ಜುಲೈ 1ರಿಂದ ಅಪಾರ್ಟ್ ಮೆಂಟ್ ಮೇಂಟೆನೆನ್ಸ್ ಶುಲ್ಕ ಹೆಚ್ಚಳ
ಸದ್ಯಕ್ಕೆ ಪ್ರತಿಯೊಂದು ಅಪಾರ್ಟ್ ಮೆಂಟ್ ನಿಂದ ವಸೂಲಿಯಾಗುತ್ತಿರುವ ನಿರ್ವಹಣಾ ಶುಲ್ಕದ ಮೇಲೆ ಶೇ. 15.55ರಷ್ಟು ತೆರಿಗೆ ಹಾಕಲಾಗುತ್ತಿದೆ. ಜುಲೈ 1ರಿಂದ ಜಿಎಸ್ ಟಿ ಜಾರಿಗೊಂಡರೆ, ನಿರ್ವಹಣಾ ಶುಲ್ಕದ ಮೇಲೆ ವಿಧಿಸಲಾಗುವ ತೆರಿಗೆ ಶೇ. 15.55ರಿಂದ
ಬೆಂಗಳೂರು, ಮೇ 27: ನೀವು ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದೀರಾ? ಹಾಗಿದ್ದರೆ ಕೇಳಿ. ಪ್ರತಿ ತಿಂಗಳು ನೀವು ನೀಡುವ ನಿರ್ವಹಣಾ ಶುಲ್ಕ ಜುಲೈ 1ರಿಂದ ಹೆಚ್ಚಳವಾಗುತ್ತದೆ.
ಹೇಗಂತೀರಾ? ಇದು ಜುಲೈ 1ರಿಂದ ರಾಷ್ಟ್ರಾದ್ಯಂತ ಜಾರಿಯಾಗಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಪರಿಣಾಮ. ಜಿಎಸ್ ಟಿ ಜಾರಿಗೊಂಡರೆ ನೀವು ಈಗ ಸದ್ಯಕ್ಕೆ ಪಾವತಿಸುತ್ತಿರುವ ನಿರ್ವಹಣಾ ಶುಲ್ಕಕ್ಕೆ ಹೆಚ್ಚುವರಿ ಹಣವನ್ನು ಪಾವತಿಸಬೇಕಿದೆ.[ಜಿಎಸ್ ಟಿ ಪರಿಣಾಮ: ಹೊಸ ಮನೆ ಕೊಳ್ಳೋರಿಗೆ ಕೊಂಚ ಹೆಚ್ಚು ಹೊರೆ!]

ಅದರ ಲೆಕ್ಕಾಚಾರ ಹೇಗೆ? ಇಲ್ಲಿದೆ ನೋಡಿ ಮಾಹಿತಿ. ಸದ್ಯಕ್ಕೆ ಪ್ರತಿಯೊಂದು ಅಪಾರ್ಟ್ ಮೆಂಟ್ ನಿಂದ ವಸೂಲಿಯಾಗುತ್ತಿರುವ ನಿರ್ವಹಣಾ ಶುಲ್ಕದ ಮೇಲೆ ಶೇ. 15.55ರಷ್ಟು ತೆರಿಗೆ ಹಾಕಲಾಗುತ್ತಿದೆ. ಇದರಲ್ಲಿ ಶೇ. 15ರಷ್ಟು ಸೇವಾ ತೆರಿಗೆ, ಶೇ. 0.5ರಷ್ಟು ಸ್ವಚ್ಛ ಭಾರತ ತೆರಿಗೆ ಹಾಗೂ ಶೇ. 0.05ರಷ್ಟು ಕೃಷಿಯೇತರ ತೆರಿಗೆಯಾಗಿರುತ್ತಿದೆ.[ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?]
ಆದರೆ, ಜುಲೈ 1ರಿಂದ ಜಿಎಸ್ ಟಿ ಜಾರಿಗೊಂಡರೆ, ನಿರ್ವಹಣಾ ಶುಲ್ಕದ ಮೇಲೆ ವಿಧಿಸಲಾಗುವ ತೆರಿಗೆ ಶೇ. 15.55ರಿಂದ ಶೇ. 18ಕ್ಕೆ ಏರಲಿದೆ. ಅಂದರೆ, ಹಾಲಿ ತೆರಿಗೆಗಿಂತ ಶೇ. 2.5ರಷ್ಟು ಹೆಚ್ಚಾಗಲಿದೆ. ಹೀಗಾಗಿ, ಬಾಡಿಗೆದಾರ ಅಥವಾ ಫ್ಲಾಟ್ ನ ಮಾಲೀಕ ನೀಡುವ ನಿರ್ವಹಣಾ ವೆಚ್ಛವೂ ಏರಿಕೆಯಾಗಲಿದೆ.[ಮೇ 30ಕ್ಕೆ ಹೋಟೆಲ್ ಗಳು ಬಂದ್, ಊಟ-ತಿಂಡಿಗೆ ವ್ಯವಸ್ಥೆ ಮಾಡಿಕೊಳ್ರೀ...]
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications