ಮಂಗಳೂರು ಬಳಿಕ, ಬೆಂಗಳೂರಿನ ವಿಮಾನ ನಿಲ್ದಾಣದ ಮೇಲೆ ಅದಾನಿ ಕಣ್ಣು!
ಬೆಂಗಳೂರು, ನ. 14: ಮಂಗಳೂರು, ಅಹಮದಾಬಾದ್, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗ ನಂತರ ಈಗ ಅದಾನಿ ಗ್ರೂಪ್ ಕಣ್ಣು ಬೆಂಗಳೂರು ವಿಮಾನ ನಿಲ್ದಾಣದ ಮೇಲೂ ಬಿದ್ದಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉಸ್ತುವಾರಿ, ಕಾರ್ಯ ನಿರ್ವಹಣೆ ಮಾಡುವ ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ನಲ್ಲಿ (ಬಿಐಎಎಲ್) ಪಾಲನ್ನು ತೆಗೆದುಕೊಳ್ಳುವ ಬಗ್ಗೆ ಅದಾನಿ ಗ್ರೂಪ್ ಚಿಂತಿಸುತ್ತಿದೆ ಎಂದು ಈ ಬಗ್ಗೆ ತಿಳಿದಿರುವ ಉನ್ನತ ಮೂಲಗಳು ಮಾಹಿತಿ ನೀಡಿವೆ.
''ಅದಾನಿ ಗ್ರೂಪ್ ಕೆಲವು ಸಮಯದಿಂದ ವಿಮಾನ ನಿಲ್ದಾಣದಲ್ಲಿ ಪಾಲನ್ನು ಖರೀದಿಸಲು ಹಲವು ವಿಧಾನಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಫೇರ್ಫ್ಯಾಕ್ಸ್ನೊಂದಿಗೆ ಚರ್ಚೆಗಳು ನಡೆದಿವೆ. ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ (ಎಎಐ) ಬಿಡ್ಡಿಂಗ್ನಲ್ಲಿ ಭಾಗವಹಿಸಲು ಸಂಸ್ಥೆ ಉತ್ಸಾಹ ಹೊಂದಿದೆ" ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಐಎಎಲ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದದ ಅಡಿಯಲ್ಲಿ ಹೊಂದಿದ್ದು, ನಿಲ್ದಾಣವನ್ನು ನಿರ್ವಹಿಸುತ್ತಿದೆ. ಈ ಒಪ್ಪಂದವನ್ನು ಇನ್ನೂ 30 ವರ್ಷಗಳವರೆಗೆ ನವೀಕರಿಸುವ ಆಯ್ಕೆಯನ್ನು ಹೊಂದಿದೆ.

ಪಾಲುದಾರಿಕೆಯಲ್ಲಿ ವಿಮಾನ ನಿಲ್ದಾಣ
1999ರಲ್ಲಿ, ವಿಮಾನ ನಿಲ್ದಾಣ ಯೋಜನೆಯನ್ನು 40:17:17 ಪಾಲುದಾರಿಕೆಯಲ್ಲಿ ಯೂನಿಕ್ ಜ್ಯೂರಿಚ್ ಮತ್ತು ಎಲ್ ಅಂಡ್ ಟಿ ಒಳಗೊಂಡಿರುವ ಸೀಮೆನ್ಸ್ ಪ್ರಾಜೆಕ್ಟ್ ನೇತೃತ್ವದ ಒಕ್ಕೂಟಕ್ಕೆ ನೀಡಲಾಗಿತ್ತು. ಎಎಐ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ವಿಮಾನ ನಿಲ್ದಾಣದಲ್ಲಿ ತಲಾ 13% ಪಾಲು ಹೊಂದಿತ್ತು.
ಬಿಐಎಎಲ್ನಲ್ಲಿ ಫೇರ್ಫ್ಯಾಕ್ಸ್ 54% ಪಾಲನ್ನು ಹೊಂದಿದೆ. ಬಿಐಎಎಲ್ನಲ್ಲಿನ ಇತರ ಷೇರುದಾರರಲ್ಲಿ ಸೀಮೆನ್ಸ್ ಪ್ರಾಜೆಕ್ಟ್ ವೆಂಚರ್ಸ್ 20%, AAI (13%), ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾರ್ಪೊರೇಷನ್ 13% ಪಾಲು ಹೊಂದಿದೆ.

