ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿಯವರೆಗೆ ಓಡಲಿದೆ ನಮ್ಮ ಮೆಟ್ರೋ
ನಿನ್ನೆ, ಮೆಟ್ರೋ ರೈಲು ಭದ್ರತಾ ಆಯುಕ್ತ ಕೆ.ಎ.ಮನೋಹರನ್ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ 12 ಕಿ.ಮೀ. ಉದ್ದ ಮೆಟ್ರೋ ಗ್ರೀನ್ ಲೈನ್ ಅಂತಿಮ ಕಾಮಗಾರಿಯನ್ನು ಪರುಶೀಲಿಸಿದರು.
ಬೆಂಗಳೂರು, ಮೇ 25: ಸುದೀರ್ಘ ಆರು ವರ್ಷಗಳ ವಿಳಂಬದ ನಂತರ ನಮ್ಮ ಮೆಟ್ರೋ ಮೊದಲ ಹಂತ ಸಂಪೂರ್ಣ ಮುಕ್ತಾಯಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತೆರೆದುಕೊಳ್ಳಲಿದೆ.
ಮೆಟ್ರೊ ರೈಲು ಭದ್ರತಾ ಆಯುಕ್ತರ ಮೇಲ್ವಿಚಾರಣೆಯಷ್ಟೇ ಬಾಕಿಯಿದ್ದು, ಮೇಲ್ವಿಚಾರಣೆ ಮುಗಿಯುತ್ತಿದ್ದಂತೆಯೇ ಮೆಟ್ರೊ ರೈಲು ಟ್ರ್ಯಾಕಿಗೆ ಇಳಿಯುತ್ತದೆ ಎಂದು ಇತ್ತೀಚೆಗಷ್ಟೇ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಹೇಳಿತ್ತು. ಅದರಂತೆ ನಿನ್ನೆ (ಮೇ 24) ಮೆಟ್ರೋ ರೈಲು ಭದ್ರತಾ ಆಯುಕ್ತ ಕೆ.ಎ.ಮನೋಹರನ್ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ 12 ಕಿ.ಮೀ. ಉದ್ದ ಮೆಟ್ರೋ ಗ್ರೀನ್ ಲೈನ್ ಅಂತಿಮ ಕಾಮಗಾರಿಯನ್ನು ಪರುಶೀಲಿಸಿದರು.['ನಮ್ಮ ಮೆಟ್ರೋ' ಬಿಎಂಆರ್ ಸಿಎಲ್ ಉದ್ಯೋಗಕ್ಕೆ ಅರ್ಜಿ]
ಮೇಲ್ವಿಚಾರಣೆ ಮೂರ್ನಾಲ್ಕು ದಿನ ನಡೆಯಲಿದ್ದು, ತಿಂಗಳಾಂತ್ಯದ ಹೊತ್ತಿಗೆ ಮೆಟ್ರೋ ಅಧಿಕೃತ ಸಂಚಾರ ಆರಂಭವಾಗಲಿದೆ. ನಾಗಸಂದ್ರ-ಯಲಚೇನಹಳ್ಳಿ ಮಾರ್ಗದ 24.2 ಕಿ.ಮೀ. ಮಾರ್ಗದಲ್ಲಿ ಕಳೆದ ಐದು ತಿಂಗಳಿನಿಂದ ಪರೀಕ್ಷಾರ್ಥ ಸಂಚಾರ ಆರಂಭಗೊಂಡಿದ್ದು, ಈ ತಿಂಗಳಾಂತ್ಯಕ್ಕೆ ಅಧಿಕೃತ ಸಂಚಾರ ಆರಂಭವಾಗಲಿದೆ.[ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್: ಇನ್ನೂ ವಿಳಂಬ ಯಾಕೆ?]
ಮೆಟ್ರೋ ಅಂತಿಮ ಹಂತವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಉದ್ಘಾಟಿಸಲಿದ್ದು, ದಿನಾಂಕವಿನ್ನೂ ನಿಗದಿಯಾಗಿಲ್ಲ ಎಂದು ಬಿಎಂಆರ್ ಸಿಎಲ್ ಮೂಲಗಳು ಈ ಮೊದಲೇ ಹೇಳಿದ್ದವು.

