Breaking: ರಾಜ್ಯದ್ಯಾಂತ ಪಿಎಫ್ಐ ಮೇಲೆ ಪೊಲೀಸರ ದಾಳಿ- ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯಾದ್ಯಂತ ಬೆಳಗಿನ ಜಾವದಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರ ನಿವಾಸದ ಮೇಲೆ ಮಾಡಿದ ರಾಜ್ಯ ಪೊಲೀಸರು 80ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಮುಚ್ಚಳಿಕೆಯನ್ನು ಬರೆಸಿಕೊಂಡಿದ್ದಾರೆ. ಈ ಕುರಿತು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆದಿದ್ದ ದಾಳಿಯಲ್ಲಿ 80ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿತ್ತು. ಇಂದು ಬೆಳಗ್ಗೆ 3 ಗಂಟೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿಯನ್ನು ನಡೆಸಲಾಗಿತ್ತು. ಕೆಲದಿನಗಳ ಹಿಂದೆಯಷ್ಟೇ ಎನ್ಐಎ ಮತ್ತು ಇಡಿ ಏಕಕಾಲದಲ್ಲಿ ದೇಶಾದ್ಯಂತ ಪಿಎಫ್ಐ ಸಂಘಟನೆಯ ಕಚೇರಿ ಮತ್ತು ನಿವಾಸದ ಮೇಲೆ ದಾಳಿಯನ್ನು ನಡೆಸಿತ್ತು. ಈ ವೇಳೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು.
ಎನ್ಐಎ ದಾಳಿಯ ವೇಳೆಯಲ್ಲಿ ಸಕ್ರಿಯವಾಗಿ ಕೆಲವು ಕಾರ್ಯಕರ್ತ ಪ್ರತಿಭಟನೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಪಿಎಫ್ಐ ಜೊತೆ ನಿಕಟ ಸಂಪರ್ಕದಲ್ಲಿದ್ದ ಕೆಲವರನ್ನು ರಾಜ್ಯ ಪೊಲೀಸರು ಗುರುತಿಸಿದ್ದರು. ಅವರನ್ನೇ ಟಾರ್ಗೇಟ್ ಮಾಡಿಕೊಂಡ ರಾಜ್ಯಪೊಲೀಸರು ರಾಜ್ಯಾದ್ಯಂತ ಏಕಕಾಲದಲ್ಲಿ ದಾಳಿಯನ್ನು ನಡೆಸಿ 80ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಎಡಿಜಿಪಿ
ಅಲೋಕ್
ಕುಮಾರ್
ಹೇಳಿದ್ದೇನು?
"ಕಳೆದ
ವಾರ
ಪಿಎಫ್ಐ
ಮುಖಂಡರ
ಮೇಲೆ
ಎನ್ಐಎ
ದಾಳಿ
ನಡೆಸಿತ್ತು.
ಇಂದು
ಬೆಳಗ್ಗೆ
3
ಗಂಟೆಯಿಂದ
ರಾಜ್ಯದ
ಎಲ್ಲಾ
ಜಿಲ್ಲೆಗಳಲ್ಲಿ
ಏಕಕಾಲದಲ್ಲಿ
ದಾಳಿ
ಮಾಡಲಾಗಿದೆ.
ಸುಮಾರು
80
ಜನರನ್ನು
ವಶಕ್ಕೆ
ಪಡೆದುಕೊಳ್ಳಲಾಗಿದೆ.
ವಶಕ್ಕೆ
ಪಡೆದುಕೊಂಡ
ಆರೋಪಿಗಳನ್ನು
ಮುಂಜಾಗ್ರತ
ಕ್ರಮವಾಗಿ
ಆಯಾ
ತಾಲೂಕು
ಮ್ಯಾಜಿಸ್ಟ್ರೇಟ್
ಮುಂದೆ
ಹಾಜರುಪಡಿಸ್ತೇವೆ.
ಕಾನೂನು
ಸುವ್ಯವಸ್ಥೆ
ಧಕ್ಕೆ,
ಕೋಮುಸೌಹಾರ್ಧಕ್ಕೆ
ಹಾನಿ
ಹಿನ್ನೆಲೆ
ಮುಂಜಾಗ್ರತ
ಕ್ರಮವಾಗಿ
ಈ
ದಾಳಿ
ನಡೆಸಲಾಗಿದೆ.
ವಶಕ್ಕೆ
ಪಡೆದುಕೊಂಡ
ಎಲ್ಲಾ
ಆರೋಪಿಗಳನ್ನು
ನ್ಯಾಯಾಲಯಕ್ಕೆ
ಹಾಜರುಪಡಿಸಿ
ಪೊಲೀಸ್
ಕಸ್ಟಡಿಗೆ
ಪಡೆಯಲಾಗುವುದು.
ಮುಂಜಾಗ್ರತವಾಗಿ
ಆರೋಪಿಗಳನ್ನು
ವಶಕ್ಕೆ
ಪಡೆಯಲಾಗಿದೆ.
ಸೆಕ್ಷನ್
107
ರಡಿ
ಮುಚ್ಚಳಿಕೆ
ಬರೆಸಲಾಗುವುದು.
ಅಹಿತಕರ
ಘಟನೆಯಲ್ಲಿ
ಭಾಗಿಯಾಗಕೂಡದು,
ಶಾಂತಿ
ಸುವ್ಯವಸ್ಥೆ
ಕಾಪಾಡಬೇಕೆಂದು
ಬಾಂಡ್ನಲ್ಲಿ
ಬರೆಸಲಾಗುವುದು.
80
ಮಂದಿಯಲ್ಲಿ
ಎಲ್ಲರೂ
ಪಿಎಫ್ಐ
ಹಾಗೂ
ಎಸ್ಡಿಪಿಐಯಲ್ಲಿ
ಗುರುತಿಸಿಕೊಂಡಿದ್ದರು"
ಎಂದು
ಕಾನೂನು
ಸುವ್ಯವಸ್ಥೆಯ
ಎಡಿಜಿಪಿ
ಅಲೋಕ್
ಕುಮಾರ್
ತಿಳಿಸಿದ್ದಾರೆ.