ಮುಂದಿನ ವರ್ಷದೊಳಗೆ ಷೇರು ಮಾರಾಟ
''ಎಎಐ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಂದಿರುವ 13% ಪಾಲನ್ನು ತನ್ನ ಬಿಡ್ ಡಾಕ್ಯುಮೆಂಟ್ನೊಂದಿಗೆ ಬಹುತೇಕ ಸಿದ್ಧವಾಗಿದೆ. ಮುಂದಿನ ವರ್ಷದೊಳಗೆ ಷೇರು ಮಾರಾಟದ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂಬುದು ನಿರೀಕ್ಷೆ. ಎಲ್ಲಾ ವಿಷಯಗಳು ಸರಿಯಾದರೆ, ಪ್ರಾಧಿಕಾರವು ಮುಂದಿನ ಎರಡು ತಿಂಗಳಲ್ಲಿ ಬಿಡ್ಗಳನ್ನು ಆಹ್ವಾನಿಸಬಹುದು'' ಎಂದು ಅಧಿಕಾರಿ ತಿಳಿಸಿದ್ದಾರೆ.
ದೆಹಲಿ ಮತ್ತು ಮುಂಬೈಯಂತಹ ಮಾನ ನಿಲ್ದಾಣಗಳಿಂದ ಬರುವ ಆದಾಯವು ''ಎಎಐಗೆ ನಿರ್ಣಾಯಕ ಆದಾಯದ ಮಾರ್ಗವಾಗಿದೆ. ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳ ಆದಾಯ ಅತ್ಯಲ್ಪವಾಗಿದೆ. ಆದ್ದರಿಂದ ಈ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳಲ್ಲಿನ ತನ್ನ ಪಾಲನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ" ಎಂದು ತಿಳಿಸಿದ್ದಾರೆ.
ಎಎಐಗೆ ಬರುವ ಒಟ್ಟು ಆದಾಯದಲ್ಲಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾಲು 45.99% ಮತ್ತು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾಲು 38.7% ಆಗಿದೆ. ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಂದ ಬರುವ ಒಟ್ಟು ಆದಾಯದ 4% ಆಗಿದೆ.

ಅದಾನಿ ಕೈಯಲ್ಲಿ 8 ವಿಮಾನ ನಿಲ್ದಾಣಗಳು
ಅದಾನಿ ಗ್ರೂಪ್ ಈಗಾಗಲೇ ಭಾರತದಾದ್ಯಂತ ಎಂಟು ವಿಮಾನ ನಿಲ್ದಾಣಗಳನ್ನು ನಡೆಸುತ್ತಿದೆ. ದೇಶದ ಸುಮಾರು 20% ವಿಮಾನ ಪ್ರಯಾಣಿಕರನ್ನು ನಿರ್ವಹಿಸುತ್ತಿದೆ. ಅದಾನಿ ಗ್ರೂಪ್ ನಿಯಂತ್ರಿತ ನವಿ ಮುಂಬೈ ವಿಮಾನ ನಿಲ್ದಾಣವು 2024ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಫೆಬ್ರವರಿ 2019ರಲ್ಲಿ ಈ ಅದಾನಿ ಗ್ರೂಪ್, ಲಕ್ನೋ, ಮಂಗಳೂರು, ಅಹಮದಾಬಾದ್, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ಸೇರಿದಂತೆ ಆರು ಎಎಐ ವಿಮಾನ ನಿಲ್ದಾಣಗಳ ಬಿಡ್ಗಳನ್ನು ಗೆದ್ದಿದೆ. ಎಎಐನೊಂದಿಗಿನ ಒಪ್ಪಂದಗಳ ಪ್ರಕಾರ, ಪ್ರತಿ ಪ್ರಯಾಣಿಕರ ಶುಲ್ಕವನ್ನು ಸರ್ಕಾರಿ ಸ್ವಾಮ್ಯದ ಘಟಕಕ್ಕೆ ಪಾವತಿಸಬೇಕಾಗುತ್ತದೆ. ರಿಯಾಯಿತಿ ಒಪ್ಪಂದಗಳಲ್ಲಿ ಸೂಚಿಸಿದಂತೆ ಅದಾನಿ ಗುಂಪು 50 ವರ್ಷಗಳ ಅವಧಿಗೆ ವಿಮಾನ ನಿಲ್ದಾಣಗಳನ್ನು ನಿರ್ವಹಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು.

ಸರಕು ಸಾಗಾಣಿಕೆಯಲ್ಲೂ ಬೆಂಗಳೂರು ನಿಲ್ದಾಣ ಮುಂದು
ಎಎಐನ ಸೆಪ್ಟೆಂಬರ್ ಅಂಕಿಅಂಶಗಳ ಆಧಾರದ ಮೇಲೆ ಬಂದರುಗಳಿಂದ ಇಂಧನ ಸಮೂಹದಿಂದ ನಿರ್ವಹಿಸಲ್ಪಡುವ ವಿಮಾನ ನಿಲ್ದಾಣಗಳು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಸಂಚಾರದಲ್ಲಿ 22% ನಷ್ಟು ಪಾಲನ್ನು ಹೊಂದಿವೆ. ಇದರಲ್ಲಿ ಮುಂಬೈ 12% ಪಾಲು ಹೊಂದಿದ್ದು ಮುಂಚೂಣಿಯಲ್ಲಿದೆ.
ಸರಕುಗಳಿಗಾಗಿ ಅದಾನಿ ಗ್ರೂಪ್ ನಡೆಸುತ್ತಿರುವ ವಿಮಾನ ನಿಲ್ದಾಣಗಳು ಸೆಪ್ಟೆಂಬರ್ನಲ್ಲಿ ವಿಮಾನ ನಿಲ್ದಾಣಗಳಾದ್ಯಂತ 29.4% ಸರಕು ಸಾಗಣೆಯನ್ನು ನಿರ್ವಹಿಸಿವೆ. ಇತ್ತ, ಬೆಂಗಳೂರು ವಿಮಾನ ನಿಲ್ದಾಣವು ದೆಹಲಿ ಮತ್ತು ಮುಂಬೈ ನಂತರ 13% ಪಾಲನ್ನು ಹೊಂದಿರುವ ಮೂರನೇ ಅತಿದೊಡ್ಡ ಸರಕು ನಿರ್ವಾಹಕವಾಗಿದೆ.
-
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications