ಮಳೆ ಬಂತು, ಕೊಳಚೆ ನೀರಿನ ಕೆರೆಯಾದ ಬೆಂಗಳೂರು
ಬೆಂಗಳೂರು, ಜುಲೈ, 29: ಬೆಂಗಳೂರಿಗೆ ಬಿಡದ ಮಳೆಯ ಕಾಟ, ಗುರುವಾರ ರಾತ್ರಿಯಿಂದ ಆರಂಭವಾದ ಮಳೆ ಶುಕ್ರವಾರವೂ ಮುಂದುವರಿದಿದೆ. ರಾತ್ರಿ ಜೋರಾಗಿದ್ದ ಮಳೆ ಬೆಳಗ್ಗೆ ಜಿಟಿ ಜಿಟಿ ಎಂದು ರಾಗ ಎಳೆಯುತ್ತ ಸಾಗಿದೆ.
ಮಳೆ ಪರಿಣಾಮವನ್ನು ಹೊಸದಾಗಿ ಹೇಳಬೇಕಿಲ್ಲ. ಸಿಲ್ಕ್ ಬೋರ್ಡ್, ನಾಯಂಡಹಳ್ಳಿಯಲ್ಲಿ ನೀರು ತುಂಬಿಕೊಂಡಿದೆ. ಮೆಜೆಸ್ಟಿಕ್, ಮಾರುಕಟ್ಟೆ, ಜಯನಗರ, ಬಸವನಗುಡಿ, ಕೆ ಆರ್ ಪುರ ಸೇರಿದಂತೆ ಎಲ್ಲ ಕಡೆ ಮಳೆಯಾಗುತ್ತಿದೆ.[ಬೆಂಗಳೂರಿನ ಜನಜೀವನವನ್ನು 'ಬಂದ್' ಮಾಡಿದ ಜಿಟಿಜಿಟಿ ಮಳೆ]
ಜೆ.ಪಿ.ನಗರದ ರಾಗಿಗುಡ್ಡ, ಹಳೆ ಏರ್ಪೋರ್ಟ್ ರಸ್ತೆಯ ಕಮಾಂಡೋ ಆಸ್ಪತ್ರೆ, ಬಿಟಿಎಂ ಬಡಾವಣೆಯಲ್ಲಿ ಮರಗಳು ಧರೆಗುರುಳಿವೆ. ಕೋಡಿಚಿಕ್ಕನಹಳ್ಳಿಯಲ್ಲಿ ರಸ್ತೆ ಮೇಲೆ 3 ರಿಂದ 4 ಅಡಿ ನೀರು ನಿಂತಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಬೆಂಗಳೂರಲ್ಲಿ ಮಳೆ ಆರ್ಭಟ ಹೇಗಿದೆ,, ಚಿತ್ರಗಳಲ್ಲಿ ನೋಡಿ..

ಹೊಸೂರು ರಸ್ತೆ
ಬೆಂಗಳೂರಿನ ಪ್ರಸಿದ್ಧ ಹೊಸೂರು ರಸ್ತೆಯೇ ಸರೋವರವಾಗಿದೆ. ಮಳೆ ಮತ್ತು ಪರಿಣಾಮ ರಸ್ತೆಗೆ ನುಗ್ಗಿದ ನೀರು ಜನರಿಗೆ ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಕಳೆಯುವ ಅವಕಾಶ ಮಾಡಿಕೊಟ್ಟಿದೆ.

ರಸ್ತೆ ಎಲ್ಲಿದೆ?
ವೀರಸಂದ್ರದ ಬಳಿ ರಸ್ತೆ ಮೇಲೆ ನೀರು ನಿಂತಿದ್ದು ನೀರು ತೆಗೆದು ಸಂಚಾರಕ್ಕೆ ಅವಕಾಶ ಮಾಡಿಕೊಡಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು.

ಟ್ರಾಫಿಕ್ ಜಾಮ್
ಮಳೆ ಪರಿಣಾಮ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡವರು ಅತ್ತ ಕಚೇರಿಗೆ ತೆರಳಲಾರದೇ ಟ್ರಾಫಿಕ್ ಗೆ ಹಿಡಿಶಾಪ ಹಾಕಿದರು.

ಸಿಬ್ಬಂದಿಗೆ ನಮೋ
ವಾಹನ ಸಂಚಾರ ಸುಗಮಗೊಳಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಿಸುತ್ತಿರುವುದು.

ರಸ್ತೆ ಮೇಲೆ ತುಂಬಿ ಹರಿದ ನೀರು
ವೀರಸಂದ್ರದ ಬಳಿಯ ರಸ್ತೆಯಲ್ಲಿ ನೀರು ತುಂಬಿದ್ದು ನಾಗರಿಕರು ಪರ್ಯಾಯ ಮಾರ್ಗ ಬಳಕೆ ಮಾಡಬೇಕು ಎಂದು ಬೆಂಗಳೂರು ಸಿಟಿ ಪೊಲೀಸರು ಮನವಿ ಮಾಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ರಸ್ತೆ
ಎಲೆಕ್ಟ್ರಾನಿಕ್ ಸಿಟಿಗೆ ತರಳುವ ರಸ್ತೆಯ ಸದ್ಯದ ಸ್ಥಿತಿ.

ಮೊಣಕಾಲುದ್ದ ನೀರು
ರಸ್ತೆಯಲ್ಲಿ ಎರಡು ಅಡಿಗಿಂತಲೂ ಹೆಚ್ಚಿನ ನೀರು ನಿಂತಿದ್ದು ದ್ವಿಚಕ್ರ ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ.

ಸಿಲ್ಕ್ ಬೋರ್ಡ್ ಪರಿಸ್ಥಿತಿ
ಸಿಲ್ಕ್ ಬೋರ್ಡ್ ಸುತ್ತಮುತ್ತಲ ಭಾಗದಲ್ಲಿ ನೀರು ತುಂಬಿಕೊಂಡಿದ್ದು ರಸ್ತೆ ಮಧ್ಯೆ ಸಿಕ್ಕಿಹಾಕಿಕೊಂಡವರು ಅಲ್ಲಿಯೇ ಇದ್ದಾರೆ.

ಬಿಟಿಎಂ ಲೇಔಟ
ಬಿಟಿಎಂ ಲೇಔಟ್ ಜಲಾವೃತವಾಗಿದ್ದು ಮನೆಗಳಿಗೂ ನೀರು ನುಗ್ಗಿದೆ.

ಅಶೋಕ ನಗರ
ಬೃಹತ್ ಗಾತ್ರದ ಮರವೊಂದು ಅಶೋಕನಗರದಲ್ಲಿ ಧರೆಗುರುಳಿದ್ದು ಸಿಬ್ಬಂದಿ ತೆರವು ಮಾಡಿದರು.

ಟ್ರಾಫಿಕ್ ಜಾಮ್ ಜಾಮ್
ಬೆಂಗಳೂರಿನ ಎಲ್ಲ ಕಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಪರ ಊರಿಗೆ ತೆರಳುವವರು ಸಂಕಷ್ಟ ಪಡಬೇಕಾಗಿದೆ.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Bengaluru Weather: ಬೆಂಗಳೂರಲ್ಲಿ ಬೇಸಿಗೆ ಆರಂಭದಲ್ಲೇ 40 ಡಿಗ್ರಿಯತ್ತ ತಾಪಮಾನ: ಉರಿ ಬಿಸಿಲು, ಸೆಕೆಯಿಂದ ಹೈರಾಣಾದ ಜನ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ











Click it and Unblock the Notifications