ಅಮ್ಮನಿಗೆ ಪ್ರೀತಿಯಿಂದ ಕಾಣಿಕೆ ಕೊಟ್ಟ ಗಾಯಕ ವಾಸು ದೀಕ್ಷಿತ್
'ನೀ ನನ್ನ ಕಣ್ಣಲೇ ಹರಸಿದೆ ನನ್ನ ಬಾನೆತ್ತರ ಬೆಳೆಸಿದೆ..' ಎಂದು ಆರಂಭಗೊಳ್ಳುವ ಸಾಲುಗಳುಳ್ಳ ವಿಶೇಷ ಗೀತೆ ವಿಶ್ವದ ಎಲ್ಲಾ ಅಮ್ಮಂದಿರಿಗೆ ಅರ್ಪಿತವಾಗಿದೆ. ಗಾಯಕ, ಸಂಗೀತಗಾರ ವಾಸು ದೀಕ್ಷಿತ್ ಅವರು ಸಂಯೋಜಿಸಿ ಹಾಡಿರುವ ಈ ಗೀತೆ 'ವಿಶ್ವ ಅಮ್ಮಂದಿರ ದಿನ' ಕ್ಕಾಗಿ ನಿಮ್ಮ ಮುಂದಿದೆ.
ಪ್ರತಾಪ್ ಸಿ ಅವರ ಅರ್ಥಪೂರ್ಣ ಸಾಹಿತ್ಯಕ್ಕೆ ಸಂಯೋಜನೆ ಒದಗಿಸಿ ದನಿ ನೀಡಿರುವ ವಾಸು ಅವರು ಹಾಡಿನ ಚಿತ್ರೀಕರಣವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿದ್ದಾರೆ. [ವಿಡಿಯೋ : ವಿಶ್ವ ತಾಯಂದಿರ ದಿನಕ್ಕೆ ಒನ್ ಇಂಡಿಯಾದಿಂದ ಕಾಣಿಕೆ]
ಅಮ್ಮನನ್ನು ಕೂರಿಸಿಕೊಂಡು ಮಕ್ಕಳು ತಮ್ಮ ತಾಯಿಯ ಬಗ್ಗೆ ಕೈ ಸನ್ನೆಯಲ್ಲಿ ವಿವರಿಸುವ ರೀತಿ ಅನನ್ಯವಾಗಿದೆ. ಯಾವ ಭಾಷೆ, ಪದಕ್ಕೂ ನಿಲುಕದ ಸಂಬಂಧ, ಅನುಬಂಧವನ್ನು ಈ ರೀತಿ 4.10 ನಿಮಿಷಗಳ ವಿಡಿಯೋದಲ್ಲಿ ತೋರಿಸಲಾಗಿದೆ.

ನೀ ನನ್ನ ಕಣ್ಣಲೇ ಹರಸಿದೆ.. ನನ್ನ ಬಾನೆತ್ತರ ಬೆಳೆಸಿದೆ
ಕಲ್ಪನೆಗಳ ಆಚೆಗೆ ಸೆಳೆದೆ, ಕಂಬನಿಗಳಿಗೆ ಕೊಡೆ ಹಿಡಿದು
ಅಂದು ನೀ.. ಕಂಡ ಕನಸು ನಾನಲ್ಲವೇ
ಅಮ್ಮ... ಅಮ್ಮ... ಅಮ್ಮ
ಮೊದಲ ನೋಡದ ಅರಿವೇ ಇಲ್ಲ
ಎಡವಿದಾಗ ನಡೆಸಿದೆ ಮೆಲ್ಲ
ತುಂಬು ಪ್ರೀತಿಯ ಚಿಲುಮೆಯ ಹರಿಸಿ
ನನ್ನ ಮುಖದಲ್ಲಿ ನಗುವನ್ನು ತರಿಸಿ
ಆಸೆಗಳಿಗೆ ನೀರೆರೆದು, ನೋವುಗಳ ತಡೆಹಿಡಿದು
ಸೋಲುಗಳಲ್ಲಿ ಜೊತೆ ನಿಂತು
ಗುರಿಯೆಡೆಗೆ ಕೈ ಹಿಡಿದು
ನೀ ಅಕ್ಕರೆಯ ಸಿಹಿ ಇನ್ನೆಲ್ಲಿದೆ
ಅಮ್ಮ....ಅಮ್ಮ... ಅಮ್ಮ...(ನೀ ನನ್ನ ಬಾಳ ಬೆಳಗಿದೆ...)

ಬೆಂಗಳೂರು ಮೂಲದ ಮ್ಯೂಸಿಕಲ್ ಬ್ಯಾಂಡ್ ಸ್ವರಾತ್ಮದ ಭಾಗವಾಗಿರುವ ವಾಸು ದೀಕ್ಷಿತ್ ಅವರು ಗಾಯಕ ಹಾಗೂ ಗಿಟಾರಿಸ್ಟ್ ಆಗಿ ಜನಪ್ರಿಯರಾಗಿದ್ದಾರೆ. [ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]
ಗಾಯಕ ರಘು ದೀಕ್ಷಿತ್ ಅವರ ಸೋದರ ವಾಸು ಅವರು ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮಕಾವ್ಯಂ ಕನ್ನಡ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications