ಬೆಂಗಳೂರಿನ ಮತದಾರರಿಂದ ಏನು ನಿರೀಕ್ಷಿಸಬಹುದು!
ಬೆಂಗಳೂರು, ಏಪ್ರಿಲ್ 13: ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಈ ಬಾರಿಯಾದರೂ ಉತ್ತಮ ಶೇಕಡಾವಾರು ಮತದಾನವಾಗುವ ನಿರೀಕ್ಷೆಯಿದೆ. 224 ಕ್ಷೇತ್ರಗಳಿಗೆ ಮೇ 12ರಂದು ಮತದಾನ ನಡೆಯಲಿದೆ. ಬೆಂಗಳೂರಿನ ಮತದಾರರು ಇಲ್ಲಿ ತನಕ ಹೇಗೆ ಮತ ಹಾಕಿದ್ದಾರೆ, ಈ ಬಾರಿ ಯಾವ ರೀತಿ ನಿರೀಕ್ಷೆ ಇದೆ ಎಂಬುದರ ಬಗ್ಗೆ ಒಂದು ಚಿತ್ರಣ ಇಲ್ಲಿದೆ...
80ರ ದಶಕದಲ್ಲಿ ಕಾಂಗ್ರೆಸ್ ಹಿಡಿತದಲ್ಲಿದ್ದ ಬೆಂಗಳೂರು ನಂತರ ಜನತಾ ಪರಿವಾರದ ಹಿಡಿತಕ್ಕೆ ಜಾರಿತ್ತು. ಆದರೆ, ಜನತಾ ಪಾರ್ಟಿ ವಿದಳನವಾದ ಬಳಿಕ ಬಿಜೆಪಿ ತಕ್ಕಮಟ್ಟಿನ ಯಶಸ್ಸು ಸಾಧಿಸಿತು. 2013ರಲ್ಲಿ ಬಿಕ್ಕಟ್ಟಿನ ನಡುವೆಯೂ 12 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಒಟ್ಟಾರೆ, ರಾಜ್ಯದಲ್ಲಿ ಗೆದ್ದ ಸ್ಥಾನಗಳ ಪೈಕಿ 12 ಸ್ಥಾನಗಳಿಸಿದ್ದು,ಶೇ 30ರಷ್ಟು ಸ್ಥಾನವನ್ನು ಬೆಂಗಳೂರೊಂದರಲ್ಲೆ ಪಡೆದುಕೊಂಡಿತ್ತು. ಕಾಂಗ್ರೆಸ್ 2013ರಲ್ಲಿ 13 ಸ್ಥಾನ ಗಳಿಸಿತ್ತು.
2008ರಲ್ಲಿ ಬಿಜೆಪಿ 16 ಸ್ಥಾನಗಳಿಸಿದ್ದರೆ, ಕಾಂಗ್ರೆಸ್ 11 ಸ್ಥಾನಗಳಿಸಿತ್ತು. ಹೀಗಾಗಿ, ಈ ಬಾರಿ ಹೆಚ್ಚಿನ ಸ್ಥಾನ ಗಳಿಸುವ ಒತ್ತಡವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಎದುರಿಸುತ್ತಿದೆ.

ಬೆಂಗಳೂರಿನ ಪ್ರಮುಖ ಸಮಸ್ಯೆಗಳು
* ಮಹಿಳೆಯರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ
* ವಲಸಿಗರು ಹಾಗೂ ಜನಸಂಖ್ಯಾ ಸ್ಫೋಟ
* ಮಾಲಿನ್ಯ ಹಾಗೂ ಕೆರೆಗಳ ಒತ್ತುವರಿ
* ಕೊಳಗೇರಿ ನಿರ್ವಹಣೆ
* ಒಳಚರಂಡಿ ಅವ್ಯವಸ್ಥೆ ಹಾಗೂ ನಾಗರಿಕ ಸೌಲಭ್ಯಗಳ ಕೊರತೆ
* ಹಸಿರು ಹೊದಿಕೆಯ ಕುಸಿತ
* ನಗರದೆಲ್ಲೆಡೆ ಟ್ರಾಫಿಕ್ ಸಮಸ್ಯೆ
* ಅಸಮರ್ಪಕ ಸಾರಿಗೆ ವ್ಯವಸ್ಥೆ

2008-2013 ಅಸೆಂಬ್ಲಿ ಫಲಿತಾಂಶ
2008 ವಿಧಾನಸಭಾ ಚುನಾವಣೆ ಫಲಿತಾಂಶ : ಬೆಂಗಳೂರಿನ 28 ಕ್ಷೇತ್ರಗಳು
ಬಿಜೆಪಿ : 16
ಕಾಂಗ್ರೆಸ್ : 11
ಜೆಡಿಎಸ್ : 1
***
2013 ವಿಧಾನಸಭಾ ಚುನಾವಣೆ ಫಲಿತಾಂಶ : ಬೆಂಗಳೂರಿನ 28 ಕ್ಷೇತ್ರಗಳು
ಕಾಂಗ್ರೆಸ್ : 13
ಬಿಜೆಪಿ : 12
ಜೆಡಿಎಸ್ : 3

ಲೋಕಸಭೆ 2009-2014ರ ಫಲಿತಾಂಶ
2009 ಲೋಕಸಭೆ ಚುನಾವಣೆ ಫಲಿತಾಂಶ: (ಬೆಂಗಳೂರಿನ 3 ಕ್ಷೇತ್ರಗಳು)
ಬಿಜೆಪಿ : 3
ಕಾಂಗ್ರೆಸ್ : 0
ಜೆಡಿಎಸ್ : 0
****
2014ರ ಫಲಿತಾಂಶ: (3 ಕ್ಷೇತ್ರಗಳು)
ಬಿಜೆಪಿ : 3
ಕಾಂಗ್ರೆಸ್ : 0
ಜೆಡಿಎಸ್ : 0

ಪ್ರಮುಖ ಕ್ಷೇತ್ರಗಳು : ಹಾಲಿ ಶಾಸಕರು
ಬಿಟಿಎಂ ಲೇ ಔಟ್ : ರಾಮಲಿಂಗಾರೆಡ್ಡಿ
ಶಿವಾಜಿನಗರ : ರೋಷನ್ ಬೇಗ್
ಬ್ಯಾಟರಾಯನಪುರ: ಕೃಷ್ಣಭೈರೇಗೌಡ
ಶಾಂತಿನಗರ: ಎನ್ಎ ಹ್ಯಾರೀಸ್
ಮಲ್ಲೇಶ್ವರ: ಎಂಆರ್ ಸೀತಾರಾಮ್
ಚಾಮರಾಜಪೇಟೆ: ಜಮೀರ್ ಅಹ್ಮದ್ ಖಾನ್
ವಿಜಯನಗರ : ಎಂ ಕೃಷ್ಣಪ್ಪ
ಸರ್ವಜ್ಞ ನಗರ : ಕೆಜೆ ಜಾರ್ಜ್
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications