ಹಂಪಿಯ ನಿಸರ್ಗ ಸೌಂದರ್ಯದ ಸೊಬಗನ್ನು ಕಣ್ತುಂಬಿಕೊಳ್ಳಿ
ಹಂಪಿಯ ವಾಸ್ತುಶಿಲ್ಪದಷ್ಟೇ ಇಲ್ಲಿನ ಪ್ರಕೃತಿ ಸೌಂದರ್ಯವೂ ಅಷ್ಟೇ ನಯನ ಮನೋಹರವಾಗಿದ್ದು, ‘ಹಂಪಿ ಹಾಳು ಕೊಂಪೆ’ ಎಂದು ಹಳಿಯುವ ಜನರಿಗೆ ಹಂಪಿಯ ಇನ್ನೊಂದು ಮುಖ ಪರಿಚಯವಾಗಲಿದೆ.ನೈಸರ್ಗಿಕ ಶಿಲ್ಪಕಲೆ ಎಂಥವರನ್ನೂ ಬೆರಗುಗೊಳಿಸುವಂತಿದೆ.
ಬಳ್ಳಾರಿ, ಜೂನ್ 28 : ವಿಜಯನಗರ ಅರಸರ ರಾಜಧಾನಿ ಹಂಪಿ ಎಂದಾಕ್ಷಣ ನೆನಪಾಗುವುದು ಇಲ್ಲಿನ ಶಿಲ್ಪಕಲೆ. ಅಲ್ಲದೆ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಹಂಪಿಯ ಬೀದಿಗಳು ಮುತ್ತು-ರತ್ನಗಳನ್ನು ಬೀದಿಯಲ್ಲಿಟ್ಟು ಮಾರಾಟ ಮಾಡುವ ಅಂತರರಾಷ್ಟ್ರೀಯ ಮಾರುಕಟ್ಟೆಯಾಗಿತ್ತು ಎಂಬ ಇತಿಹಾಸ.
ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಶಿಲ್ಪಕಲೆ ಶ್ರೀಮಂತಿಕೆಗೆ ಹೆಸರಾಗಿರುವ ಸ್ಮಾರಕಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಆದರೆ, ಹಂಪಿಯ ನಿಸರ್ಗಕ್ಕೂ ಒಂದು ಶಕ್ತಿ ಹಾಗೂ ಸೌಂದರ್ಯವಿದೆ ಎಂಬುದು ಇಲ್ಲಿಗೆ ಭೇಟಿ ನೀಡುವ ಬಹುತೇಕರಿಗೆ ತಿಳಿಯದ ವಿಷಯ.
Recommended Video

ಇಲ್ಲಿನ ಕಲ್ಲು-ಬಂಡೆಗಳು ಸೃಷ್ಟಿಸುತ್ತಿರುವ ದೃಶ್ಯ-ಕಾವ್ಯ ಬಹುತೇಕರ ಕಣ್ಣಿಗೆ ಬಿದ್ದಂತಿಲ್ಲ. ಆಪ್ ಬೀಟ್ ಟೂರಿಸಂ ಹೆಸರಲ್ಲಿ ಬೆಳೆಯುತ್ತಿರುವ ಈ ಸೌಂದರ್ಯವನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ ನೋಡಿ...

ನಯನ ಮನೋಹರ
ಹೌದು, ವಾಸ್ತುಶಿಲ್ಪದಷ್ಟೇ ಇಲ್ಲಿನ ಪ್ರಕೃತಿ ಸೌಂದರ್ಯವೂ ಅಷ್ಟೇ ನಯನ ಮನೋಹರವಾಗಿದ್ದು, 'ಹಂಪಿ ಹಾಳು ಕೊಂಪೆ' ಎಂದು ಹಳಿಯುವ ಜನರಿಗೆ ಹಂಪಿಯ ಇನ್ನೊಂದು ಮುಖ ಪರಿಚಯವಾಗಲಿದೆ. ಹಂಪಿಯಲ್ಲಿ ವಿಜಯನಗರದ ಅರಸರಿಂದ ನಿರ್ಮಾಣವಾದ ಸುಂದರ ಕೆತ್ತನೆಯ ಸ್ಮಾರಕಗಳು ಒಂದೆಡೆಯಾದರೆ, ತುಂಗಭದ್ರೆಯ ಒಡಲಿನಲ್ಲಿ ನೈಸರ್ಗಿಕ ಕಲ್ಲಿನ ಸೌಂದರ್ಯ ಅದರ ಎರಡು ಪಟ್ಟಿದೆ. ಪ್ರತಿವರ್ಷ ಬೇಸಿಗೆಯಲ್ಲಿ ತೆರೆದುಕೊಳ್ಳುವ ನೈಸರ್ಗಿಕ ಕಲ್ಲಿನ ಚಿತ್ತಾರ ಹಂಪಿಯ 'ಆಪ್ ಬೀಟ್ ಟೂರಿಸಂ'ನ ಟ್ರೆಂಡ್ ಅನ್ನು ಹೆಚ್ಚಿಸುತ್ತಿದ್ದು, ಸ್ಥಳೀಯರಿಗಿಂತ ವಿದೇಶಿ ಪ್ರವಾಸಿಗರೇ ಈ ಸೌಂದರ್ಯಕ್ಕೆ ಹೆಚ್ಚು ಸಾಕ್ಷಿಯಾಗುತ್ತಿದ್ದಾರೆ.

ಬಳುಕುವ ಬಳ್ಳಿಯಂತೆ ಬರುವ ತುಂಗಭದ್ರೆ
ಬಳುಕುವ ಬಳ್ಳಿಯಂತೆ ಬರುವ ತುಂಗಭದ್ರೆಯ ವೇಗಕ್ಕೆ ವಿವಿಧ ವಿನ್ಯಾಸಗಳೊಂದಿಗೆ ರೂಪುಗೊಂಡಿರುವ ನದಿಯೊಳಗಿನ ನೈಸರ್ಗಿಕ ಶಿಲ್ಪಕಲೆ ಎಂಥವರನ್ನೂ ಬೆರಗುಗೊಳಿಸುವಂತಿದೆ. ಝುಳು ಝುಳು ಎಂದು ಶಬ್ದ ಮಾಡುತ್ತಾ ಹರಿಯುವ ನದಿಯ ನಿನಾದದೊಂದಿಗೆ ಶಿಲ್ಪಿಯ ಹೊಡೆತಕ್ಕೆ ಬಾಗಿದಂತೆ ಕಾಣುವ ಇಲ್ಲಿನ ಕಲ್ಲು-ಬಂಡೆಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲುವುದಿಲ್ಲ. ಛಾಯಾಚಿತ್ರ ಗ್ರಾಹಕರ ಸ್ವರ್ಗವೇ ಆಗಿರುವ ಈ ಸ್ಥಳದ ಬಗ್ಗೆ ಹಂಪಿಗೆ ಭೇಟಿ ನೀಡುವ ಶೇ 80ರಷ್ಟು ಪ್ರವಾಸಿಗರಿಗೆ ಮಾಹಿತಿ ಇಲ್ಲ.
v

ಕೈ ಬೀಸಿ ಕರೆಯುವ ವಾಟರ್ ಫಾಲ್ಸ್
ಹಂಪಿಗೆ ಭೇಟಿ ನೀಡುವ ಬಹುತೇಕ ವಿದೇಶಿ ಪ್ರವಾಸಿಗರು ಇಲ್ಲಿನ ವಾಸ್ತುಶಿಲ್ಪ ಕಲೆಯಷ್ಟೇ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಬೇಸಿಗೆಯಲ್ಲಿ ನಿರ್ಮಾಣವಾಗುವ ಪ್ರಾಕೃತಿಕ ಜಲಪಾತಗಳು ಎಂತವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಬಿಸಿಲಿನ ಬೆಗೆಯಲ್ಲಿ ಬೆಂದ ಜನರಿಗೆ ಹಿತವನ್ನು ನೀಡುವ ಈ ಸಣ್ಣ-ಸಣ್ಣ ಜಲಪಾತಗಳು ಮನಸ್ಸು ಹಾಗೂ ದೇಹಕ್ಕೆ ಇಂಪು ನೀಡುವುದರಿಂದಲೇ ಇತ್ತೀಚಿಗೆ ಈ ರೀತಿಯ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದ್ದು, ಹಂಪಿಯ ಈ ಪರಿಸರದಲ್ಲಿ ಪ್ರಾಕೃತಿಕ ಸೌಂದರ್ಯ ಹೊರ ಜಗತ್ತಿಗೆ ತಿಳಿಯುತ್ತಿದೆ.

ಹಲವು ಪ್ರಕೃತಿ ಸೌಂದರ್ಯದ ತಾಣಗಳು
ಇದಿಷ್ಟೇ ಅಲ್ಲ, ಮಾಲ್ಯವಂತ ಬೆಟ್ಟ, ಹೇಮಕೂಟ, ಅಂಜನಾದ್ರಿ ಬೆಟ್ಟ ಸೇರಿದಂತೆ ಹಲವು ಪ್ರಕೃತಿ ಸೌಂದರ್ಯದ ತಾಣಗಳು ಹಂಪಿಯ ಸುತ್ತಮುತ್ತಲಿವೆ. ಅಲ್ಲದೆ ಇವುಗಳನ್ನು ಪರಿಚಯಿಸಲೆಂದೇ ಇತ್ತೀಚೆಗೆ ಹಲವು ಪ್ರವಾಸಿ ಸಂಸ್ಥೆಗಳು ಹುಟ್ಟಿಕೊಂಡಿವೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications