ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2 ವರ್ಷದ ಬಳಿಕ ಕಾಂಗ್ರೆಸ್‌ನಲ್ಲಿ ಹೊಸಬರಿಗೆ ಸಚಿವರಾಗುವ ಅವಕಾಶ?

|
Google Oneindia Kannada News

Recommended Video

ಪಕ್ಷದಲ್ಲಿ ಮಹತ್ವದ ಬದಲಾವಣೆ ಮಾಡಿದ ಕಾಂಗ್ರೆಸ್ | Oneindia Kannada

ಬೆಂಗಳೂರು, ಜೂನ್ 10: ಎರಡು ವರ್ಷದ ಬಳಿಕ ಕಾಂಗ್ರೆಸ್‌ನಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದೆ. ಜೆಡಿಎಸ್ ಕೂಡ ಹೀಗೆ ಮಾಡಲಿ ಎಂದು ಕಾಂಗ್ರೆಸ್ ಪ್ರಸ್ತಾಪವನ್ನು ಮುಂದಿಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಮೊದಲ ಎರಡು ವರ್ಷ ಅಂದರೆ ಇನ್ನೂ ಒಂದು ವರ್ಷ ಕಳೆ ಮೇಲೆ ಎಲ್ಲಾ ಸಚಿವರನ್ನೂ ಬದಲಾಯಿಸಿ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಪಕ್ಷದ ಹಿರಿಯ ನಾಯಕರುಗಳ ಮಧ್ಯೆ ಚರ್ಚೆ ನಡೆಯುತ್ತಿದೆ.

ಸೋನಿಯಾ ಹಾಗೂ ರಾಹುಲ್ ಭೇಟಿ ಮಾಡಲಿರುವ ದೊಡ್ಡಗೌಡರು ಸೋನಿಯಾ ಹಾಗೂ ರಾಹುಲ್ ಭೇಟಿ ಮಾಡಲಿರುವ ದೊಡ್ಡಗೌಡರು

ಕಾಂಗ್ರೆಸ್ ಪಕ್ಷ ತನ್ನಲ್ಲಿರುವ ಅತೃಪ್ತ ಶಾಸಕರನ್ನೂ ಸಮಾಧಾನಪಡಿಸುವ ಉದ್ದೇಶದಿಂದ ಇಂಥದ್ದೊಂದು ಪ್ರಸ್ತಾಪವನ್ನು ಮುಂದಿಟ್ಟಿದೆ , ಇದಕ್ಕೆ ಜೆಡಿಎಸ್ ಕೂಡ ಸಹಮತ ಸೂಚಿಸಿದೆ. ಎರಡು ವರ್ಷ ಕಳೆದ ಬಳಿಕೆ ಎಲ್ಲಾ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಏನನ್ನೂ ಹೇಳಿಲ್ಲ ಎನ್ನಲಾಗಿದೆ.

All congress ministers will change after two years

ಸದ್ಯ ಅಸಮಾಧಾನ ತಲೆದೋರಿರುವ ಕಾಂಗ್ರೆಸ್ ಪಕ್ಷದಲ್ಲಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರ ಅತೃಪ್ತಿ ಕಡಿಮೆಗೊಳಿಸಲು ಪಕ್ಷ ಏನು ಬೇಕಾದರೂ ಮಾಡಲು ಸಿದ್ಧವಿದ್ದಂತಿದೆ. ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವು ಬದ್ಧ , ನಮ್ಮ ಪಕ್ಷದಲ್ಲಿ ಯಾವ ಸಚಿವರನ್ನು ಕೈಬಿಡಬೇಕು ಎನ್ನುವುದು ನಮಗೆ ಬಿಟ್ಟ ವಿಚಾರ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

English summary
After the completion of two years of coalition government all present congress ministers loose their chair and new will come.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X