ದುಪ್ಪಟ್ಟು ವೆಚ್ಚ!
2006 ರಲ್ಲಿ ನಮ್ಮ ಮೆಟ್ರೋ ಯೋಜನೆಯ ಪ್ರಸ್ತಾಪ ಮಾಡಿದಾಗ, ಈ ಯೋಜನೆಗೆ ಸುಮಾರು 6,395 ಕೋಟಿ ರೂ. ಕರ್ಚಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಈ ಯೋಜನೆಗಾಗಿ ಇದುವರೆಗೂ ಖರ್ಚಾದ ಒಟ್ಟು ಹಣ 14,200 ಕೋಟಿ ರೂ. ಅಂದರೆ ಎರಡು ಪಟ್ಟಿಗಿಂತ ಹೆಚ್ಚು![ನಮ್ಮ ಮೆಟ್ರೋ ಮೊದಲ ಹಂತ ಮೇ ಅಂತ್ಯಕ್ಕೆ ಸಂಪೂರ್ಣ]

ಎಷ್ಟು ಜನರಿಗೆ ಉಪಯೋಗ?
ಒಟ್ಟು 43 ಕಿ.ಮೀ. ನ ನಮ್ಮ ಮೆಟ್ರೋ ಮೊದಲ ಹಂತ ಈ ಮೂಲಕ ಪೂರ್ಣಗೊಳ್ಳಲಿದ್ದು, ದಿನಕ್ಕೆ ಅಂದಾಜು 3-5 ಲಕ್ಷ ಜನರು ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ![6 ಗ್ರೀನ್ ಲೈನ್ ಮೆಟ್ರೋ ಸ್ಟೇಶನ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ]

ಪರ್ಪಲ್ ಲೈನ್ ಯಾರಿಗೆ?
ಈಗಾಗಲೇ ಮೈಸೂರು ರಸ್ತೆಯಿಂದ -ಬೈಯಪ್ಪನಹಳ್ಳಿ ವರೆಗಿನ ಪರ್ಪಲ್ ಲೈನ್ ಮೆಟ್ರೋ ಉಪಯೋಗ ಪಡೆಯುತ್ತಿರುವ ಪ್ರಯಾಣಿಕರಿಗಿಂತ ಮೂರುಪಟ್ಟು ಹೆಚ್ಚು ಜನ ಗ್ರೀನ್ ಲೈನ್ ಮೆಟ್ರೋ ಉಪಯೋಗ ಪಡೆಯಬಹುದೆಂದು ಅಂದಾಜಿಸಲಾಗಿದೆ.

ವಿಳಂಬವಾಗಿದ್ದೇಕೆ?
ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಆರು ವರ್ಷದ ಮೊದಲೇ, ಅಂದರೆ 2011 ರಲ್ಲೇ ಮೆಟ್ರೋ ಮೊದಲ ಹಂತ ಪೂರ್ಣಗೊಳ್ಳಬೇಕಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಾದ ವಿಳಂಬ, ಕಾಮಗಾರಿಯಲ್ಲಿ ವಿಳಂಬ ನೀತಿ ಇತ್ಯಾದಿಗಳಿಂದಾಗಿ ನಮ್ಮ ಮೆಟ್ರೋ, ಸಾರ್ವಜನಿಕರಿಗೆ ತಲುಪಲು ವಿಳಂಬವಾಗಿದೆ.

ಬೆಂಗಳೂರಿಗರು ನಿರಾಳ
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು, ನಾಲ್ಕು ಕಿ.ಮೀ.ಹಾದಿ ಕ್ರಮಿಸುವುದಕ್ಕೂ ಅರ್ಧ ಗಂಟೆ ರಸ್ತೆಯಲ್ಲಿ ಪರದಾಡಬೇಕಾದ ಪರಿಸ್ಥಿತಿಯನ್ನು ನಮ್ಮ ಮೆಟ್ರೋ ಇಲ್ಲವಾಗಿಸಿದೆ. ಹತ್ತಾರು ಕಿ.ಮೀ.ದೂರವನ್ನೂ 5-10 ನಿಮಿಷದಲ್ಲಿ ತಲುಪಿಸಬಲ್ಲ ನಮ್ಮ ಮೆಟ್ರೋ ಬೆಂಗಳೂರಿಗರಿಗೆ ನಿಜಕ್ಕೂ ವರದಾನವಾಗಲಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್












Click it and Unblock the Notifications