಬನೇ ಗೇಟ್ ಆಪರೇಟರ್ ಗೇಟ್ ತೆರೆಯುವುದು ಮತ್ತು ಮುಚ್ಚುವ ಕೆಲಸವನ್ನು ಮಾಡಲು ಕಷ್ಟ ಎಂಬುದನ್ನು ಅರಿತು ಉದ್ಯಾನದ ಆಡಳಿತ ಮಂಡಳಿ ಹೊಸ ವ್ಯವಸ್ಥೆ ಪರಿಷಯಿಸಲು ಮುಂದಾಗಿದೆ.

ಇತ್ತೀಚೆಗೆ ಎರಡು ಬಿಳಿ ಹುಲಿಗಳು ಸಪಾರಿ ವಾಹನದ ಜತೆ ಸಾಗಿ ರಾಯಲ್ ಬೆಂಗಾಲ್ ಹುಲಿಗಳಿರುವ ಆವರಣ ಪ್ರವೇಶಿಸಿದ್ದವು. ತಮ್ಮ ಆವರಣ್ಕೆ ಬೇರೆ ಹುಲಿಗಳು ಪ್ರವೇಶಿಸಿದ್ದನ್ನು ಕಂಡು ರಾಯಲ್ ಹುಲಿಗಳು ಬಿಳಿ ಹುಲಿಗಳ ಮೇಲೆ ದಾಳಿ ಮಾಡಿದ್ದವು.
ಬಿಳಿ ಹುಲಿಗಳನ್ನು ಅದರದೇ ಸ್ಥಾನಕ್ಕೆ ಸೇರಿಸಲು ಸಿಬ್ಬಂದಿ ಹರಸಾಹಸ ಪಡೆಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಎಲ್ಲ ಸಫಾರಿಗಳಲ್ಲಿ ಹೊಸ ಗೇಟ್ ಗಳನ್ನು ಅಳವಡಿಸಲಾಗುತ್ತದೆ. ಆಗಮನದ ಗೇಟ್ ಮುಚ್ಚಿದ್ದಲ್ಲಿ ಮಾತ್ರ ನಿರ್ಗಮನದ ಗೇಟ್ ತೆರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಪ್ರಾಣಿಗಳು ಸಫಾರಿ ವಾಹನದೊಂದಿಗೆ ಬೇರೆ ಆವರಣಕ್ಕೆ ನುಗ್ಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಳಿ ಹುಲಿ, ಬೆಂಗಾಲ್ ಟೈಗರ್, ಸಿಂಹ, ಕರಡಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಸಫಾರಿ ಇದೆ. ಹೊಸ ವ್ಯವಸ್ಥೆ ಪ್ರಾಯೋಗಿಕ ಪರೀಕ್ಷೆಯನ್ನು ಈಗಾಗಲೇ ನಡೆಸಲಾಗಿದೆ. ಜನವರಿ ಕೊನೆಯ ವಾರದಲ್ಲಿ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications